-
-40%
ತೇರು
0ತೇರು ಕೃತಿಯನ್ನು ನಾವು ನೀಳ್ಗತೆಯಂತೆಯೂ ನೋಡಬಹುದು. ಅಥವಾ ಅದನ್ನು ಒಂದು ಜಾನಪದ / ಜನಾಂಗಿಕ ಅಧ್ಯಯನದಂತೆಯೂ ನೋಡಬಹುದು.
ತೇರು ಕೃತಿಯೂ ಧರಮನಟ್ಟಿ ದೇಸಗತಿಯ ಸ್ಥಾಪನೆಯ ಕಾಲದಿಂದಲೇ ಪ್ರಾರಂಭ ವಾಗುತ್ತದೆ. ಹೊಸ ದೇಸಾಯಿ ಧರಮನಟ್ಟಿಯಲ್ಲಿ ತನ್ನ `ಮನೆ ದೇವರಾದ’ ವಿಠ್ಠಲನ ಒಂದು ಭವ್ಯ ದೇವಾಲಯವನ್ನು ಕಟ್ಟಿಸುತ್ತಾನೆ. ಹೊನ್ನ ಕಳಸದ, ಬೃಹತ್ ಕಲ್ಲಿನ ಚಕ್ರಗಳ, ಆ ದೇವಾಲಯದ ತೇರು ಇಡೀ ದೇಸಗತಿಯ ಪ್ರತಿಷ್ಠೆಯ ಸಂಕೇತ. -
-40%
ತಂದೆಯ ಕಣ್ಣಲ್ಲಿ ಪಂ. ಭೀಮಸೇನ ಜೋಶಿ
0ತಂದೆಯ ಕಣ್ಣಲ್ಲಿ ಪಂ. ಭೀಮಸೇನ ಜೋಶಿ
ಈ ಮನೋಹರ ಗ್ರಂಥಮಾಲೆ ೧೯೫೮ – ೬೦ ರಲ್ಲಿ ಗ್ರಂಥಮಾಲೆಯು ನಡೆದು ಬಂದ ದಾರಿ ಸಂಪುಟಗಳನ್ನು ಪ್ರಕಟಿಸಿತ್ತು. ಈ ವ್ಯಕ್ತಿಚಿತ್ರ ೩ ನೇ ಸಂಪುಟದಲ್ಲಿ ಪ್ರಕಟವಾಗಿತ್ತು.ಸುಮಾರು ೫೦ ವರ್ಷಗಳ ನಂತರ ಪಂ.ಭೀಮಸೇನ ಜೋಷಿಯವರು ಮುಗಿಲೆತ್ತರಕ್ಕೆ ಬೆಳೆದು “ಭಾರತ ರತ್ನ” ಪ್ರಶಸ್ತಿಯನ್ನು ಅಲಂಕರಿಸಿದ ಮೇಲೆ ಅವರ ಬಗ್ಗೆ ಸಾಕಷ್ಟು ಲೇಖನಗಳು ಪ್ರಕಟವಾಗತೊಡಗಿದವು. ಪಂ.ಭೀಮಸೇನ ಜೋಷಿಯವರು ೨೪ ಜನೇವರಿ ೨೦೧೧ ರಂದು ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಹೀಗಾಗಿ ಅವರಿಗೆ ಶ್ರದ್ಧಾಂಜಲಿ ರೂಪದಲ್ಲಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ. -
-40%
ಆಚಾರ್ಯ ಪ್ರಹಸನ ಮತ್ತು ಏನ್ ಹುಚ್ಚೂರೀ….
0ಆಚಾರ್ಯ ಪ್ರಹಸನ ಮತ್ತು ಏನ್ ಹುಚ್ಚೂರೀ….
