-
-10%
ಶನಿಗೇಕೆ ಉಂಗುರ?
0ಈ ಕೃತಿಯು ಸೌರಮಂಡಲದ ಗ್ರಹಗಳಲ್ಲಿ ಒಂದಾದ ಶನಿಗ್ರಹದ ಕುರಿತಾಗಿದೆ. ಶನಿಗ್ರಹ ಎಲ್ಲ ಗ್ರಹಗಳಂತೆ ಏಕಿಲ್ಲ? ಅದು ಏಕೆ ತನ್ನ ಸುತ್ತ ಉಂಗುರ ಆಕಾರದ ರಚನೆಯನ್ನು ಹೊಂದಿದೆ? ಅದರ ವಿಶೇಷತೆ ಏನು? ಎಂಬುದರ ಕುರಿತಾಗಿ ಮಕ್ಕಳ ಕುತೂಹಲವನ್ನು ತಣಿಸುವ ಕೃತಿಯು ಇದಾಗಿದೆ.
-
-18%
ನಮಗೆ ಭಯವಾಗುವುದೇಕೆ?
0ಈ ಪುಸ್ತಕವು ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡುವ ವಿಜ್ಞಾನದ ಕಥನಗಳನ್ನು ಒಳಗೊಂಡಿದೆ.
-
-10%
ನಮಗೆ ಕನಸುಗಳು ಬೀಳುವುದೇಕೆ?
0ಅವಲಮೂರ್ತಿಯವರ ಈ ಕನಸುಗಳು ಬೀಳುವುದೇಕೆ ಕೃತಿಯು ಮಕ್ಕಳ ಜೊತೆ ದೊಡ್ಡವರಿಗೂ ಕುತೂಹಲಕಾರಿಯಾಗಿದೆ. ಮಕ್ಕಳನ್ನು ಚಿಂತನಶೀಲರನ್ನಾಗಿ ಮಾಡುವ ಹಾಗೂ ತಮ್ಮನ್ನು ಹೊಸ ಅವಿಷ್ಕಾರಗಳಿಗೆ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಇಂತಹ ಕೃತಿಗಳು ಪ್ರೇರಣೆಯಾಗುತ್ತವೆ.
-
-10%
ನಕ್ಷತ್ರಗಳೇಕೆ ಮಿನುಗುತ್ತವೆ?
0ನಕ್ಷತ್ರಗಳೆಂದರೇನು? ನಕ್ಷತ್ರಗಳು ಏಕೆ ಮಿನುಗುತ್ತವೆ? ಅವುಗಳ ಬೆಳಕಿನ ಮೂಲ ಯಾವುದು? ಎಂಬ ಹಲವಾರು ಪ್ರಶ್ನೆಗಳಿವೆ ಉತ್ತರ ಕಂಡುಕೊಳ್ಳುವಲ್ಲಿ ಈ ಕೃತಿಯು ಸಹಕಾರಿಯಾಗಿದೆ.
-
-10%
ಭಾರತವನ್ನು ಕುರಿತು ಮಾರ್ಕ್ಸ್
0ಈ ಪುಸ್ತಕವು ವಿಮರ್ಶಾತ್ಮಕ ಕೃತಿಯಾಗಿದೆ.
-
-10%
ಕೆಂಡ ಸಂಪಿಗೆ ಮತ್ತು ಇತರ ಚಿತ್ರಗಳು
0ಈ ಪುಸ್ತಕವು ಎಳೆಯರಲ್ಲಿ ಪರಿಸರ ಪ್ರೇಮ ಮೂಡಿಸುವ ಕುರಿತು ಕೆಲವು ಸೂಕ್ತ ಮಾಹಿತಿಗಳನ್ನು ಒಳಗೊಂಡಿದೆ.
