ಸುಮಾರು ಎಂಭತ್ತು-ತೊಂಬತ್ತು ವರ್ಷಗಳ ಹಿಂದೆ ಇಡೀ ರಾಷ್ಟ್ರವೇ ಸ್ವಾತಂತ್ರ್ಯಕ್ಕಾಗಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಒಂದಾಗಿ ಹೋರಾಡುತ್ತಿತ್ತು. ಈ ವಿಷಯದಲ್ಲಿ ಕರ್ನಾಟಕವೂ ಹಿಂದೆ ಬಿದ್ದಿರಲಿಲ್ಲ. ರಾಜಕೀಯದಷ್ಟೇ ಸಾಂಸ್ಕೃತಿಕವಾಗಿಯೂ ತನ್ನ ಹಿರಿಮೆಯನ್ನು ಕರ್ನಾಟಕ ಮೆರೆದಿತ್ತು. ಉತ್ತರ ಕರ್ನಾಟಕದಲ್ಲಿ ಅನೇಕ ಹಿರಿ-ಕಿರಿಯ ಲೇಖಕರು, ಬರಹಗಾರರು ತಮ್ಮ ಬರಹಗಳ ಮೂಲಕ ಜನ ಜಾಗೃತಿಯಲ್ಲಿ ತೊಡಗಿದ್ದರು. ದ.ರಾ. ಬೇಂದ್ರೆ ಪ್ರಮುಖರಲ್ಲಿ ಒಬ್ಬರು. ತಮ್ಮ ಸಮಾನ ಮನಸ್ಕರ ಜತೆ ಸೇರಿಕೊಂಡು ಗೆಳೆಯರ ಗುಂಪು ಸ್ಥಾಪಿಸಿದರು. ಈ ಗೆಳೆಯರ ಗುಂಪಿನ ಸಾಧನೆ ಇಂದಿಗೂ ಒಂದು ಇತಿಹಾಸ. ಸ್ವಲ್ಪೇ ದಿನ ಕಾರ್ಯ ವಹಿಸಿದರೂ ಗೆಳೆಯರ ಗುಂಪು ಸಾಂಸ್ಕೃತಿಕವಾಗಿ ಬಹು ದೊಡ್ಡ ಹೆಸರನ್ನು ಮಾಡಿತು. ಈ ಗುಂಪಿನ ಸದಸ್ಯರೆಲ್ಲ ನಂತರ ದಿನಗಳಲ್ಲಿ ಪ್ರಖ್ಯಾತ ಲೇಖಕರಾದರು. ಸಾಧನೆ ಇಲ್ಲಿಯೇ ನಿಲ್ಲಲಿಲ್ಲ. ದ.ರಾ. ಬೇಂದ್ರೆ ನಂತರದ ದಿನಗಳಲ್ಲೂ ನೂರಾರು ಲೇಖಕರಿಗೆ ಮಾರ್ಗದರ್ಶಕರಾದರು. ಸ್ವಧರ್ಮ ಮತ್ತು ಜಯ ಕರ್ನಾಟಕ ಪತ್ರಿಕೆಗಳು ಗೆಳೆಯರ ಗುಂಪಿನ ಪತ್ರಿಕೆಗಳು. ನಾಡ ಹಬ್ಬ ಆಚರಿಸಿದ ಹೆಮ್ಮೆ ಗೆಳೆಯರ ಗುಂಪಿಗೆ. ಈ ಎಲ್ಲ ಸಾಧನೆ, ಆದರ್ಶಗಳೇ ಮನೋಹರ ಗ್ರಂಥಮಾಲೆಯ ಸ್ಥಾಪನೆಗೆ ಕಾರಣವಾದವು.
ಸಮಾಹಿತ -ವಸಂತ ಸಂಚಿಕೆ-೨೦೧೮
Original price was: ₹100.00.₹48.00Current price is: ₹48.00.ಸಮಾಹಿತ-ಶಿಶಿರ ಸಂಚಿಕೆ ೨೦೧೮
Original price was: ₹100.00.₹48.00Current price is: ₹48.00.ಸಮಾಹಿತ-ಹೇಮಂತ ಸಂಚಿಕೆ ೨೦೧೮
Original price was: ₹100.00.₹48.00Current price is: ₹48.00.ಸಮಾಹಿತ-ವರ್ಷಾ ಸಂಚಿಕೆ-೨೦೧೭
Original price was: ₹100.00.₹50.00Current price is: ₹50.00.ಸಮಾಹಿತ-ಗ್ರೀಷ್ಮ ಸಂಚಿಕೆ ೨೦೧೭
Original price was: ₹100.00.₹50.00Current price is: ₹50.00.ಸಮಾಹಿತ-ವಸಂತ ಸಂಚಿಕೆ ೨೦೧೭
Original price was: ₹100.00.₹48.00Current price is: ₹48.00.ಸಮಾಹಿತ-ಹೇಮಂತ ಸಂಚಿಕೆ ೨೦೧೭
₹100.00ಸಮಾಹಿತ – ವರ್ಷ ಸಂಚಿಕೆ (೨೦೧೬)
Original price was: ₹100.00.₹50.00Current price is: ₹50.00.ಸಮಾಹಿತ- ವಸಂತ್ ಸಂಚಿಕೆ ೨೦೧೬
Original price was: ₹100.00.₹50.00Current price is: ₹50.00.ಸಮಾಹಿತ-ಶಿಶಿರ ಸಂಚಿಕೆ ೨೦೧೬
Original price was: ₹100.00.₹50.00Current price is: ₹50.00.