ಆಚಾರ್ಯ ಪ್ರಹಸನ ಮತ್ತು ಏನ್ ಹುಚ್ಚುರೀ ಇವು ಎರಡು ನಾಟಕಗಳಾಗಿದ್ದು , ಇವೆರಡು ನಾಟಕಗಳಿಗೆ ಪ್ರೇರಣೆ ಫ್ರೆಂಚ್ ಪ್ರಹಸನಕಾರ ಮೊಲಿಯರನದ್ದು. ‘ಆಚಾರ್ಯ ಪ್ರಹಸನ’ವು ಮೋಲಿಯರನ ‘ಲೆ ತಾರ್ ತೂಫ್’ ನಾಟಕದಿಂದಲೂ. ‘ಏನ್ ಹುಚ್ಚೂರೀ….’ ನಾಟಕವು ‘ಬೂರ್ಜ್ವಾ ದಿ ಜಂಟಲ್ ಮನ್’ ನಾಟಕದಿಂದಲೂ ಪ್ರಭಾವಿತವಾಗಿವೆ. ಈ ಎರಡು ನಾಟಕಗಳನ್ನು ಅಭಿನಯಿಸುವುದು ಸುಲಭವಲ್ಲ. ನಾಟಕಕಾರ ಹಾಗೂ ನಿರ್ದೇಶಕರ ಮೇಲೆ ಕಲಾತ್ಮಕ ನಿರ್ಬಂಧ ಹೇರ ಬಲ್ಲ ಕೃತಿಗಳಿವು. -
-40%
ಹೂವು, ಒಡಕಲು ಬಿಂಬ ಮತ್ತು ಇತರ ನಾಟಕಗಳು
0ಹೂವು, ಒಡಕಲು ಬಿಂಬ ಮತ್ತು ಇತರ ನಾಟಕಗಳು:
“ಹೂವು, ಒಡಕಲು ಬಿಂಬ” ಗಿರೀಶ ಕಾರ್ನಾಡ ಅವರು ಗ್ರಂಥಮಾಲೆಗಾಗಿ ರಚಿಸಿದ ನಾಟಕಗಳ ಸಂಕಲನ. ಇದರಲ್ಲಿ ಹೂವು (ಭಾಷಣ ರೂಪಕ), ಒಡಕಲು ಬಿಂಬ (ನಾಟಕ), ಮಾನಿಷಾದ (ನಾಟಕ) ಮತ್ತು ಮಹೇಶ ಎಲಕುಂಚವಾರ ಅವರ ಎರಡು ಅನುವಾದಿತ ನಾಟಕಗಳು “ವಾಸಾಂಸಿ ಜೀರ್ಣಾನಿ” ಮತ್ತು “ಧರ್ಮ ಪುತ್ರ” ಸೇರಿವೆ. -
-40%
ಮುಖಾಂತರ
0ಮುಖಾಂತರ
‘ಮುಖಾಂತರ’ ಸಾವಧಾನದ ಲಯದಲ್ಲಿ ನಿರೂಪಿತವಾಗಿರುವ ಕಾದಂಬರಿ. ಇತ್ತೀಚೆಗೆ ಅಪರೂಪವಾಗುತ್ತಿರುವ ಈ ಲಯವೇ ಈ ಕಾದಂಬರಿಯ ಆಶಯ ಆಕೃತಿಯನ್ನು ರೂಪಿಸಿದೆ. ಹೀಗಾಗಿ ವೇಗಕ್ಕೆ ದಕ್ಕದ ಅನೇಕ ಸೂಕ್ಷ್ಮಗಳು ಈ ಕಾದಂಬರಿಯ ಬಂಧದಲ್ಲಿ ಸಹಜವೆಂಬಂತೆ ಸೇರಿಕೊಂಡಿವೆ. ದಟ್ಟ ಜೀವನಾನುಭವದ ಹೆಣಿಗೆಯಲ್ಲಿ ಸಿದ್ಧವಾಗಿರುವ ‘ಮುಖಾಂತರ’ದಲ್ಲಿ ಮೊಗಸಾಲೆಯವರು ಒಂದು ಕುಟುಂಬದ ಕತೆಯನ್ನು ಹೇಳುತ್ತಲೇ ನಾಡಿನ ಜಗತ್ತಿನ ವಿದ್ಯಮಾನಗಳನ್ನು ಹಾಸು ಹೊಕ್ಕಾಗಿ ಸೇರಿಸಿದ್ದಾರೆ. ಸ್ಥಳೀಯ ಸತ್ವವನ್ನು ಒಳಗೊಳ್ಳುತ್ತಲೇ ಜಾಗತಿಕ ಆಗು ಹೋಗುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ‘ಮುಖಾಂತರ’ದ ವಿಸ್ತಾರ ಬೆರಗು ಮೂಡಿಸುತ್ತದೆ.
