ನವಕರ್ನಾಟಕ ೬ ದಶಕದಿಂದ ಕನ್ನಡ ಸಾಹಿತ್ಯ ಸೇವೆ ಮಾಡುತ್ತಿರುವ ಪ್ರಕಾಶನ ಸಂಸ್ಥೆ. ಈಗಾಗಲೇ ನವಕರ್ನಾಟಕ ಪ್ರಕಾಶನ ೫೫೦೦ ಪುಸ್ತಗಳನ್ನು ಓದುಗರಿಗೆ ಪರಿಚಯಿಸಿದೆ.
- -10%
ಸಾರ್ಥಕತೆಯ ಸಾಧಕ ಸರ್ವಜ್ಞ
0Original price was: ₹25.00.₹22.50Current price is: ₹22.50.ಸರ್ವಜ್ಞನದು ವಿಲಕ್ಷಣವಾದ, ವಿಶಿಷ್ಟವಾದ ವ್ಯಕ್ತಿತ್ವ. ಅವನ ಜೀವನಪ್ರೀತಿ ಅಸದೃಶ. ಹಾಗೆಯೇ ಅವನ ನಿಷ್ಠುರತೆ ಮತ್ತು ವ್ಯವಸ್ಥೆಯನ್ನು ವಿರೋಧಿಸುವ ಪರಿ ಅನನ್ಯ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಇಷ್ಟರ ಮಟ್ಟಿಗೆ ದಿಟ್ಟತನ, ಸ್ವಾತಂತ್ರ್ಯ ಹಾಗೂ ಮನೋಧೈರ್ಯವನ್ನು ವ್ಯಕ್ತಪಡಿಸುವ ಮತ್ತೋರ್ವ ಕವಿ ಸಿಗಲಾರ.
- -10%
ಸಾಮಾಜಿಕ ಕ್ರಾಂತಿಯ ಹರಿಕಾರ ಲೋಕರಾಜ ಸಯಾಜಿರಾವ ಗಾಯಕವಾಡ
0Original price was: ₹50.00.₹45.00Current price is: ₹45.00.ಪ್ರಜೆಗಳ ಬಗೆಗೆ ಕಳಕಳಿ, ಯೋಜನಾಬದ್ಧ ಆಡಳಿತ, ದೂರದೃಷ್ಟಿಯನ್ನೇ ವೈಶಿಷ್ಟ್ಯವಾಗಿಟ್ಟುಕೊಂಡ. ಅಂಥ ಅಪರೂಪದ ಬರೋಡೆಯ ಸಯಾಜಿರಾವ ಗಾಯಕವಾಡ ಮಹಾರಾಜರ ಚರಿತ್ರೆಯಿದು.
- -10%
ರಸಾಯನ ವಿಜ್ಞಾನದ ಸಾಮಾನ್ಯ ತತ್ವಗಳು
0Original price was: ₹125.00.₹112.50Current price is: ₹112.50.ರಸಾಯನ ವಿಜ್ಞಾನದ ಸಾಮಾನ್ಯ ತತ್ವಗಳು ಪದವಿ-ಪೂರ್ವ ಮತ್ತು ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ರಸಾಯನ ವಿಜ್ಞಾನದ ಮೂಲ ತತ್ವಗಳ ಸಮತೋಲ ಮತ್ತು ವಿಮರ್ಶಾತ್ಮಕವಾದ ವಿವರಗಳನ್ನು ಒದಗಿಸುತ್ತದೆ.
