-
-40%
ಷೆಫೀಲ್ಡ್ ಕವಿತೆಗಳು
0ಷೆಫೀಲ್ಡ್ ಕವಿತೆಗಳು
ಎರಡು ವರ್ಷಗಳ ಹಿಂದೆ ನನ್ನ ಅಂತರಂಗ ಪ್ರವೇಶಿಸಿದ ಷೆಫೀಲ್ಡ್ ಈಗ ದ್ವಾದಶಪದಿ ಕವಿತೆಗಳ ರೂಪದಲ್ಲಿ ಆಕಾರಗೊಂಡು ಪ್ರಕಟಗೊಳ್ಳುತ್ತಿದೆ. ಗೆಳೆಯ ಬಿ ಆರ್ ಎಲ್ ಈ ಕವಿತೆಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಷೆಫೀಲ್ಡ್ ಕವಿತೆಗಳಲ್ಲದೆ ಅನೇಕ ಬಿಡಿ ಪದ್ಯಗಳೂ ಈ ಸಂಗ್ರಹದಲ್ಲಿ ಇವೆ. ಇವುಗಳಲ್ಲಿ ‘ಒಂದು ಸ್ವರದ ಹಿಂದೆ’ ಎಂಬ ಕವಿತೆ ಪಂಡಿತ್ ಪರಮೇಶ್ವರ ಹೆಗಡೆ ಅವರ ಮಧುವಂತಿಯನ್ನು ಕೇಳಿ ಮನಸ್ಸಿನ ಮೇಲೆ ಆದ ಪರಿಣಾಮಗಳನ್ನು ಚಿತ್ರಿಸುವಂಥದ್ದು. ಅದೊಂದು ವಿಶೇಷ ಅನುಭವ.
ಪ್ರಿಯ ಮಿತ್ರರಾದ ಟಿ. ಎಸ್. ಛಾಯಪತಿಯವರ ಸ್ನೇಹಮಯ ಒತ್ತಾಸೆಯಿಲ್ಲದೆ ಈ ಕವಿತೆಗಳ ಹಸ್ತಪ್ರತಿ ಸಿದ್ಧವಾಗುತ್ತಿರಲಿಲ್ಲ. ಕೃತಿಯನ್ನು ಸುಂದರವಾಗಿ ಹೊರತರುವಲ್ಲಿ ಅವರ ಪ್ರೀತಿ ಮತ್ತು ಸದಭಿರುಚಿ ವ್ಯಕ್ತಗೊಳ್ಳುತ್ತಾ ಇದೆ.ಅವರ ವಿಶ್ವಾಸಕ್ಕೆ ತುಂಬ ಆಭಾರಿಯಾಗಿದ್ದೇನೆ. ಮುಖಚಿತ್ರ ಮತ್ತು ಕೃತಿಯ ವಿನ್ಯಾಸ ನೋಡಿಕೊಂಡಿರುವ ಆತ್ಮೀಯ ಅಪಾರ, ಮುದ್ರಣ ಪ್ರತಿಯನ್ನು ಆಸ್ಥೆಯಿಂದ ಸಿದ್ಧಪಡಿಸಿರುವ ಪ್ರಿಯ ಮಿತ್ರ ಶ್ರೀಧರ ಮತ್ತು ಮುದ್ರಣದ ಜವಾಬುದಾರಿ ನಿರ್ವಹಿಸಿದ ಸ್ವಾನ್ ಕೃಷ್ಣಮೂರ್ತಿ ಅವರಿಗೆ ಋಣಿಯಾಗಿದ್ದೇನೆ. -
-40%
ಅಪರಂಜಿ ಫೆಬ್ರವರಿ ೧೯೮೮
0ಅಪರಂಜಿ ಫೆಬ್ರವರಿ 1988
ತಿಳಿನಗೆಯ ಕಾರಂಜಿ
ಸಂಪುಟ 5
ಸಂಚಿಕೆ 5ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಅಪರಂಜಿ ಫೆಬ್ರವರಿ 1988
ಅಪರಂಜಿ ಕಿಡಿ
ಬೆಂಗಳೂರು ಇಂದು-16
ಕೈಗಾ-ರಿಕೆಗಳಿಗೆ ಕೈಗಾ ಬೇಕೆ?
