-
ಸಮಾಹಿತ-ಹೇಮಂತ ಸಂಚಿಕೆ ೨೦೧೭
0ಸಮಾಹಿತ
(ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ)
ಹೇಮಂತ ಸಂಚಿಕೆ
ಸಂಪುಟ-೨ ಸಂಚಿಕೆ-೧
ಜನವರಿ – ಫೆಬ್ರವರಿ ೨೦೧೭ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಸಮಾಹಿತ
ಸಂಪಾದಕನ ಟಿಪ್ಪಣಿ…
ಕಾವ್ಯದ ಆತ್ಮ
ಪು. ತಿ. ನರಸಿಂಹಾಚಾರ್ಯರ ಕಾವ್ಯ ಮತ್ತು ಗದ್ಯ
ಸುಬ್ಬು ಹೊಲೆಯಾರ್ ಅವರ ಐದು ಕವಿತೆಗಳು
ಮಾಂತ್ರಿಕ ವಾಸ್ತವತೆಯ ಸ್ವರೂಪ
ರೂಪಾಂತರ
ಆನಂದ ಝುಂಜರವಾಡ ಅವರ ನಾಲ್ಕು ಕವಿತೆಗಳು
ಆಧುನಿಕತೆ ಎಂಬ ವಿಪರ್ಯಾಸ
ಸ್ವಾತಂತ್ರ್ಯ ಹೋರಾಟದ ಸುಂದರ ಕ್ಷಣ : ಮೌಲಾನಾ ಆಝಾದರ ವಿಚಾರಣೆ
ಅನುಪಮಾ ಪ್ರಸಾದ ಅವರ ಎರಡು ಕವಿತೆಗಳು
ಬೊರ್ರಾ ಗುಹೆಗಳು ಮತ್ತು ಅರಕು ಕಣಿವ
ಸೂಕ್ಷ್ಮತೆ ಮತ್ತು ಸಮಗ್ರತೆಯ ಸಮತೋಲನದ `ಅಪ್ರಮೇಯ’
ತಾವರೆ ಅರಳುವ ಸದ್ದು ಕೇಳಿಸಿಕೊಳ್ಳುವ ಅಕಿರ ಕುರೊಸಾವನ: ಕೆಲವು ನೆನಪುಗಳು…
ಸೋಮನಾಥ ಗೀತಯೋಗಿಯವರ ಎರಡು ಕವಿತೆಗಳು
ಅಗೆವಾಗ್ಗೆ – ಸಿಕ್ಕಿದ್ದು…
ನೆಲನಡುಗುವ ಸಮಯ -
-
-
-
-40%
ಕನ್ನಡ ವ್ಯಾಕರಣ
0ಕನ್ನಡ ವ್ಯಾಕರಣ
ಶೈಕ್ಷಣಿಕ ಅಭಿವೃದ್ಧಿಗೆ ಭದ್ರ ನೆಲೆಗಟ್ಟನ್ನು ಒದಗಿಸುವಂಥದ್ದು ಪ್ರಾಥಮಿಕ ಶಾಲಾ ಹಂತ. ನಂತರ ಪ್ರೌಢಶಾಲೆ ಕಾಲೇಜು ಘಟ್ಟಗಳಲ್ಲಿ ಭಾಷಾ ಅಭಿವೃದ್ಧಿ ಪೂರ್ಣತೆಯತ್ತ ಸಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂಗ್ಲೀಷ ಮಾಧ್ಯಮ ಶಾಲೆಗಳತ್ತ ಪಾಲಕರ ಒಲವು ಹೆಚ್ಚಾಗುತ್ತಿದೆ. ಇದರಿಂದಾಗಿ ಪ್ರಾಥಮಿಕ ಹಂತದಲ್ಲಿ ಪ್ರಾದೇಶಿಕ ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣದ ಮೂಲಜ್ಞಾನ ದೊರಬೇಕಾದಷ್ಟು