- -10%
ಯಯಾತಿ – ನಾಟಕ
0Original price was: ₹130.00.₹117.00Current price is: ₹117.00.ಯಯಾತಿ – ನಾಟಕ
ಇದು ಗಿರೀಶ ಕಾರ್ನಾಡ ರಚನೆಯ ನಾಟಕವಾಗಿದೆ.
- -10%
ಅಗ್ನಿ ಮತ್ತು ಮಳೆ
0Original price was: ₹110.00.₹99.00Current price is: ₹99.00.ಇದು ಗಿರೀಶ್ ಕಾರ್ನಾಡವರು ಬರೆದ ನಾಟಕವಾಗಿದೆ.ಶ್ರೀಯುತ ಗಿರೀಶ ಕಾರ್ನಾಡರು ೧೯೯೩ ರಲ್ಲಿ ಅಮೇರಿಕಾದ ಮಿನಿಯಾಪೋಲಿಸ್ ನಗರದ ಗಥ್ರೀ ಥಿಏಟರ್ ನಾಟ್ಯ ಸಂಸ್ಥೆಯವರಿಗಾಗಿ ಬರೆದ ನಾಟಕ.
- -10%
ಕಥನ ಕಾರಣ
0Original price was: ₹350.00.₹315.00Current price is: ₹315.00.ಕಥನ ಕಾರಣ –
(ಎಪ್ಪತ್ತು ಆಧುನಿಕ ಕನ್ನಡ ಸಣ್ಣಕತೆಗಳ ವಿಶ್ಲೇಷಣೆ)ಈ ಪುಸ್ತಕದಲ್ಲಿ ೭೦ ಬೇರೆ ಬೇರೆ ಲೇಖಕರ ಲೇಖನಗಳಿವೆ. ಇವು ಪತ್ರಿಕೆಯ ಸಾಪ್ತಾಹಿಕದಲ್ಲಿ ಓದಿ ಮರೆಯುವ ಲೇಖನಗಳಲ್ಲ . ಆಗಾಗ ಮತ್ತೆ ಮತ್ತೆ ಓದಿ ಮಥನ ಮಾಡಿಕೊಳ್ಳಬೇಕಾದ ಲೇಖನಗಳು. ಯಾವುದೇ ಸಾಹಿತ್ಯಿಕ ಓದು ಸಮಕಾಲೀನ ಸಮಾಜ–ಸಂಸ್ಕೃತಿ–ರಾಜಕಾರಣವನ್ನು ಸಂಪೂರ್ಣವಾಗಿ ಹೊರಗಿಡುವಂತಿಲ್ಲ ಎಂಬ ಎಚ್ಚರವನ್ನು ಈ ಕೃತಿ ತಿಳಿಸುತ್ತದೆ.
- -10%
ಮಸುಕು ಬೆಟ್ಟದ ದಾರಿ
0Original price was: ₹300.00.₹270.00Current price is: ₹270.00.ಮಸುಕು ಬೆಟ್ಟದ ದಾರಿ :
ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಮೂಡುವ `ಮಸುಕು ಬೆಟ್ಟದ ದಾರಿ’ ಕಾದಂಬರಿ ತನ್ನ ವಸ್ತುವಿನಿಂದಾಗಿ ಅನನ್ಯವಾಗಿದೆ. `ಹೈಪರ್ ಥೈಮೆಸ್ಟಿಕ್ ಸಿಂಡ್ರೋಮ್’ ಎಂಬ ವಿಚಿತ್ರ, ಅತಿ ಅಪರೂಪದ ಮಿದುಳಿನ ಲಕ್ಷಣದ ಹುಡುಗ ನಿರಂಜನ ಇಲ್ಲಿನ ನಾಯಕ. ಮೆದು ಮನಸ್ಸು, ಸರಳ ಸೌಜನ್ಯದ ಪೊಲೀಸ್ ಕಾನ್ಸ್ಟೇಬಲ್ ರಾಜೀವ ಈತನ ತಂದೆ. ತಂದೆಯಾಗಿ ಮಗನನ್ನು ಜೀವನದಲ್ಲಿ ನಿಲ್ಲಿಸಲು ಆತ ಪಡುವ ಪಡಿಪಾಟಲು ಮೊದಲ ಭಾಗದಲ್ಲಿದೆ. ನಿರಂಜನನ ಎಲ್ಲ ನೆನಪುಗಳೂ ಶಾಶ್ವತ, ಭಾವನೆಗಳ ಸಮೇತ. ಇತರರಲ್ಲಿ ಇರುವಂತೆ ಶಾಶ್ವತ ನೆನಪು ಹಾಗೂ ತಾತ್ಕಾಲಿಕ ನೆನಪು ಎಂಬ ಭಾಗಗಳಿಲ್ಲ, ಕ್ರಮೇಣ ಮರೆತು ಹೋಗುವುದೂ ಇಲ್ಲ. ನಿಯಂತ್ರಣ ಕೂಡ ಇಲ್ಲದ ನೆನಪುಗಳ ಪ್ರವಾಹದಲ್ಲಿ ಸಿಕ್ಕಿಕೊಳ್ಳುವ ನಿರಂಜನ ಶಾಲೆಯಲ್ಲಿ ತುಂಬ ಹಿಂದೆ ಬೀಳುತ್ತಾನೆ. ಬೆಂಗಳೂರು ನಿಮ್ಹಾನ್ಸ್ ಡಾಕ್ಟರರು ಅವನ ಕಾಯಿಲೆಯನ್ನು ಸರಿಯಾಗಿ ನಿದಾನ ಮಾಡುತ್ತಾರಾದರೂ, ಪರಿಹಾರ ಅವರಿಗೂ ತಿಳಿಯದು. ನಿರಂಜನನ ತಾಯಿ ಸತ್ತದ್ದು, ರಾಜೀವ ಮರುಮದುವೆ ಆಗದಿರುವುದು, ಅವರ ನೆಂಟರುಗಳ ವಿವರ ಅವನ ಕೌಟುಂಬಿಕ ಹಿನ್ನೆಲೆಯನ್ನು ನೀಡುತ್ತದೆ.
- -10%
- -10%
ತಲೆದಂಡ
0Original price was: ₹130.00.₹117.00Current price is: ₹117.00.ತಲೆದಂಡ :
ತಲೆದಂಡ ನಾಟಕದ ನಿಜವಾದ ವಸ್ತು ಸಾಮಾಜಿಕ ಹಾಗೂ ರಾಜಕೀಯ ಕ್ರಾಂತಿ ಹಾಗೂ ಈ ಕ್ರಾಂತಿಯ ವೈಫಲ್ಯದ ಒಂದು ಸ್ಥಿತಿ. ನಿಜವಾದ ಕ್ರಾಂತಿ ಕೊನೆಯಿಲ್ಲದ ಒಂದು ಪ್ರತಿಕ್ರಿಯೆಯಾಗಿರುವುದರಿಂದ ಹಾಗೂ ಅದರ ಪರಿಣಾಮಗಳು ದೂರಗಾಮಿಯಾಗಿರುವುದರಿಂದ ಸೋಲು ಅದರ ಒಂದು ಅವಸ್ಥೆಯನ್ನು ಮಾತ್ರ ಸೂಚಿಸುತ್ತದೆ. ತಾನು ಹುಟ್ಟು ಹಾಕಿದ ಕ್ರಾಂತಿ ಒಂದಿಲ್ಲೊಂದು ದಿನ ಯಶಸ್ವಿಯಾಗುತ್ತದೆ ಎಂದು ಬಸವಣ್ಣ ನಂಬಿದ್ದಾನೆ. ಒಂದು ದಿವಸ ಈ ವರ್ಣಾಶ್ರಮ ಧರ್ಮ ಈ ಜಾತಿ ವ್ಯವಸ್ಥೆ ಇವೆಲ್ಲ ಅಳಿದು ಹೋಗುತ್ತವೆ. ಈ ಮಾತು ವೀರಶೈವ ಶರಣರ ಕ್ರಾಂತಿಗೂ ಅನ್ವಯಿಸುವಂತದು. ನಾಟಕ ಕ್ರಾಂತಿಯ ಸ್ವರೂಪ ಹಾಗೂ ಅದರ ಸೋಲು ಗೆಲುವುಗಳಿಗೆ ಕಾರಣವಾದ ಸಾಮಾಜಿಕ ಹಾಗೂ ರಾಜಕೀಯ ಶಕ್ತಿಗಳ ಶೋಧನವಾಗಿರುವುದರಿಂದ ಅದು ಸಾವ್ರತ್ರಿಕತೆಯನ್ನು ಪ್ರಸ್ತುತಪಡಿಸುತ್ತದೆ.
