- -40%
ಮಕ್ಕಳ ಮನೋಲೋಕ – ೧ ಹಕ್ಕಿಯ ಹೆಗಲೇರಿ
0Original price was: ₹90.00.₹54.00Current price is: ₹54.00.ಮಕ್ಕಳ ಮನೋಲೋಕ – ೧ ಹಕ್ಕಿಯ ಹೆಗಲೇರಿ
(ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಸನ ಮಾಲೆ )ನಾವು ಮಕ್ಕಳಿಗಾಗಿ ಮಾಡುವ ಎಲ್ಲ ಪ್ರಯತ್ನಗಳ ಅಂತಿಮ ಗುರಿ-ಮಕ್ಕಳ ಅರಳುವಿಕೆ. ಪರಿಸರ, ಸಂಸ್ಕಾರ, ಸಾಹಿತ್ಯ, ಕಲೆ ಇವುಗಳೆಲ್ಲಾ ಪೂರಕವಾಗಿದ್ದಾಗ ಮಾತ್ರ ಮಕ್ಕಳ ಪೂರ್ಣ ಮಾನಸಿಕ ವಿಕಸನ ಸಾಧ್ಯ. ವೃಷ್ಟಿಯಿಂದ ಸಮಷ್ಟಿ, ಪ್ರತಿಯೊಬ್ಬ ಮಗುವೂ ಶಕ್ತಿಯಾದಾಗಲೇ ರಾಷ್ಟ್ರದ ಬೆಳೆವಣಿಗೆ, ರಾಷ್ಟ್ರದ ಚಾರಿತ್ರ್ಯ, ರಾಷ್ಟ್ರದ ಸಾಮರ್ಥ್ಯ. ಈ ಪೂರ್ಣತ್ವಕ್ಕಾಗಿಯೇ ಸತತ ಅನ್ವೇಷಣೆ ಮತ್ತು ಪ್ರಯತ್ನಶೀಲತೆಯ ಅಗತ್ಯ.
ಯಾವ ಜೀವಿಯಲ್ಲೇ ಆಗಲಿ ಅದರ ಒಂದೊಂದು ವರ್ತನೆಗೆ ಸಂಬಂಧಪಟ್ಟಂತೆ ಒಂದೊಂದು ಮನೋವೃತ್ತಿ ಇರುತ್ತದೆ. ಮೂಕ ಪ್ರಾಣಿಗಳ ಮತ್ತು ಸಣ್ಣ ಮಕ್ಕಳ ಮನೋವೃತ್ತಿಯನ್ನು ನಡವಳಿಕೆ, ಹೇಳಿಕೆಗಳ ಮೂಲಕ ನಾವು ಊಹಿಸಿ ತಿಳಿಯಬೇಕೇ ಹೊರತು ನೇರವಾಗಿ ತಿಳಿಯುವುದು ಅಸಾಧ್ಯ. ಮಕ್ಕಳು ಬೆಳೆದು ಶಾಲೆಗೆ ಹೋಗಿ ಜ್ಞಾನ ಸಂಪಾದಿಸುವುದರ ಜೊತೆಗೆ ಅವರಿಗೆ ನೈತಿಕ ಬುನಾದಿಯಾಗಿ ಪ್ರಾಮಾಣಿಕತೆ, ಗುರು ಹಿರಿಯರಿಗೆ ಗೌರವ ತೋರಿಸುವುದು, ವಿನಯ ಶೀಲತೆ, ಶ್ರದ್ಧೆ, ಅಚ್ಚುಕಟ್ಟುತನ ಇವುಗಳನ್ನು ಕಲಿಸಿಕೊಟ್ಟು ಅವರ ಚಾರಿತ್ರ್ಯನಿರ್ಮಾಣ ಮಾಡುವ ಮನೋಶಿಕ್ಷಣದ ಅವಶ್ಯಕತೆಯೂ ಇದೆ. - -40%
- -40%
ಅರಮನೆ ಗುಡ್ಡದ ಕರಾಳ ರಾತ್ರಿಗಳು
0Original price was: ₹130.00.₹78.00Current price is: ₹78.00.ಪಶ್ಚಿಮಘಟ್ಟ ಎಂದರೇ ಮಿಸ್ಟರಿಗಳು ತುಂಬಿಕೊಂಡ ಪ್ರದೇಶ. ಅದರೊಳಗೇನಿದೆ ಎಂದು ಇಂದಿಗೂ ಸ್ಪಷ್ಟವಾಗಿಲ್ಲ. ಎಂದಿಗೂ ಆಗುವುದಿಲ್ಲ. ಅಷ್ಟು ನಿಗೂಢತೆ ಇದೆ ಅದರೊಳಗೆ. ಅದರ ಪಕ್ಕದಲ್ಲೇ ಹುಟ್ಟಿ ಬೆಳೆದವರಿಗೆ ಒಂದಿಷ್ಟು ಅದರ ಬಗ್ಗೆ ತಿಳಿದಿರುತ್ತದೆ. ಅಂದರೆ ಅಲ್ಲಿಯ ಪ್ರಾಣಿ-ಪಕ್ಷಿ, ವಾತಾವರಣ, ಕಾಡುದಾರಿಗಳ ಬಗ್ಗೆ ಒಂದಿಷ್ಟು ಅರಿತಿರುತ್ತಾರೆ ಅಷ್ಟೆ.