ದೊರೆಯದೆ ಹೋಗುವದರಿಂದ ಇಂದು ಬಹುಪಾಲು ವಿದ್ಯಾರ್ಥಿಗಳ ಕನ್ನಡ ಓದು ಬರಹದ ಸ್ಥಿತಿಗತಿ ಅಷ್ಟಕ್ಕಷ್ಟೆ. ಅಷ್ಟೇ ಏಕೆ, ಪದವೀಧರರ ಕನ್ನಡ ಬರವಣಿಗೆ ಹೇಗಿರುತ್ತದೆಂಬುದು ಎಲ್ಲರ ಅನುಭವಕ್ಕೆ ಬಂದ ವಿಷಯ. ಇಂತಹ ಸಂದರ್ಭದಲ್ಲಿ ಐದರಿಂದ ಹತ್ತನೇ ತರಗತಿ ವರೆಗಿನ ಮಕ್ಕಳಿಗೆ ಕನ್ನಡ ವ್ಯಾಕರಣದ ಮೂಲ ಸ್ವರೂಪವನ್ನು ತಿಳಿಸಿ ಕೊಡುವ “ಕನ್ನಡ ವ್ಯಾಕರಣ” ಎಂಬ ಕೃತಿಯನ್ನು ಡಾ.ಜಯಶ್ರೀ ಎಸ್. ಮುದಿಗೌಡರರವರು ಹೊರತಂದಿದ್ದು ಅತ್ಯಂತ ಮಹತ್ವದ ವಿಷಯ. -
-40%
ಕೆಂಗುಲಾಬಿ
0ವೇಶ್ಯಾ ಜಗತ್ತಿನ ಅನಾವರಣ
ಅಂದಿನ ದೇವದಾಸಿಯರಿಂದ , ಇಂದಿನ ಕಾಲ್ ಗರ್ಲ್ಸ್ ವರೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಣ್ಣಿನ ಕುರಿತ ಹಾಗೆ ಬರೆದದ್ದು ಸಮುದ್ರದಷ್ಟಿದೆ. ಅದರಲ್ಲಿಯೂ ವೇಶ್ಯಾ ಸಮಸ್ಯೆಯ ಕುರಿತ ಹಾಗೇ ಬರೆಯದ ಲೇಖಕರೆ ಇಲ್ಲ ಎನ್ನುವಷ್ಟು ಸಾಹಿತ್ಯ ಬಂದಿದೆ. ಆದರೆ ಬರೆದವರೆಲ್ಲರ ಕಣ್ಣಲ್ಲಿ ಪಸೆಯಿರಲಿಲ್ಲವೆಂಬುದು ವಿಷಾದದ ಸಂಗತಿ. ಹೆಣ್ಣಿನ ದೇಹ ಸಂಬಂಧಿ ಸಂಗತಿಗಳ ಬಗ್ಗೆ ಇರುವ ಕೆಟ್ಟ ಕುತೂಹಲದಿನದ ಹೆಣ್ಣಿನ ಮನಸ್ಸನ್ನು ಮುಟ್ಟುವುದು ಸಾಧ್ಯವಾಗಲೇ ಇಲ್ಲ. ಇಡೀ ನಮ್ಮ ಬದುಕಿನುದ್ದಕ್ಕೂ ಹೆಣ್ಣು ಕಪ್ಪು, ಬಿಳುಪಿನ ಪಾತ್ರದಲ್ಲಿ ಕಾಣಿಸುತ್ತಿರುವ ಕಾರಣದಿಂದ ಸ್ತ್ರೀ ಲೋಕದಲ್ಲಿಯೇ ಪರಸ್ಪರ ಹಗೆತನ ಮನೆ ಮಾಡಿದೆ. ಗರತಿ, ಗಣಿಕೆ, ಗಯ್ಯಾಳಿ ಪಾತ್ರಗಳನ್ನು ಸೃಷ್ಟಿಸಿದ ವ್ಯವಸ್ಥೆಯನ್ನು ಅರ್ಥೈಸುವುದರಲ್ಲಿ ವಿಫಲರಾದ ಕಾರಣದಿಂದಲೇ ಇಂದಿಗೂ ವೇಶ್ಯಾ ಸಮಸ್ಯೆ ಕುರಿತು ಬರೆಯುವ, ಮಾತನಾಡುವ ಮಾತುಗಳಿಗೆ ಸಾಮಾಜಿಕ ನೈತಿಕ ಹೊಣೆಗಾರಿಕೆಯನ್ನು ಹೊರಲು