- -10%
ಬಾರೋ ಸಾಧನಕೇರಿಗೆ ಮತ್ತು ನಿಷ್ಕ್ರಿಯ ಘಾತಕಿ
0Original price was: ₹60.00.₹54.00Current price is: ₹54.00.ಬಾರೋ ಸಾಧನಕೇರಿಗೆ –
‘ಬಾರೋ ಸಾಧನಕೇರಿಗೆ… ಮತ್ತು ‘ನಿಷ್ಕ್ರಿಯ ಘಾತಕಿ’ ಎಂಬ ಬಾನುಲಿ ನಾಟಕಗಳನ್ನು ವಿಶೇಷವಾಗಿ ಆಕಾಶವಾಣಿಗೆಂದು ಬರೆದು ತೆಗೆದದ್ದು. ‘ನಿಷ್ಕ್ರಿಯ ಘಾತಕಿ’ ೨೦೧೦ರಲ್ಲಿ ಧಾರವಾಡ ಆಕಾಶವಾಣಿಯಿಂದ ಪ್ರಸಾರಗೊಂಡು ರಾಜ್ಯಮಟ್ಟದ ಆಕಾಶವಾಣಿ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿ, ಕೇಂದ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿತ್ತು.
ಸಧ್ಯದ ವಾತಾವರಣದಲ್ಲಿ ಎಲ್ಲರ ಮುಖ ಐ. ಟಿ. ಕ್ಷೇತ್ರದತ್ತ ಹಾಗೂ ಪಶ್ಚಿಮದ ದೇಶಗಳತ್ತ ಮುಖ ಮಾಡಿರುವಾಗ ದೇಶೀಯ ಆಕರ್ಷಣೆ ತನ್ನ ಕಳೆಯನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಹೇಗೆ ಮತ್ತೆ ಮಾತೃಭೂಮಿ ತನ್ನ ನಿರಂತರವಾದ ಸೂಜಿಗಲ್ಲಿನ ಆಕರ್ಷಣೆಯಿಂದ ಪರದೇಶಿಗಳಾದವರನ್ನು ತನ್ನ ಹತ್ತಿರ ಎಳೆದುಕೊಳ್ಳುತ್ತದೆ ಎಂಬ ವಸ್ತುವನ್ನಿಟ್ಟುಕೊಂಡು ಬರೆದ ನಾಟಕ ‘ಬಾರೋ ಸಾಧನಕೇರಿಗೆ । ಮರಳಿ ನಿನ್ನೀ ಊರಿಗೆ, ಬೇಂದ್ರೆಯವರ ಕವನದ ಸಾಲುಗಳ ಶೀರ್ಷಿಕೆಯಾಗಿಸಿಕೊಂಡು ಹೆಣೆದ ಪ್ರಾರಂಭದ ವಾಕ್ಯವನ್ನು ನಾಟಕ ಅರ್ಥಪೂರ್ಣವಾಗಿದೆ.