ಸಂಬಂಧಗಳ ಜಟಿಲತೆ, ಸ್ತ್ರೀ ಜಗತ್ತಿನ ತಲ್ಲಣಗಳು, ಆಸ್ತಿ ಅಧಿಕಾರದ ದರ್ಪ, ಅಂತಃಕರಣ ಜಗತ್ತಿನ ಆರ್ದ್ರತೆ. ಜಾಗತೀಕರಣ ಕಬಂಧ ಬಾಹು, ಆಕಸ್ಮಿಕಗಳು ಬದುಕನ್ನು ರೂಪಿಸುವ ವಿಸ್ಮಯ, ವರ್ಗ ಸಂಘರ್ಷ ಅನಿಯಂತ್ರಿತ ಆಕರ್ಷಣೆಯ ಸ್ವರೂಪ. ಈ ಎಲ್ಲವನ್ನೂ ಮೀರಿದ ನಿರ್ಲಿಪ್ತತೆ ಹೀಗೆ ಹಲವು ನೆಲೆಗಳನ್ನು ಒಳಗೊಂಡಿದೆ. -
-40%
ಗಿರೀಶ ಕಾರ್ನಾಡ ಹಾಗೂ ಭಾರತೀಯ ರಂಗಭೂಮಿ
0ಗಿರೀಶ ಕಾರ್ನಾಡ ಹಾಗೂ ಭಾರತೀಯ ರಂಗಭೂಮಿ :
(ನಾಟಕಗಳ ವಿಮಶಾತ್ಮಕ ಅಧ್ಯಯನ)
ಕನ್ನಡದ ಹಿರಿಯ ಸ್ವೋಪಜ್ಞ ವಿಮರ್ಶಕರಲ್ಲಿ ಒಬ್ಬರಾದ ಡಾ.ಜಿ.ಎಸ್.ಅಮೂರ ಅವರು ಗಿರೀಶ ಕಾರ್ನಾಡರ ಬಾನುಲಿ ನಾಟಕ ‘ಮಾ ನಿಷಾದ’ ವೂ ಸೇರಿದಂತೆ ಎಲ್ಲ ಹನ್ನೆರೆಡು ನಾಟಕಗಳ ಕೂಲಂಕಷ ಅಧ್ಯಯನ ಕೈಗೊಂಡು ಈ ಕೃತಿಯನ್ನು ರಚಿಸಿದ್ದಾರೆ.
ಕಾರ್ನಾಡರ ನಾಟಕಗಳ ಮೇಲೆ ಇತಿಹಾಸ, ಪುರಾಣ, ವೇದ, ಪಾಶ್ಚಾತ್ಯ ಹಾಗು ಪೌರ್ವಾತ್ಯ ರಂಗಭೂಮಿಗಳ ನಾಟಕಕಾರ, ಸಮಕಾಲೀನ ಸಂದರ್ಭದ ಪ್ರೇರಣೆ ಪ್ರಭಾವಗಳನ್ನು ಈ ನಾಟಕಗಳ ಸಾಧ್ಯತೆ ಹಾಗೂ ಮಿತಿಗಳು ಇತ್ಯಾದಿಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿ ವಿಮರ್ಶಿಸಿದ್ದಾರೆ.