ಆಗುತ್ತಿಲ್ಲ. ಅತ್ಯಂತ ಅಮಾನವೀಯ ಈ ಸಾಮಾಜಿಕ ಸಮಸ್ಯೆಯೊಳಗಿನ ಸಂಕಟ ಅರ್ಥವಾಗುತ್ತಿಲ್ಲವೆಂಬ ನೋವು ಕೈಬೆರಳೆಣಿಕೆಯ ಲೇಖಕರನ್ನಾದರೂ ಕಾಡಿದೆ ಎಂಬುದಕ್ಕೆ ಸಾಕ್ಷಿ ನೀಡುವಂತೆ ಕೆಲವು ಕೃತಿಗಳಾದರೂ ನಮ್ಮೆದುರಿಗಿವೆ. ಅಂತಹ ಕೃತಿಗಳ ಸಾಲಿಗೆ ಹನುಮಂತ ಹಾಲಿಗೇರಿಯ ‘ಕೆಂಗುಲಾಬಿ’ ಸೇರುತ್ತದೆ. -
-40%
ಗೋಡೆಗಳ ನಡುವೆ
0ಗೋಡೆಗಳ ನಡುವೆ
ವೈಯಕ್ತಿಕ ಅನುಭವಗಳ ಮೂಲಕ ಕಂಡುಕೊಂಡ ಸಂಗತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸಾಮಾಜಿಕ ವಿದ್ಯಮಾನಗಳ ಕುರಿತು ಬರೆದಿರುವ ಬರಹಗಳು. ಇಲ್ಲಿನ ಬರಹಗಳು ಪ್ರಜಾವಾಣಿ, ವಿಜಯವಾಣಿ, ಕನ್ನಡಪ್ರಭ, ಉದಯವಾಣಿ, ಗೌರಿ ಲಂಕೇಶ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಈ ಪುಸ್ತಕದಲ್ಲಿ ಬರುವ ಬರಹಗಳು ಈ ಕೆಳಗಿನಂತಿವೆ :
ಗೋಡೆಗಳ ನಡುವೆ
ನಾನೇಕೆ ಬರೆಯುತ್ತೇನೆ?
ಪೂರ್ವಗ್ರಹಗಳ ಪಾದಕ್ಕೆ ಮಾಧ್ಯಮ ಎರಗಬಹುದೇ?
ಪುಟ್ಟ ಹುಡುಗನ ಕಣ್ಣಲ್ಲಿ ನಾವು…?
ಆತ್ಮವಂಚನೆಯ ಸ್ವಚ್ಛ ಭಾರತ!
ಅಂಬೇಡ್ಕರ್ ಫೋಟೊ ಮತ್ತು ಅಸಹನೆಯ ಭಾವಚಿತ್ರ
ಬಣ್ಣದ ಬೆನ್ನೇರಿ…
ಹಸಿದವರ ಎದುರು ಹೊಟ್ಟೆ ತುಂಬಿದವರ ಪೌರುಷ
ಜಾತಿಯೂ… ಉದ್ಯೋಗದಾತರ ಮನಸ್ಥಿತಿಯೂ…
ಮಾನ ಮರ್ಯಾದೆಯ ಪರದೆ ಹಿಂದಿನ ದುಗುಡ
ಮೀಸಲಾತಿ ಬಲಾಢ್ಯರ ಪಾಲಾಗದಿರಲಿ
ಮೊಬೈಲೂ… ಕಾಣದ ಮುಖಗಳ ಕಾಟವೂ…
ಮೌಢ್ಯದ ಬೇರು ಸಡಿಲಗೊಳ್ಳುವುದೇ?
ಮುಖಪುಟದ ವಿಕೃತ ಮುಖಗಳು
ನೆಮ್ಮದಿ ಕಸಿದುಕೊಳ್ಳುವ ‘ಜನರೇಷನ್ ಗ್ಯಾಪ್’
ಜಯಂತಿ ಆಚರಿಸಿ ಸರ್ಕಾರ ಸಾಧಿಸಿದ್ದೇನು?
ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ ಮೂಡುವುದು ಅಪರಾಧವೇ?