- -40%
ಮಕ್ಕಳೊಡನೆ ಆಟ-ಪಾಠ, ಒಡನಾಟ
0Original price was: ₹140.00.₹84.00Current price is: ₹84.00.ಮಕ್ಕಳೊಡನೆ ಆಟ-ಪಾಠ, ಒಡನಾಟ:
ಇದು `ನಮ್ಮ ಮಕ್ಕಳು ಆಟ-ಪಾಠ, ಒಡನಾಟ’ ಎಂಬ ಹೆಸರಿನಲ್ಲಿ ಪ್ರಸಿದ್ಧ ದಿನಪತ್ರಿಕೆ `ಪ್ರಜಾವಾಣಿ’ ಯಲ್ಲಿ ಬರೆದ ಮತ್ತೊಂದು ಲೇಖನ ಮಾಲೆ. ಮಕ್ಕಳಿಂದ ಆನಂದ ಪಡೆಯಬೇಕಾದರೆ ಚಿಕ್ಕ ಮಕ್ಕಳ ಹಾಗೂ ಹದಿ ಹರೆಯದವರ ಶಾರೀರಕ ಮತ್ತು ಮಾನಸಿಕ ಬದಲಾವಣೆಗಳ ಬಗ್ಗೆ ಹೆತ್ತವರೂ ತಿಳಿದಿರಬೇಕು. ಇಲ್ಲದಿದ್ದರೆ ಮಕ್ಕಳೇಕೆ ಹಾಗೆ ಆಡುತ್ತಾರೆ ಎಂದೇ ತಿಳಿಯುವುದಿಲ್ಲ. ಮಕ್ಕಳ ಗುಣ-ಸ್ವಭಾವಗಳಂತೆ ಮಕ್ಕಳ ಸಮಸ್ಯೆಗಳೂ ಹಲವು. ತಿಳಿದಷ್ಟೂ ಇನ್ನೂ ತುಂಬ ಬಾಕಿ ಉಳಿದಿದೆ ಎನ್ನುವಷ್ಟು! ಈಗಂತೂ ಗೊಂದಲ ಮತ್ತು ಕಗ್ಗಂಟಾಗಿರುವ ಮಕ್ಕಳನ್ನು ಬೆಳೆಸುವುದರ ಬಗ್ಗೆ, ಅವರ ವಿದ್ಯಾಭ್ಯಾಸದ ಬಗ್ಗೆ ಬರೆಯುವುದು ಕೂಡ ಕಷ್ಟ ಎನಿಸುತ್ತಿದೆ. ಏಕೆಂದರೆ ಬಹಳಷ್ಟು ಹೆತ್ತವರೆ ಮಕ್ಕಳ ಎದುರು ಆಧುನಿಕ ತಂತ್ರಜ್ಞಾನದ ದುರ್ಲಾಭ ಪಡೆಯುವ ವ್ಯವಸ್ಥೆ ಮಾಡಿ, ಕೈ ತುಂಬ ಹಣ ನೀಡಿ, ತಪ್ಪುದಾರಿಯಲ್ಲಿ ನಡೆಸಿ ತಮ್ಮದೇ ಸರಿ ಎಂದು ಭಾವಿಸಿ ಮತ್ತೆ ಅವರನ್ನು ದೂರುವುದು ಕಾಣುತ್ತಿದ್ದೇವೆ. ಹಾಗಾಗಿ ಮಕ್ಕಳ ಬಗ್ಗೆ ತಿಳಿದಷ್ಟೂ ಅದು ಕಮ್ಮಿಯೇ ಎನಿಸುತ್ತಿದೆ. ಆಧುನಿಕತೆ ಬೆಳೆಯುತ್ತಾ ತಂತ್ರಜ್ಞಾನದ ಅಭಿವೃದ್ಧಿಯೂ ಆಗಿ ದಿನನಿತ್ಯ ಎಂಬಂತೆ ಆಧುನಿಕ ವಸ್ತುಗಳೂ ಮಾರುಕಟ್ಟೆಗೆ ಬರುತ್ತವೆ. ಮಾರುವವರು ಅದರ ಪ್ರಯೋಜನದ ಬಗ್ಗೆ ಇನ್ನಿಲ್ಲದಷ್ಟು ಹೇಳಿ ಆಮಿಷ ಒಡ್ಡುತ್ತಾರೆ. ಆದರೆ ಅದರಿಂದಾಗುವ ತೊಂದರೆಗಳ ಬಗ್ಗೆ ಚಕಾರ ಎತ್ತುವುದಿಲ್ಲ. ತಿಳಿದುಕೊಳ್ಳುವ ಹಂಬಲವೂ ಕಮ್ಮಿ. ಏಕೆಂದರೆ ಅದು ಪ್ರತ್ಯಕ್ಷವಾಗಿ ಕಾಣದೆ ಪರೋಕ್ಷವಾಗಿ ಕಾಡುತ್ತದೆ. ಪ್ರತ್ಯಕ್ಷವಾದ ಸಂಗತಿಗಳೇ ಅರಿವಿಗೆ ಬಾರದಿರುವಾಗ ಇನ್ನು ಪರೋಕ್ಷವಾಗಿದ್ದನ್ನು ಅರಿಯುವುದು ಹೇಗೆ? ಸಮಸ್ಯೆಗಳು ಉಲ್ಬಣಿಸಿದಾಗಲೇ ಅದರ ಅರಿವಾಗುವುದು! ಅವೆಲ್ಲದರ ಅರಿವಿನೊಂದಿಗೆ ಉದ್ವೇಗ ರಹಿತವಾಗಿ ಮಕ್ಕಳನ್ನು ಬೆಳೆಸುತ್ತಾ ಅವರೊಡನೆ ಆಟೋಟಗಳಲ್ಲಿ ಭಾಗಿಯಾಗಿ ಅವರನ್ನು ಬೆಳೆಸುತ್ತಲೇ ಅದರ ಆನಂದ ಅನುಭವಿಸಬೇಕು. ಅವರ ಸಮಸ್ಯೆಗಳಿಗೂ ಉತ್ತರವಾಗಬೇಕು.
- -40%
ಮಕ್ಕಳ ಮನೋಲೋಕ -೩ ಗೆಲುವಿನ ಗುಟ್ಟು
0Original price was: ₹90.00.₹54.00Current price is: ₹54.00.ಮಕ್ಕಳ ಮನೋಲೋಕ -೩ ಗೆಲುವಿನ ಗುಟ್ಟು
(ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಸನ ಮಾಲೆ )
ನಾವು ಮಕ್ಕಳಿಗಾಗಿ ಮಾಡುವ ಎಲ್ಲ ಪ್ರಯತ್ನಗಳ ಅಂತಿಮ ಗುರಿ-ಮಕ್ಕಳ ಅರಳುವಿಕೆ. ಪರಿಸರ, ಸಂಸ್ಕಾರ, ಸಾಹಿತ್ಯ, ಕಲೆ ಇವುಗಳೆಲ್ಲಾ ಪೂರಕವಾಗಿದ್ದಾಗ ಮಾತ್ರ ಮಕ್ಕಳ ಪೂರ್ಣ ಮಾನಸಿಕ ವಿಕಸನ ಸಾಧ್ಯ. ವೃಷ್ಟಿಯಿಂದ ಸಮಷ್ಟಿ, ಪ್ರತಿಯೊಬ್ಬ ಮಗುವೂ ಶಕ್ತಿಯಾದಾಗಲೇ ರಾಷ್ಟ್ರದ ಬೆಳೆವಣಿಗೆ, ರಾಷ್ಟ್ರದ ಚಾರಿತ್ರ್ಯ, ರಾಷ್ಟ್ರದ ಸಾಮರ್ಥ್ಯ. ಈ ಪೂರ್ಣತ್ವಕ್ಕಾಗಿಯೇ ಸತತ ಅನ್ವೇಷಣೆ ಮತ್ತು ಪ್ರಯತ್ನಶೀಲತೆಯ ಅಗತ್ಯ.