ಇದು ಕಾರ್ನಾಡರ ನಾಟಕಗಳ ಓದುಗರಿಗೆ, ವಿಶೇಷ ಅಧ್ಯಯನ ಮಾಡುವ ಅಭ್ಯಾಸಿಗಳಿಗೆ ದಿಕ್ಸೂಚಿಯಾಗಬಲ್ಲ ಅಪರೂಪದ ವಿಮರ್ಶಾತ್ಮಕ ಕೃತಿಯಾಗಿದೆ. -
-40%
ಯು. ಆರ್. ಅನಂತಮೂರ್ತಿ
0ಯು. ಆರ್. ಅನಂತಮೂರ್ತಿ
ವೈಚಾರಿಕತೆ ಹಾಗೂ ಸಾಹಿತ್ಯ :
ಅನಂತಮೂರ್ತಿಯವರು ನನ್ನ ಸಮಕಾಲೀನರಲ್ಲೇ ಅತ್ಯಂತ ಗಂಭೀರ ಮನೋಧರ್ಮದ ಲೇಖಕರು. ಬದುಕಿನ ಬಗ್ಗೆ, ಸಮಾಜದ ಬಗ್ಗೆ, ಮಾನವನ ದೈನಿಕ ಜೀವನದ ಬಗ್ಗೆ. ಅವನ ಭವಿತವ್ಯದ ಬಗ್ಗೆ ತಾವು ಅಭ್ಯಾಸ ಮಾಡಿದ್ದನ್ನು, ಗಾಢವಾಗಿ ಚಿಂತಿಸಿದ್ದನ್ನು ನಾಟ್ಯೀಕರಿಸುತ್ತ ವಿಚಾರವನ್ನೇ ಒಂದು ಜೀವಂತ ಅನುಭವದ ಪ್ರಭಾವಬೀರುವ ಸ್ಥಿತಿಗೆ ಒಯ್ದು ನಮಗೆ ಮುಟ್ಟಿಸುವ ಕಳಕಳಿಯ ಪ್ರಯತ್ನ ಇವರ ಸಾಹಿತ್ಯದ ಪ್ರಮುಖ ಲಕ್ಷ್ಯಗಳಲ್ಲೊಂದಾಗಿದೆ. ನಮ್ಮ ಪ್ರಜ್ಞೆಯನ್ನು ಹಿಗ್ಗಿಸುವಲ್ಲಿ ಸಾಹಿತ್ಯಕ್ಕಿರುವ ಮಹತ್ವದ ಪಾತ್ರವನ್ನು ಕುರಿತು ಇವರಿಗಿರುವ ಗಾಢವಾದ ಶ್ರದ್ಧೆಯೇ ಇವರು ಬರೆದ ಪ್ರತಿಯೊಂದು ನಮ್ಮ ಪ್ರೀತಿಗೆ, ಗೌರವಕ್ಕೆ ಪಾತ್ರವಾಗುವಂತೆ ಮಾಡುತ್ತದೆ. -
-40%
ತಂತ್ರಯೋನಿ
0ತಂತ್ರಯೋನಿ
‘ತಂತ್ರಯೋನಿ’ ಗ್ರಂಥ ತಂತ್ರದ ಶಾಸ್ತ್ರವನ್ನು ಕುರಿತು ವಿವರವಾಗಿ ಹೇಳುತ್ತದೆ. ತಂತ್ರ ಒಂದು ರಹಸ್ಯವಿದ್ಯೆ. ಈ ವಿದ್ಯೆಯನ್ನು ಗುರುವಿನಿಂದ ಪಡೆಯಲು ಶಿಷ್ಯ ಅಧಿಕಾರಿಯಾಗಿರಬೇಕು. ‘ಅಶಿಷ್ಯಾಯ ನ ದೇಯಂ’ ಎನ್ನುವದು ಇಂಥ ವಿದ್ಯೆಗಳಿಗೆ ಒಂದು ನಿಷೇಧವಾಕ್ಯ. ದೀಕ್ಷೆ, ಧ್ಯಾನ, ಜಪ, ಮಂತ್ರ ಮೊದಲಾದವುಗಳು ಕೂಡ ತಂತ್ರವಿದ್ಯೆಯ ಅಂಗಗಳಾಗಿರುವುದರಿಂದ ಅವುಗಳನ್ನು ಕುರಿತು ಸಾಕಷ್ಟು ವಿವರಗಳನ್ನು ಈ ಗ್ರಂಥದಲ್ಲಿ ನೀಡಲಾಗಿದೆ. -
-40%
ಹೊಳೆಮಕ್ಕಳು
0ಇದು ಬಿದರಹಳ್ಳಿ ನರಸಿಂಹಮೂರ್ತಿಯವರ ಕಾದಂಬರಿ.
