ಭಾರತದ ದಕ್ಷಿಣ ಪ್ರಸ್ಥಭೂಮಿಯ ಮೇಲಿರುವ ಬೆಂಗಳೂರು ಸಮುದ್ರಮಟ್ಟದಿಂದ ಮೂರು ಸಾವಿರ ಅಡಿಗೂ ಕೊಂಚ ಮೇಲಿರುವುದರಿಂದ ಇಲ್ಲಿ ಕೊಂಚ ಕಾಲ ವಾಸ ಮಾಡಿದ ಯಾವನೂ ಇಲ್ಲಿನ ಆಪ್ಯಾಯಮಾನ ಹವಾಗುಣದಿಂದಾಗಿ ಈ ಊರನ್ನು ಎಂದಿಗೂ ಮರೆಯುವುದಿಲ್ಲ ಅಷ್ಟು ಸೆಖೆಯೂ ಇಲ್ಲದ ಅಷ್ಟು ಚಳಿಯೂ ಇಲ್ಲದ ಈ ಊರಿನ ಚಳಿಗಾಲದ ಮಂಜು ಕವಿದ ಮುಂಜಾವುಗಳೂ ವರ್ಣರಂಜಿತ ಸಂಜೆಗಳೂ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಬೇಸಗೆಯಲ್ಲಿ ಸಹ ನಡು ಮಧ್ಯಾಹ್ನ ಬಿಟ್ಟರೆ ಮಿಕ್ಕೆಲ್ಲಾ ಕಾಲವೂ ತಣ್ಣಗಿರುತ್ತದೆ. ಹಾಗಾಗಿ ಮಳೆಯೂ ಹೆಚ್ಚಿಲ್ಲದ, ಬಿಸಿಲೂ ಹೆಚ್ಚಿಲ್ಲದ, ಚಳಿಯೂ ಹೆಚ್ಚಿಲ್ಲದ ಹವಾ ನಿಯಂತ್ರಿತ ಊರು ಇದು. ಕನ್ನಡ ಭಾಷೆಯ ‘ಬೆಂಗಾಳು ಊರು’ ಎನ್ನುವ ಪದವೇ ಇಂಗ್ಲಿಷಿನವರ ಬಾಯಲ್ಲಿ ‘ಬ್ಯಾಂಗಲೂರ್’ ಆಗಿರುವುದು ಬೆಂಗಳೂರು ಎನ್ನುವ ಪದದ ಅರ್ಥ ‘ಕಾಳುಗಳ ಊರು’ ಎಂದು. ಇಲ್ಲಿ ದೊರೆಯುವ ತಾಜಾ ವಿದೇಶೀ ಮತ್ತು ಸ್ವದೇಶೀ ತರಕಾರಿಗಳನ್ನು ತಿಂದವರೆಲ್ಲರೂ ಈ ಊರಿನ ಅನ್ವರ್ಥ ನಾಮವೇ ಅಂಕಿತ ನಾಮವಾಗಿರುವುದನ್ನು ಅರಿಯುತ್ತಾರೆ
Ebook
ಕಾಡಿನ ಕಥೆಗಳು-ಭಾಗ ೪ ಮುನಿಶಾಮಿ ಮತ್ತು ಮಾಗಡಿ ಚಿರತೆ
Author: K P Poornachandra Tejasvi
₹75.00 Original price was: ₹75.00.₹72.00Current price is: ₹72.00.
About this Ebook
Information
Additional information
Author | |
---|---|
Publisher | |
Category | |
Language | Kannada |
Book Format | Ebook |
Reviews
Only logged in customers who have purchased this product may leave a review.
Customers also liked...
ಬೇಟೆಯ ನೆನಪುಗಳು
₹150.00Original price was: ₹150.00.₹90.00Current price is: ₹90.00.ಸ್ಪೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪ
₹70.00Original price was: ₹70.00.₹42.00Current price is: ₹42.00.ಬೇಟೆಯ ಉರುಳು
₹150.00Original price was: ₹150.00.₹90.00Current price is: ₹90.00.ಎಷ್ಟು ಕಾಡತಾವ ಕಬ್ಬಕ್ಕೀ…
₹130.00Original price was: ₹130.00.₹78.00Current price is: ₹78.00.
Reviews
There are no reviews yet.