ಗಾದೆಗಳು
ಕವಿಗಳ ಪಾಡು ನಿಜಕ್ಕೂ ಕಷ್ಟ
ರಾಮಾನುಜನ್ – ಈಗ ಇದ್ದಿದ್ದರೆ
PANORAMA
ಮನೋವೈದ್ಯರಲ್ಲಿ
ಯಾತ್ರಿಕರ ಪತ್ರ
ಅಣಕು ಕವನಗಳು
ನಾಯಕನ ಪ್ರಲಾಪ
ಸಂಗೀತ ಕಛೇರಿ
ನಂ ಕ್ಲಬ್ಬಿನಲ್ಲಿ -
-40%
ತಾವರೆಯ ಬಾಗಿಲು
0‘ತಾವರೆಯ ಬಾಗಿಲು’ ಕಾವ್ಯ ಕುರಿತು 40 ಪ್ರಬಂಧಗಳ ಸಂಕಲನ
-
-40%
ಆಕಾಶ ಸೇತುವೆ
0ಆಕಾಶ ಸೇತುವೆ
(ಟಿಂಟರ್ನ್ ಅಬೆ ಮತ್ತು ಇತರ ಕವನಗಳು )
ಈಚೆಗೆ ಮಲೇಶಿಯಾಕ್ಕೆ ಹೋಗಿದ್ದೆ. ಲಂಕಾವಿ ಮಲೇಶಿಯಾದ ಒಂದು ಸುಂದರ ದ್ವೀಪ. ಪ್ರಕೃತಿಯ ಅಗಾಧತೆಯನ್ನು ಅರಿವಿಗೆ ತಂದುಕೊಳ್ಳಲು ಹೇಳಿ ಮಾಡಿಸಿದ ಜಾಗ. ಅಲ್ಲಿರುವ ಮ್ಯಾತ್ ಮ್ಯಾಂಚಿಂಗ್ ಚಾಂಗ್ ಪರ್ವತ ಶ್ರೇಣಿಯು ನಿಜಕ್ಕೂ ‘ಗಗನಚುಂಬಿ’ ಎಂಬ ಮಾತನ್ನು ನಮ್ಮ ಅನುಬೋಧೆಗೆ ತರುವಂಥದ್ದು. ದಟ್ಟ ಕಾಡಿಂದ ಹಚ್ಚ ಹಸುರಾಗಿ ಕಂಗೊಳಿಸುವ ಆ ನಿತ್ಯ ಹರಿದ್ವರ್ಣ ಪರ್ವತಪಂಕ್ತಿಯಲ್ಲಿ ಅಲ್ಲಲ್ಲಿ ಆಕಾಶಕ್ಕೆ ಎಟಕಾಯಿಸುವ ಮಹೋನ್ನತ ಪರ್ವತ ಶೃಂಗಗಳಿವೆ. ಅಂಥ ಎರಡು ಶೃಂಗಗಳ ನಡುವೆ ಒಂದೇ ಸ್ತಂಭ ತೂಗಿ ಹಿಡಿದಿರುವ, ಪರ್ವತಗಳ ಬಟ್ಟು ಹಾಕಿದ ತೂಗು ಸೇತುವೆಯಿದೆ. ಅದನ್ನು ಅಲ್ಲಿಯ ಜನ ಆಕಾಶ ಸೇತುವೆ ಎನ್ನುತ್ತಾರೆ. ಆ ಆಕಾಶ ಸೇತುವೆ ಒಂದು ಭಾಷೆಯೊಂದಿಗೆ ಮತ್ತೊಂದು ಭಾಷೆಗೆ ಸಂಬಂಧ ಕಲ್ಪಿಸುವ ಅನುವಾದ ಕ್ರಿಯೆಗೆ ಎಷ್ಟು ಚೆನ್ನಾಗಿ ಹೊಂದುತ್ತದೆ ಎನ್ನಿಸಿತು ನನಗೆ! -
-40%
ಅಪರಂಜಿ ಜನವರಿ ೧೯೮೮
0ಅಪರಂಜಿ ಜನವರಿ 1988
ತಿಳಿನಗೆಯ ಕಾರಂಜಿ
ಸಂಪುಟ 5
ಸಂಚಿಕೆ 4ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಅಪರಂಜಿ ಜನವರಿ 1988
ಅಪರಂಜಿ ಕಿಡಿ
Grease ಹಾಕೋ ಜಾಣ್ಮೆ
ವಕ್ರ ದೃಷ್ಟಿ
ಮುನ್ನೆಚ್ಚರಿಕೆ
ಸನ್ಮಾನ
ಶ್ರೀರಂಗಪಟ್ಣ
ನಂ ಕ್ಲಬ್ಬಿನಲ್ಲಿ
ಇಂದುಮತಿ
ಕ್ರಿಕೆಟ್ ಹೀಗಾದರೆ!