-
-40%
ಸರದಿ
0ಸರದಿ
ಡಾ.ನಾ. ದಾಮೋದರ ಶೆಟ್ಟಿ ಅವರ ‘ಸರದಿ’ ಕಾದಂಬರಿಯು ಆಧುನಿಕತೆ ಮತ್ತು ಜಾಗತಿಕರಣದ ಪರಿಣಾಮವಾಗಿ ನಮ್ಮ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆ ಸಾಗುತ್ತಿರುವ ದಾರಿ ಎಲ್ಲೆಡೆಯೂ ಅಭಯಾಶ್ರಮದ ಕಡೆ ಚಲಿಸುತ್ತಿರುವ ದೃಶ್ಯಗಳನ್ನು ಚಿತ್ರಿಸುತ್ತದೆ. ಈ ಎಲ್ಲ ಸಂದರ್ಭಗಳಲ್ಲಿ ಆಶ್ರಮ ಸೇರುತ್ತಿರುವವರೆಲ್ಲಾ ಹೆಂಗಸರು ಮತ್ತು ತಾಯಂದಿರು ಎನ್ನುವುದು ವಿಶೇಷವಾದುದು. ಈ ಕಾದಂಬರಿಯು ಕುಟುಂಬ ಮತ್ತು ತಾಯಿಯನ್ನು ಕೇಂದ್ರವಾಗಿ ಇಟ್ಟುಕೊಂಡು ಈ ಕಾಲದ ಭಿನ್ನ ಅನನ್ಯತೆಗಳ ನಡುವಿನ ಸಂಘರ್ಷ ಮತ್ತು ಅದರಿಂದ ಸಂಭವಿಸುವ ನೋವು, ಅದನ್ನು ನಿವಾರಿಸಲು ಮಾಡುವ ಪ್ರಯತ್ನಗಳು – ಹೀಗೆ ಅನೇಕ ಸಂಗತಿಗಳನ್ನು ಚರ್ಚಿಸುತ್ತದೆ. -
-40%
ಅಂತರಂಗದ ಮೃದಂಗ
0ಅಂತರಂಗದ ಮೃದಂಗ
(ವೈಚಾರಿಕ ಪ್ರಬಂಧಗಳು)
ನರಹಳ್ಳಿಯವರ ಪ್ರಬಂಧಗಳದ್ದು ಸಾವಧಾನದ ವಿಲಂಬಿತ ನಡೆ ಆದುದರಿಂದ ಅದಕ್ಕೆ ದಕ್ಕುವ ಸೂಕ್ಷ್ಮಗಳು ಅಪರೂಪದವು. ಆಧುನಿಕ ಜೀವನದ ಬಿಕ್ಕಟ್ಟುಗಳ ಬಗ್ಗೆ ನರಹಳ್ಳಿಯವರ ಚಿಂತನೆಗಳು ಸ್ವಾನುಭವ ಅನುಸಂಧಾನದಿಂದಲೇ ತತ್ವೀಕರಣಗೊಳ್ಳುವುದರಿಂದ ಅಧೀಕೃತತೆಯ ಮುದ್ರೆಯನ್ನು ಅನಾಯಾಸವಾಗಿ ಪಡೆಯುತ್ತವೆ. ಲಲಿತ ಪ್ರಬಂಧಕ್ಕೆ ಬೌದ್ಧಿಕತೆಯ ಬೆನ್ನೆಲುಬು ದೊರಕಿಸಿದ್ದು ನರಹಳ್ಳಿಯವರ ಪ್ರಬಂಧಗಳ ವೈಶಿಷ್ಟ್ಯವಾಗಿದೆ. ಸಮಕಾಲೀನ ಜೀವನದ ಉಪಯೋಗಿ ದೃಷ್ಟಿಯ ಅವಸರ ಗತಿಗೆ ವಿಲಂಬಿತ ನಡೆಯ ಎದುರೀಜು ಹಾಕುವ ಪ್ರಬಂಧಗಳ ಚಿಂತನ ದ್ರವ್ಯ ಹೊಸ ನೆಲೆಯಲ್ಲಿ ಓದುಗ ಯೋಚಿಸುವುದನ್ನು ಒತ್ತಾಯಿಸುವಷ್ಟು ಸಮರ್ಥವಾಗಿವೆ. ಪ್ರಬಂಧಗಳ ಶೈಲಿ ಪು.ತಿ.ನ. ಅವರ ಪ್ರಬಂಧಗಳ ರಚನಾ ಕ್ರಮವನ್ನು ನೆನಪಿಸುವಂತಿವೆ. ಈ ಹೊತ್ತಿನ ಸಾಮಾಜಿಕ ಪಲ್ಲಟಗಳನ್ನು ಗಾಢವಾದ ವಿಶಾದದ ನೆಲೆಯಲ್ಲಿ ಹಿಡಿದಿಡುವ ಈ ಪ್ರಬಂಧಗಳು ನಿರ್ಭಾವುಕ ವೈಚಾರಿಕ ಪ್ರಬಂಧಗಳಿಗೆ ಸಮರ್ಥ ಪರ್ಯಾಯಗಳೆನಿಸುತ್ತವೆ.