- -10%
ಪುನಶ್ಚೇತನ ಯೋಗದ ಹಾದಿ
0Original price was: ₹50.00.₹45.00Current price is: ₹45.00.ಡಾ||ಓಂಕಾರ್ ಅವರು ಸೂಚಿಸಿರುವ ವಿಧಾನಗಳು ಸರಳ ಹಾಗೂ ಸ್ಪಷ್ಟತೆಯಿಂದ ಕೂಡಿದ್ದು ಅನುಕರಣಯೋಗ್ಯವಾಗಿವೆ. ಈ ಪುಸ್ತಕದ ಮತ್ತೊಂದು ವಿಶೇಷವೆಂದರೆ, ಹೆಚ್ಚಿನ ದೈಹಿಕ ಶ್ರಮವನ್ನು ಸಹಿಸಲಾಗದ ಅಶಕ್ತರೂ ಹಾಗೂ ವಯಸ್ಸಾದವರೂ ಕೂಡ ಈ ವಿಧಾನಗಳಿಂದ ತಮ್ಮ ಸ್ವಾಸ್ಥ್ಯವನ್ನು ಸುರಕ್ಷಿತವಾದ ರೀತಿಯಲ್ಲಿ ಉತ್ತಮಪಡಿಸಿಕೊಳ್ಳಬಹುದು. ಆರೋಗ್ಯವಂತರೂ ಸಹ ಸ್ವಾಸ್ಥ್ಯ ರಕ್ಷಣೆಯನ್ನಷ್ಟೇ ಅಲ್ಲದೆ ತಮ್ಮ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಈ ಪುಸ್ತಕವನ್ನು ಅವಲಂಬಿಸಬಹುದು.
-ಡಾ||ಬಿ.ಎಸ್.ಶ್ರೀನಾಥ್ - -10%
ಪ್ರಾಚೀನ ಭಾರತ
0Original price was: ₹200.00.₹180.00Current price is: ₹180.00.ಈ ಸಚಿತ್ರ ಕೃತಿಯ ಲೇಖಕರಾದ ಪ್ರೊ|| ರಾಮ್ ಶರಣ ಶರ್ಮಾ ಪ್ರಖ್ಯಾತ ಭಾರತೀಯ ಇತಿಹಾಸ ಲೇಖಕರು. ಇದನ್ನು ಶ್ರೀ ಎನ್.ಪಿ.ಶಂಕರನಾರಾಯಣ ರಾವ್ ಸಮರ್ಥವಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇತಿಹಾಸ ಬೆಸೆದ ಕೊಂಡಿಗಳ ಮೂಲಕ ಇಂದಿನ ಆಗು-ಹೋಗುಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ, ಅಂತೆಯೇ ಭವಿಷ್ಯವನ್ನು ರೂಪಿಸುವುದಕ್ಕೆ ಇತಿಹಾಸದ ವಸ್ತುನಿಷ್ಠ ಅಧ್ಯಯನ ನೆರವಾಗುತ್ತದೆ.
- -10%
ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ?
0Original price was: ₹55.00.₹49.50Current price is: ₹49.50.ವಿದ್ಯಾರ್ಥಿಗಳೇ, ಪರೀಕ್ಷೆಯನ್ನು ಯಶಸ್ವಿಯಾಗಿ ಎದುರುಸುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ? ಇಲ್ಲಿವೆ ನೋಡಿ ಸರಳ-ಸುಲಭ ಉಪಾಯಗಳು.
- -10%
ನೂರು ಸಿಂಹಾಸನಗಳು
0Original price was: ₹55.00.₹49.50Current price is: ₹49.50.ಸಮಾಜದ ತೀರ ಹಿಂದುಳಿದ ವರ್ಗದಿಂದ ಬಂದು ಸಮಾಜ ಸುಧಾರಕರ ಆಶ್ರಯದಲ್ಲಿ ವಿದ್ಯೆ ಕಲಿತು ಸಿವಿಲ್ ಸರ್ವಿಸ್ ನಲ್ಲಿ ಉತ್ತೀರ್ಣಗೊಂಡ ಒಬ್ಬ ಐಎಎಸ್ ಅಧಿಕಾರಿಯ ವ್ಯಥೆಯ ಕಥೆ. ಎಂಥ ಪ್ರತಿಭಾವಂತನಿಗೂ ಅಂತಸ್ತು-ಜಾತಿಯ ಹೊಡೆತಗಳು ನಮ್ಮ ಸಮಾಜದಲ್ಲಿ ಬಲವಾಗಿ ಬೀಳುತ್ತವೆ ಎಂಬುದಕ್ಕೆ ಈ ಕಥನ ಸಾಕ್ಷಿ.