ಬದುಕಲು ಧರ್ಮ ಬೇಕೆ? -
-40%
ಬೀಜದೊಳಗಣ ವೃಕ್ಷ
0ಬೀಜದೊಳಗಣ ವೃಕ್ಷ
ಶ್ರೀಮತಿ ಗೀತಾ ವಸಂತ ಅವರು ಬೇಂದ್ರೆ ಕಾವ್ಯದ ವಿರಾಟ್ ಸ್ವರೂಪದ ಬಗ್ಗೆ `ಬೀಜದೊಳಗಣ ವೃಕ್ಷ’ ಎಂಬ ಹೆಸರಿನಿಂದ ಅಧ್ಯಯನ ಗ್ರಂಥವೊಂದನ್ನು ಬರೆದು ಪ್ರಸ್ತುತ ಪಡಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಅವರು ತುಮಕೂರು ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧವನ್ನು ಸಲ್ಲಿಸಿ ಡಿ.ಲಿಟ್. ಪದವಿ ಪಡೆದಿದ್ದಾರೆ. ಅದನ್ನು ಓದುಗರಿಗೆ ಉಪಯೋಗವಾಗುವ ರೀತಿಯಲ್ಲಿ ಮಾರ್ಪಡಿಸಿ ಕೃತಿ ರಚಿಸಿದ್ದಾರೆ. -
-40%
ಶೋಕಚಕ್ರ
0ಶೋಕಚಕ್ರ
ಮಹಾತ್ಮಾ ಗಾಂಧಿಯವರ ಚಳವಳಕ್ಕೆ ಪ್ರಾರಂಭವಾದದ್ದು ೧೯೨೦ರಲ್ಲಿ . ೧೯೨೪ರಲ್ಲಿ ೨೦ ನಿಮಿಷಗಳ ವರೆಗೆ ಅವರ ಸಂದರ್ಶವನ್ನು ಪಡೆದಿದ್ದೆ. ರಾಜಕೀಯಕ್ಕಿಂತ ಸಾಮಾಜಿಕ, ಅದಕ್ಕಿಂತ , ಅಂತರಂಗಿಕ ಸುಧಾರಣೆ ಅಗತ್ಯ ಎಂಬುದನ್ನು ಆಗ ನಾನು ಕಲಿತುಕೊಂಡ ಪಾಠ.
ಸ್ವಾತಂತ್ರ್ಯ ಪ್ರಾಪ್ತಿಯ ತರುವಾಯ ನಾನು ಬಹಳ ಆಶೆಯಿಂದ ಪರಿಸ್ಥಿತಿಯನ್ನು ನೋಡುತ್ತಲಿದ್ದೆ. ಯಾವುದೊ ಒಂದು ಕಾರಣಕ್ಕೆ ರಾಜಕೀಯ ಸ್ವಾತಂತ್ರ್ಯದ ಅವಸರವಿದ್ದು ಮಹಾತ್ಮಾಜಿಯವರು ಅದಕ್ಕೆ ಪ್ರಾಶಸ್ತ್ಯವನ್ನು ಕೊಟ್ಟಿದ್ದರು. ಈಗ ಆ ಜಂಜಾಟ ಮುಗಿಯುತ್ತಲ್ಲ? ಸಾವಿರಾರು ವರ್ಷಗಳಿಗೊಮ್ಮೆ ಅವತರಿಸುವ ಭಗವಂತನ ಅಂಶದಂತಿದ್ದ ಮಹಾತ್ಮಾಜಿಯವರಿಂದ ನಿಜವಾದ- ಅಂತರಂಗಿಕ-ಸುಧಾರಣೆ ಜನತೆಯಲ್ಲಿ ಮೂಡುವುದಲ್ಲ? ಹೀಗೆ ಉತ್ಸಾಹಗೊಳ್ಳುತ್ತಿರುವಾಗ ಜನವರಿ ೩೦, ೧೯೮೯ರ ದುರ್ಘಟನೆ ನಡೆದುಹೋಯಿತು. “ಜಗತ್ತಿನ ದೀಪ ನಂದಿತು.”