-
-10%
ರಾಜಕೀಯ ಅರ್ಥಶಾಸ್ತ್ರದ ವಿಮರ್ಶೆಗೊಂದು ಕೊಡುಗೆ
0ಸರಕಿನ ಉತ್ಪಾದನೆ ಮತ್ತು ಬಳಕೆಯ ಕಾರಣಕ್ಕಾಗಿಯೇ ಸಾಮಾಜಿಕ ಸಂಬಂಧಗಳು ಏರ್ಪಡುತ್ತವೆ. ಇದು ಸಮಾಜ ರಚನೆಯ ಅತ್ಯಂತ ಮುಖ್ಯವಾದ ಬೀಜರೂಪಿ ಕಾರಣ. ಇದನ್ನು ಸರಿಯಾದ ವಿಧಾನದಲ್ಲಿ ಅರ್ಥಮಾಡಿಕೊಂಡರೆ ಆಗ ಇಡೀ ಸಮಾಜದ ದೇಹ, ದೇಹದ ಇತರೆ ಅಂಗಗಳು ಹಾಗೂ ಅದರ ಭಾವ, ಭಾವದ ಇತರೆ ಸ್ತರಗಳು ಇವು ಅರ್ಥವಾಗುತ್ತವೆ. ಆಗ ಸಮಾಜದ ಅಧ್ಯಯನ ಸಮಗ್ರವಾಗುತ್ತದೆ; ಪೂರ್ಣವಾಗುತ್ತದೆ. ಈ ಅಂಶವನ್ನು ಕಾರ್ಲ್ ಮಾರ್ಕ್ಸ್ ಅವರು ಈ ಮಹಾನ್ ಗ್ರಂಥದಲ್ಲಿ ಅತ್ಯಂತ ಖಚಿತವಾಗಿ ಅಧ್ಯಯನ ಮಾಡಿದ್ದಾರೆ, ಚರ್ಚಿಸಿದ್ದಾರೆ ಹಾಗೂ
ವ್ಯಾಖ್ಯಾನಿಸಿದ್ದಾರೆ. -
-10%
ಭಗವದ್ಗೀತೆ:ಒಂದು ಅವಲೋಕನ
0ಭಗವದ್ಗೀತೆಯು ಹುಟ್ಟಿಕೊಂಡ ಕಾಲದ ಚಾರಿತ್ರಿಕ ಸಂದರ್ಭ ಮತ್ತು ಒಲವು-ನಿಲುವುಗಳನ್ನು ಗೌಣವಾಗಿಸಕೂಡದು ಮತ್ತು ಅವುಗಳಿಂದ ಪ್ರತ್ಯೇಕಿಸಿ ನೋಡಬಾರದು ಎಂಬ ಸಂದೇಶವನ್ನು ಈ ಕೃತಿಯಲ್ಲಿ ಲೇಖಕರು ಸಾದ್ಯಂತವಾಗಿ ಕಟ್ಟಿಕೊಡುತ್ತಾರೆ. “ಗೀತೆಯು ಸಂಕೀರ್ಣ ತತ್ವಶಾಸ್ತ್ರ ಪ್ರಮೇಯ ಆಗರ” ಎನ್ನುವ ವಿದ್ವಾಂಸರ ಹೇಳಿಕೆಯನ್ನು ವಿಸ್ತರಿಸುತ್ತಲೇ, ಈ ಕೃತಿಯಲ್ಲಿರುವ ವಿರೋಧಾಭಾಸವನ್ನೂ ಬಯಲುಮಾಡುತ್ತಾರೆ.
-
-10%
ಜ್ಞಾನ ಪೀಠಕೆ ಮೆರುಗು ಕನ್ನಡದ ಬೆಡಗು
0ಈ ಪುಸ್ತಕವು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರ ಬಹುಕು ಬರಹಗಳನ್ನು ಒಳಗೊಂಡಿದೆ.
-
-10%
ಸಣ್ಣ ಸಂಗತಿ
0ಲೋಕ ಬದುಕಿನಲ್ಲಿ ಗೋಚರಿಸಿದ ಚಿಕ್ಕ ಎಳೆಯೊಂದನ್ನು ಆಯ್ದುಕೊಂಡು, ಅದರ ಸುತ್ತ ಬಲೆ ಹೆಣೆಯುವ ಜೇಡನಂತೆ ಅಥವಾ ಗೂಡುಕಟ್ಟುವ ರೇಷ್ಮೆಹುಳುವಿನಂತೆ ಚಿಂತನೆಯನ್ನು ಕಟ್ಟಲು ಇಲ್ಲಿ ಯತ್ನಿಸಿದೆ. ಹೀಗೆ ರೂಪುಗೊಂಡಿರುವ ಚಿಂತನೆಗಳಲ್ಲಿ ನೆನಪುಗಳಿವೆ, ವ್ಯಕ್ತಿಚಿತ್ರಗಳಿವೆ, ಶ್ರದ್ಧಾಂಜಲಿಗಳಿವೆ, ಪುಸ್ತಕ ವಿಮರ್ಶೆಗಳಿವೆ, ತಿರುಗಾಟದ ಅನುಭವಗಳಿವೆ, ವರದಿಗಳೂ ಇವೆ. ಎಲ್ಲವೂ ಲಹರಿ ರೂಪದಲ್ಲಿವೆ.
-
-10%
ಫ್ರಾನ್ಸ್ ನಲ್ಲಿ ಅಂತರ್ಯುದ್ಧ
0ಪ್ಯಾರಿಸ್ಸಿನ ಕಾರ್ಮಿಕರು ೧೮೭೧ರ ಮಾರ್ಚ್ ೧೮ರಂದು ತಮ್ಮ ನಗರವನ್ನು ಆಳುತ್ತಿದ್ದ ಬಂಡವಾಳಶಾಹಿಗಳನ್ನು ಓಡಿಸಿ, ೧೦ ದಿನಗಳಲ್ಲಿ ಸ್ಥಾಪಿಸಿದ ಕಾರ್ಮಿಕರ ಆಡಳಿತವನ್ನು “ಪ್ಯಾರಿಸ್ ಕಮ್ಯೂನ್” ಎಂದು ಕರೆದರು. “ಪ್ಯಾರಿಸ್ ಕಮ್ಯೂನ್” ಜಗತ್ತಿನಲ್ಲೇ ಮೊದಲ ಕಾರ್ಮಿಕರ ಪ್ರಭುತ್ವ ಮತ್ತು ಕ್ರಾಂತಿ ಎಂದೇ ಅದರೂ ಅದು ಇನ್ನೂ ಹಲವು ರೀತಿಯಲ್ಲಿ ಚಿರಂತನ ಮಹತ್ವವನ್ನು ಪಡೆದಿದೆ. “ಪ್ಯಾರಿಸ್ ಕಮ್ಯೂನ್” ಎಂಬ ಕಾರ್ಮಿಕರ ಕ್ರಾಂತಿಕಾರಿ ಪ್ರಭುತ್ವವು ಕೇವಲ ೭೨ ದಿನಗಳ ಕಾಲ ಮಾತ್ರ ಬಾಳಿತಾದರೂ, ಅದು ತನ್ನ ಸಾಧನೆ-ವೈಫಲ್ಯಗಳು ಬಲ-ದೌರ್ಬಲ್ಯಗಳು ಎರಡರಿಂದಾಗಿಯೂ ಆ ನಂತರದ ಕಾರ್ಮಿಕ ಪ್ರಭುತ್ವ ಮತ್ತು ಕ್ರಾಂತಿಗಳಿಗೆ ಸ್ಫೂರ್ತಿಯ ಚಿಲುಮೆಯೂ ದಾರಿದೀವಿಗೆಯೂ ಆಯಿತು. ಮಾರ್ಕ್ಸ್-ಏಂಗೆಲ್ಸ್ ಕಮ್ಯೂನಿನ ಹೋರಾಟಕ್ಕೆ ಸಕ್ರಿಯವಾದ ಭೌತಿಕ ಮತ್ತು ಸೈದ್ಧಾಂತಿಕ ಬೆಂಬಲ ಕೊಟ್ಟಿದ್ದಲ್ಲದೆ, ಅದರ ಅನುಭವವನ್ನು ಕ್ರೋಢೀಕರಿಸಿ ಮುಂದಿನ ಕ್ರಾಂತಿಗಳಿಗೆ ದಾರಿದೀವಿಗೆ ಆಗುವಂತೆ ಸಿದ್ಧಾಂತೀಕರಿಸಿದ ಕೃತಿ ಇದು.
-
-10%
ತತ್ವಶಾಸ್ತ್ರದ ದಾರಿದ್ರ್ಯ
0ಈ ಪುಸ್ತಕವು ಕಾರ್ಲ್ಸ್ ಮಾರ್ಕ್ಸ್ ಅವರ ವಿಮರ್ಶಾತ್ಮಕ ಕೃತಿಯಾಗಿದೆ.