ಯಾವ ಜೀವಿಯಲ್ಲೇ ಆಗಲಿ ಅದರ ಒಂದೊಂದು ವರ್ತನೆಗೆ ಸಂಬಂಧಪಟ್ಟಂತೆ ಒಂದೊಂದು ಮನೋವೃತ್ತಿ ಇರುತ್ತದೆ. ಮೂಕ ಪ್ರಾಣಿಗಳ ಮತ್ತು ಸಣ್ಣ ಮಕ್ಕಳ ಮನೋವೃತ್ತಿಯನ್ನು ನಡವಳಿಕೆ, ಹೇಳಿಕೆಗಳ ಮೂಲಕ ನಾವು ಊಹಿಸಿ ತಿಳಿಯಬೇಕೇ ಹೊರತು ನೇರವಾಗಿ ತಿಳಿಯುವುದು ಅಸಾಧ್ಯ. ಮಕ್ಕಳು ಬೆಳೆದು ಶಾಲೆಗೆ ಹೋಗಿ ಜ್ಞಾನ ಸಂಪಾದಿಸುವುದರ ಜೊತೆಗೆ ಅವರಿಗೆ ನೈತಿಕ ಬುನಾದಿಯಾಗಿ ಪ್ರಾಮಾಣಿಕತೆ, ಗುರು ಹಿರಿಯರಿಗೆ ಗೌರವ ತೋರಿಸುವುದು, ವಿನಯ ಶೀಲತೆ, ಶ್ರದ್ಧೆ, ಅಚ್ಚುಕಟ್ಟುತನ ಇವುಗಳನ್ನು ಕಲಿಸಿಕೊಟ್ಟು ಅವರ ಚಾರಿತ್ರ್ಯನಿರ್ಮಾಣ ಮಾಡುವ ಮನೋಶಿಕ್ಷಣದ ಅವಶ್ಯಕತೆಯೂ ಇದೆ. - -40%
ಸುಖ ಯಾರ ಸೊತ್ತು?
0Original price was: ₹100.00.₹60.00Current price is: ₹60.00.ಸುಖ ಯಾರ ಸೊತ್ತು?
(ವ್ಯಕ್ತಿತ್ವ ವಿಕಸನ)
ನಾವು ಸುಖವಾಗಿರಬೇಕೆಂಬ ಬಯಕೆ ಅತಿಯಾದಾಗ ನಮಗೇ ತಿಳಿಯದಂತೆ ಇನ್ನೊಬ್ಬರ ಸುಖವನ್ನು ಕಿತ್ತು ಮತ್ತೊಬ್ಬರ ಬದುಕನ್ನು ಮೂರಾಬಟ್ಟೆ ಮಾಡಿರುತ್ತೇವೆ. ಜಗತ್ತನ್ನು ಕಣ್ಣು ಬಿಟ್ಟು ನೋಡಿದರೆ ಹಾಗೆ ಮಾಡದೆಯೂ ಅಂದರೆ ಯಾರಿಗೂ ತೊಂದರೆ ಕೊಡದೆ, ಯಾರ ಬದುಕನ್ನೂ ಕಿತ್ತುಕೊಳ್ಳದೆಯೂ ನಾವು ಸುಖ ಪಡುವ ಎಲ್ಲಾ ದಾರಿಗಳೂ ನಮಗಿವೆ ಮತ್ತು ನಿಜವಾದ ಸುಖ ಅಡಗಿರುವುದು ಅದರಲ್ಲೇ ಎನ್ನುವುದೂ ತಿಳಿಯುತ್ತದೆ. ಅದಕ್ಕೆ ವಿದ್ಯೆ, ಬುದ್ಧಿ, ವಿವೇಚನೆ, ಹುಟ್ಟುಗುಣಗಳ ಸಹಕಾರ ಬೇಕು. ಜೊತೆಗೆ ಯಾವುದು ಸತ್ಯ, ಏನು ಮಾಡಿದ್ದರಿಂದ ಏನಾಗುತ್ತದೆ ಎಂಬ ಜಗತ್ತಿನ ನಿಯಮಗಳನ್ನು ಅರ್ಥಮಾಡಿಕೊಳ್ಳುವ ಹಂಬಲ ಬೇಕು. ಮನಸ್ಸು ಮಾಡಿದರೆ ಅವನ್ನೆಲ್ಲಾ ತಿಳಿಯುವ ಶಕ್ತಿ ನಮಗೇ ಇದೆ. ಅದು `ತಿಳಿದು ಮಾಡಿದರೆ ನಿನಗೇ ಸುಖ; ಇಲ್ಲದೆ ಇದ್ದರೆ ಮಾಡಿದ್ದನ್ನು ಅನುಭವಿಸು’ ಎಂದು ಸೃಷ್ಟಿಕರ್ತ ನಮಗೆ ಹಾಕಿದ ಒಂದು ಛಾಲೆಂಜ್! - -40%
ಜೇನುಕಲ್ಲಿನ ರಹಸ್ಯ ಕಣಿವೆ
0Original price was: ₹130.00.₹78.00Current price is: ₹78.00.ಜೇನುಕಲ್ಲಿನ ರಹಸ್ಯ ಕಣಿವೆ
(ಮಲೆನಾಡಿನ ರೋಚಕ ಕತೆಗಳು-೪)
ಕಾದಂಬರಿ
ಗಿರಿಮನೆ ಶ್ಯಾಮರಾವ್
ಈ ಪಶ್ಚಿಮಘಟ್ಟ ಅದ್ಭುತ, ರಮ್ಯ, ಅಪರೂಪದ ಜೀವ-ಸಸ್ಯಗಳ ತಾಣ. ಆದರೆ ಅದು ಸುತ್ತಲಿಂದ ಇಂಚಿಂಚಾಗಿ ನಶಿಸುತ್ತಿದೆ. ಬಹುಶಃ ನಮ್ಮ ಕಾಲ ಮುಗಿಯುವುದರೊಳಗೆ ಅದರ ಸಹಜ ಸೌಂದರ್ಯ ಮಾಸಬಹುದು. ಮುಂದಿನ ಪೀಳಿಗೆಯವರಿಗೆ ಅದರ ಮತ್ತೊಂದು ರೂಪವೇ ಕಾಣಲು ಸಿಗಬಹುದು. ಹಾಗಾಗುವ ಮೊದಲೇ ಅದರ ಒಂದೊಂದೇ ಮಗ್ಗುಲನ್ನು ಪ್ರತಿಯೊಂದು ಕಾದಂಬರಿಯಲ್ಲೂ ಪದರು ಪದರಾಗಿ ಬಿಚ್ಚಿಡುತ್ತಾ ಹೋಗುವ ಉದ್ದೇಶ ಇಲ್ಲಿದೆ. ಕೋಟ್ಯಂತರ ವರ್ಷಗಳಿಂದ ಅಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದ ವನ್ಯಜೀವಿಗಳ ಬದುಕು ಒಮ್ಮೆಲೇ ಈ ಶತಮಾನದಲ್ಲಿ ಘೋರವಾಗಿ ಜೀವಜಾಲದ ಸರಪಳಿ ಕಡಿಯುತ್ತಿದೆ. ಮಾಡಿದ ಕರ್ಮಗಳು ಬದುಕಿಗೆ ಮತ್ತೊಂದು ರೀತಿಯಲ್ಲಿ ಸುತ್ತಿಕೊಳ್ಳುತ್ತದಾ? ಅದು ಬೇಗ ಕಣ್ಣಿಗೆ ಕಾಣದಿದ್ದರೂ ಬದುಕನ್ನು ಆಳವಾಗಿ ನೋಡಿದಾಗ ಅಲ್ಲ ಎನ್ನಲು ಬರುವುದಿಲ್ಲ. `ಮಾಡಿದ್ದನ್ನು ಅನುಭವಿಸಲೇಬೇಕು’ ಎನ್ನುವುದು ಜಗತ್ತಿನ ನಿಯಮವೇ ಆಗಿರಬೇಕು. ಇವೆಲ್ಲದರ ಒಳನೋಟ ಈ ಕಾದಂಬರಿಯಲ್ಲಿದೆ.