ಈ ಸಂದರ್ಭದ ಹಿನ್ನಲೆಯಲ್ಲಿ ದೇಶದ ಚುನಾವಣಾ, ಸ್ಥಾನಿಕ ಮುಂದಾಳುಗಳ ಸಾಂಸ್ಕೃತಿಕ ಮಟ್ಟ ಇದನ್ನೆಲ್ಲ ನೋಡಿ ಮೂಡಿದ ಭಾವನೆಗಳೇ ಈ ‘ಶೋಕಚಕ್ರ ‘ ನಾಟಕದಲ್ಲಿ ಮೂಡಿದೆ. ಇಲ್ಲಿಯ ಆಯಾ ಪಾತ್ರಗಳೇ ಪರಿಸ್ಥಿತಿಯನ್ನು ಚನ್ನಾಗಿ ಚಿತ್ರಿಸುವುವು. -
-40%
ತೇಲಿ ಬಂದ ಎಲೆಗಳು
0ತೇಲಿ ಬಂದ ಎಲೆಗಳು
ದಿ. ಪಡುಕೋಣೆ ರಮಾನಂದರಾಯರ ‘ಹುಚ್ಚು ಬೆಳುದಿಂಗಳಿನ ಹೂಬಾಣಗಳು’ ಗ್ರಂಥಮಾಲೆಯ ಹಳೆಯ ಚಂದಾದಾರರಿಗೆ ಬಹಳ ಮೆಚ್ಚುಗೆಯಾದ ಕೃತಿ. ಅವರು ತಮ್ಮ ವೃದ್ಧಾಪ್ಯದಲ್ಲಿ ತಮ್ಮ ಮಗ-ಪ್ರಭಾಶಂಕರ-ಅವರ ಹತ್ತಿರವೇ ಇರುತ್ತಿದ್ದರು. ಮುಂಬಯಿ ಹಾಗೂ ಬೆಂಗಳೂರಲ್ಲಿ ವಾಸವಾಗಿದ್ದರು. ಆ ಕಾಲದಲ್ಲಿ ತಮ್ಮ ಸಂಪರ್ಕಕ್ಕೆ ಬಂದ ಲೇಖಕರ ಹಾಗೂ ಇತರ ಕಲಾವಿದರ ಜೊತೆಗಿನ ಅನುಭವಗಳನ್ನು ಬರೆದು ಇಟ್ಟಿದ್ದರು, ಅದನ್ನು ನಮಗೆ ಕಳಿಸುವ ಮೊದಲೇ ಅವರು ತೀರಿಕೊಂಡರು. ಅವರ ಮಗ-ಮಹೇಶ ಪಿ. ಪಡುಕೋಣೆಯವರು-ತಂದೆಯವರ ಹಸ್ತಪ್ರತಿಯನ್ನು ಶ್ರೀ ಜಯಂತ ಕಾಯ್ಕಿಣಿಯವರ ಮುಖಾಂತರ ಕಳುಹಿಸಿ, ಪ್ರಕಟಿಸಲು ಸಾಧ್ಯವೇ? ಎಂದು ಕೇಳಿದರು. ಗ್ರಂಥಮಾಲೆಯ ಚಂದಾದಾರರಿಗೆ ಈ ಕೃತಿಯನ್ನು ನೀಡಲು ಅತ್ಯಂತ ಸಂತೋಷವೆನಿಸುತ್ತದೆ. -
-40%
ಕಣ್ಣಾ ಮುಚ್ಚೆ…. ಕಾಡೇ ಗೂಡೇ….
0ಬಿ ಜಯಶ್ರೀ ಅವರಂತಹ ಶಕ್ತಿಯನ್ನು, ಸ್ವಾಭಿಮಾನಿಯನ್ನು, ಪ್ರತಿಭೆಯನ್ನು ಅಕ್ಷರಗಳಲ್ಲಿ ಬಂಧಿಸುವುದಾದರೂ ಹೇಗೆ? ನಾನು ಈ ಸವಾಲಿಗೆ ಮುಖಾಮುಖಿಯಾದಾಗಲೆಲ್ಲ ನನಗೆ ದೊಡ್ಡ ಬೆಂಬಲ ಮತ್ತು ಬೆನ್ನು ಚಪ್ಪರಿಸುವಂಥಾ ನಂಬಿಕೆಯ ಮಾತುಗಳು ಬಂದದ್ದು ಸ್ವತಃ ಜಯಶ್ರೀ ಅವರಿಂದ.