ಅ(ನ)ರ್ಥ ಕೋಶ
ಕಾನ್ವೆಂಟ್ ಕನ್ನಡ
ಕ್ರಿ. ಶ. 2003ರಲ್ಲಿ ರಾಜ್ಯದಲ್ಲಿ ಇದೇ ಪರಿಸ್ಥಿತಿ ಇದ್ದರೆ?
ದಿಬ್ಬಣದ ಊಟ -
-40%
ಅಪರಂಜಿ ಜೂನ್ – ೨೦೧೭
0ಅಪರಂಜಿ ಜೂನ್ – ೨೦೧೭
ತಿಳಿನಗೆಯ ಕಾರಂಜಿ
ಸಂಪುಟ ೩೪
ಸಂಚಿಕೆ – ೮ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ
ಅಪರಂಜಿ ಕಿಡಿ
“ನಮ್ಮ ನಿಮ್ಮಲ್ಲಿ”
ಭಾಸನ ಕಿಸೆಗೆ ಪಂಪ ಕೈ ಹಾಕಿದ್ದಾ?
ಸೆವೆನ್ ಸ್ಟಾರ್ ಆಸ್ಪತ್ರೆ
ಮುದಿಗಳ ಕಾಟ……
ದಿಗ್ಗಜರ ಜೀವನದ ಹಾಸ್ಯ ಪ್ರಸಂಗಗಳು
ಪಂಚ್ ಪದ್ಯಗಳು
ಸಂಜೆ ಹೊತ್ಗೆ ಸೀರೆ ಎಂಟ್ಮೊಳ ನೇಯ್ದರಂತೆ
ಕುದುರೆಯ ಕಳಕಳಿ
‘ಅನುಭವ’ ನೋಡಿದ ಅನುಭವ
ತುಂತುರು ತುಂತುರು ತುಂತುರು ತುಂತುರು ತುಂತುರು ತುಂತುರು ತುಂತುರು
ಸೀತಾಪತಿಯ ಕೀಳರಿಮೆ
ವ್ಯಂಗ್ಯ ಮೆಲುಕು
ಹುಡುಕಾಟದ ಸೊಬಗು -
-40%
ಪಾಲಕರಿಗಾಗಿ
0ಪಾಲಕರಿಗಾಗಿ…….
(ಮಕ್ಕಳ ಶೈಕ್ಷಣಿಕ ಅಡಿಪಾಯ)
ಕಿರಿಯ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳ ಶಿಕ್ಷಣಕ್ಕೆ ಭದ್ರವಾದ ತಳಹದಿ ಒದಗಿಸಿದರೆ ಮುಂದೆ ಅವರ ವ್ಯಕ್ತಿತ್ವ ವಿಕಾಸದ ದಾರಿ ಸುಗಮಗೊಳ್ಳಲು ಸಾಧ್ಯ. ಈ ಬಗ್ಗೆ ಸಾಕಷ್ಟು ಚಿಂತನೆ ನಡೆಸಿ, ತಮ್ಮ ಮೂವತ್ತೇಳು ವರ್ಷಗಳ ಶಿಕ್ಷಕ ವೃತ್ತಿಯ ಅನುಭವದ ಜೊತೆಗೆ ತಾಯಿಯಾಗಿ, ಅಜ್ಜಿಯಾಗಿ ಪಾಲಕರ ಹೊಣೆಗಾರಿಕೆಯನ್ನು ಸರಿಯಾಗಿ ಅರ್ಥಮಾಡಿಕೊಂಡ ಡಾ|| ಜಯಶ್ರೀ ಎಸ್. ಮುದಿಗೌಡರ, ಅಪೂರ್ವವಾದ ಕಾಳಜಿಯಿಂದ, ಸ್ಪಷ್ಟವಾದ ತಿಳವಳಿಕೆಯಿಂದ ಪ್ರಸ್ತುತ ಗ್ರಂಥವನ್ನು ರಚಿಸಿದ್ದಾರೆ. “ಬೆಸುಗೆಯ ನಿಟ್ಟು” ಎಂಬ ಮೊದಲ ಭಾಗದಲ್ಲಿ ೧) ಮನೆ ಮತ್ತು ತಾಯಿ ೨) ಶಿಕ್ಷಣ ಕ್ಷೇತ್ರ-ಹಿತಚಿಂತಕರು ಹಾಗೂ ೩) ಸಮಾಜ-ಹಿರಿಯರು ಅವಶ್ಯವಾಗಿ ಲಕ್ಷಿಸಬೇಕಾದ ಸಂಗತಿಗಳನ್ನು ಉಪಯುಕ್ತ ಸಲಹೆಗಳೊಂದಿಗೆ ವಿವರಿಸಲಾಗಿದೆ. ಬೋಧನೆಯ ಗರಿಷ್ಠ ಸಾಧನೆಯು ಶಿಕ್ಷಕರ ಸಂದರ್ಭೋಚಿತವಾದ ಬೋಧನಾ ಕಲೆಯ ಚಾಕಚಕ್ಯತೆಯಲ್ಲಿ ಮತ್ತು ಅವರ ವೃತ್ತಿ ಕಳಕಳಿಯಲ್ಲಿ ಅಡಗಿರುವುದನ್ನು ಎತ್ತಿ ತೋರಿಸಲಾಗಿದೆ. -
-40%
ಜೇನುಕಲ್ಲಿನ ರಹಸ್ಯ ಕಣಿವೆ
0ಜೇನುಕಲ್ಲಿನ ರಹಸ್ಯ ಕಣಿವೆ
(ಮಲೆನಾಡಿನ ರೋಚಕ ಕತೆಗಳು-೪)
ಕಾದಂಬರಿ
ಗಿರಿಮನೆ ಶ್ಯಾಮರಾವ್
ಈ ಪಶ್ಚಿಮಘಟ್ಟ ಅದ್ಭುತ, ರಮ್ಯ, ಅಪರೂಪದ ಜೀವ-ಸಸ್ಯಗಳ ತಾಣ. ಆದರೆ ಅದು ಸುತ್ತಲಿಂದ ಇಂಚಿಂಚಾಗಿ ನಶಿಸುತ್ತಿದೆ. ಬಹುಶಃ ನಮ್ಮ ಕಾಲ ಮುಗಿಯುವುದರೊಳಗೆ ಅದರ ಸಹಜ ಸೌಂದರ್ಯ ಮಾಸಬಹುದು. ಮುಂದಿನ ಪೀಳಿಗೆಯವರಿಗೆ ಅದರ ಮತ್ತೊಂದು ರೂಪವೇ ಕಾಣಲು ಸಿಗಬಹುದು. ಹಾಗಾಗುವ ಮೊದಲೇ ಅದರ ಒಂದೊಂದೇ ಮಗ್ಗುಲನ್ನು ಪ್ರತಿಯೊಂದು ಕಾದಂಬರಿಯಲ್ಲೂ ಪದರು ಪದರಾಗಿ ಬಿಚ್ಚಿಡುತ್ತಾ ಹೋಗುವ ಉದ್ದೇಶ ಇಲ್ಲಿದೆ. ಕೋಟ್ಯಂತರ ವರ್ಷಗಳಿಂದ ಅಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದ ವನ್ಯಜೀವಿಗಳ ಬದುಕು ಒಮ್ಮೆಲೇ ಈ ಶತಮಾನದಲ್ಲಿ ಘೋರವಾಗಿ ಜೀವಜಾಲದ ಸರಪಳಿ ಕಡಿಯುತ್ತಿದೆ. ಮಾಡಿದ ಕರ್ಮಗಳು ಬದುಕಿಗೆ ಮತ್ತೊಂದು ರೀತಿಯಲ್ಲಿ ಸುತ್ತಿಕೊಳ್ಳುತ್ತದಾ? ಅದು ಬೇಗ ಕಣ್ಣಿಗೆ ಕಾಣದಿದ್ದರೂ ಬದುಕನ್ನು ಆಳವಾಗಿ ನೋಡಿದಾಗ ಅಲ್ಲ ಎನ್ನಲು ಬರುವುದಿಲ್ಲ. `ಮಾಡಿದ್ದನ್ನು ಅನುಭವಿಸಲೇಬೇಕು’ ಎನ್ನುವುದು ಜಗತ್ತಿನ ನಿಯಮವೇ ಆಗಿರಬೇಕು. ಇವೆಲ್ಲದರ ಒಳನೋಟ ಈ ಕಾದಂಬರಿಯಲ್ಲಿದೆ.