ಹಾಗೆಯೇ ‘ನಿಷ್ಕ್ರಿಯ ಘಾತಕಿ’ ಎಂಬ ನಾಟಕ ಜನಸಾಮಾನ್ಯರ ಅಲಿಪ್ತತೆ ಹೇಗೆ ಜೀವನದ ಸ್ವಾಸ್ಥ್ಯವನ್ನು ಹಾಳು ಮಾಡುವದಕ್ಕೆ ಕಾರಣವಾಗುತ್ತದೆ ಎಂಬುದನ್ನು ಮನನೀಯವಾಗಿ ನಿರೂಪಿಸುತ್ತದೆ. - -10%
- -10%
ಅಂಜುಮಲ್ಲಿಗೆ
0Original price was: ₹90.00.₹81.00Current price is: ₹81.00.ಅಂಜುಮಲ್ಲಿಗೆಯ ವಸ್ತು ಸಮಕಾಲೀನವಾದದ್ದು. ಕಾರ್ನಾಡ ಅವರು ಇಂಗ್ಲೆಂಡಿನಲ್ಲಿದ್ದು ನಡೆದ ಒಂದು ಸತ್ಯ ಸಂಗತಿ ಈ ನಾಟಕದ ವಸ್ತು ಎಂದು ಕಾರ್ನಾಡ ಅವರೇ ಸೂಚಿಸಿದ್ದಾರೆ. ಆದರೂ ಇತಿಹಾಸ ಮತ್ತು ಪುರಾಣಗಳಲ್ಲಿ ಅದರ ಬೀಜಗಳಿರುವುದನ್ನು ಅವರು ಉದ್ದೇಶಪೂರ್ವಕವಾಗಿ ನಮ್ಮ ಲಕ್ಷ್ಯಕ್ಕೆ ತಂದಿದ್ದಾರೆ. ಯಾಮಿನಿ ಹಾಗೂ ಅವಳ ತಮ್ಮ ಸತೀಶ ಇವರ ಸಮಸ್ಯಾತ್ಮಕ ಸಂಬಂಧ ಈ ನಾಟಕದ ವಸ್ತು. ಈಜಿಪ್ತಿನ ಅರಸು ಮನೆತನದಲ್ಲಿ ಸಹೋದರ ಸಹೋದರಿಯ ವಿವಾಹ ನಿಶಿದ್ಧವಾಗಿರಲಿಲ್ಲ. ಕ್ಲಿಯೋಪಾತ್ರ ತನ್ನ ಸಹೋದರನನ್ನೇ ಮದುವೆಯಾಗಿದ್ದಳು ಎಂದು ಹೇಳುವ ಮೂಲಕ ಯಾಮಿನಿ ಸತೀಶರ ಸಂಬಂಧದ ಮೇಲೆ ಕಾರ್ನಾಡ ಅವರು ಬೆಳಕು ಚೆಲ್ಲಿದ್ದಾರೆ.
- -10%
ತುಘಲಕ್
0Original price was: ₹130.00.₹117.00Current price is: ₹117.00.ತುಘಲಕ್ –
ದೃಶ್ಯ : ಒಂದು
(ಕ್ರಿ.ಶ. ೧೩೨೭)
(ದಿಲ್ಲಿಯ ಒಂದು ನ್ಯಾಯಾಲಯ. ನ್ಯಾಯಾಲಯದ ಹೊರಗೆ ಜನರು ನೆರೆದಿದ್ದಾರೆ. ಹೆಚ್ಚಾಗಿ ಎಲ್ಲರೂ ಮುಸಲ್ಮಾನರು.)
ಮುದುಕ ಏನಾಗುವದಿದೆಯೋ ಏನೋ ಈ ನಾಡಿಗೆ !
ತರುಣ ಏಕೆ ಅಜ್ಜಾ , ನಿನಗೆ ಯಾವುದರ ಚಿಂತೆ ಹತ್ತಿದೆ ಈಗ ?
ಮುದುಕ ಏನು ಚಿಂತೆಯೋ ಏನು ಮಣ್ಣೋ, ಜಮಾಲ. ಇಷ್ಟು ವರ್ಷ ಬಾಳಿ, ಇಷ್ಟೆಲ್ಲ ಅರಸರನ್ನು ನೋಡಿ ಆಯಿತು. ಈಗ ಕಣ್ಣು ಮುಚ್ಚುವ ದಿನಗಳಲ್ಲಿ ಹೀಗೆ ಕಳ್ಳನ ಹಾಗೆ ಕಾಜಿಯ ಎದುರಿಗೆ ಕೈಕಟ್ಟಿ ನಿಲ್ಲುವ ಅರಸನನ್ನು ನೋಡಬಹುದು ಎಂದು ಕನಸಿನಲ್ಲೂ ಎಣಿಸಿರಲಿಲ್ಲ ……………………………..