- -10%
ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ
0Original price was: ₹120.00.₹108.00Current price is: ₹108.00.ಉತ್ತಮ ಪರಿಸರ, ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಚಟುವಟಿಕೆಗಳು, ಪ್ರಾಣಾಯಾಮ, ಯೋಗ, ಸೃಜನಶೀಲ ಚಟುವಟಿಕೆಗಳು ನಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಬಲ್ಲವೇ? ಇಂತಹ ಅನೇಕ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳು ಈ ಪುಸ್ತಕದಲ್ಲಿವೆ.
- -10%
ನವೋದಯ ಆಚಾರ್ಯ ಬಿ.ಎಂ.ಶ್ರೀಕಂಠಯ್ಯ
0Original price was: ₹25.00.₹22.50Current price is: ₹22.50.ಬಿ.ಎಂ.ಶ್ರೀ. ಎಂದೇ ಪ್ರಖ್ಯಾತರಾದ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯನವರು ‘ಕನ್ನಡ ಬಾವುಟ’ ಎಂಬ ಕೃತಿಯಲ್ಲಿ ೭ನೆಯ ಶತಮಾನದಿಂದ ಹಿಡಿದು ಸಮಕಾಲೀನ ಕಾಲದವರೆಗೆ ಪ್ರಕಟವಾದ ಕನ್ನಡ ಭಾಷೆಯ ಹೆಮ್ಮೆಯ ಕವನಗಳನ್ನು ಶಾಸನಗಳು, ಪೂರ್ವಸಾಹಿತ್ಯ, ನಾಡಪದಗಳು ಮತ್ತು ಇಂದಿನ ಹೊಸ ಕವಿತೆ ಎಂದು ನಾಲ್ಕು ಭಾಗಗಳಲ್ಲಿ ಒಂದು ಅಪೂರ್ವ ಕೃತಿಯನ್ನು ಪ್ರಕಟಿಸಿದರು. ಕನ್ನಡ ಭಾಷೆಯ
ಮೇಲೆ ಅಭಿಮಾನವಿರುವ ಜನಸಾಮಾನ್ಯರಿಗಾಗಿ ‘ಅಣುಗ, ಕನ್ನಡ ಕಾವ, ಕನ್ನಡ ಜಾಣ’ ಎಂಬ ಪರೀಕ್ಷೆಗಳನ್ನು ಪರಿಷತ್ತಿನಲ್ಲಿ ಆರಂಭಿಸಿದರು. ಈಗ ಅಣುಗ ಪರೀಕ್ಷೆಯನ್ನು ನಡೆಸುತ್ತಿಲ್ಲ. ಆದರೆ ಕನ್ನಡ ರತ್ನ ಎನ್ನುವ ಪರೀಕ್ಷೆಯನ್ನು ನಡೆಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಕೇವಲ ‘ಪುರುಷಮಯ’ವಾಗಿದ್ದಾಗ, ಪರಿಷತ್ತಿನಲ್ಲಿ ಮಹಿಳಾಶಾಖೆಯನ್ನು ಡಿ.ಬಿಂದೂಬಾಯಿಯವರ ನೇತೃತ್ವದಲ್ಲಿ ಆರಂಭಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸಾರ್ವಜನಿಕ ವಿದ್ಯಾಪೀಠವಾಗಿ ಕನ್ನಡದ ಪುನರುತ್ಥಾನದಲ್ಲಿ ತೊಡಗಲು ಬಿ.ಎಂ.ಶ್ರೀಯವರು ನೀಡಿದ ಕೊಡುಗೆ ಬಹಳ ದೊಡ್ಡದು.