• -50%

    ಸಮಾಹಿತ-ಗ್ರೀಷ್ಮ ಸಂಚಿಕೆ ೨೦೧೭

    0

    ಸಮಾಹಿತ
    (ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ)
    ಗ್ರೀಷ್ಮ ಸಂಚಿಕೆ
    ಸಂಪುಟ-೨ ಸಂಚಿಕೆ-೪
    ಜುಲೈ – ಆಗಸ್ಟ್ ೨೦೧೭

    ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.

    Original price was: ₹100.00.Current price is: ₹50.00.
    Add to basket
  • ತುಸು ನಿಲ್ಲು ಕಾಲವೇ (ಅವಧಿ – ಸಂಚಿಕೆ – ೭)

    0

    ತುಸು ನಿಲ್ಲು ಕಾಲವೇ

    (ಅವಧಿ – ಸಂಚಿಕೆ – ೭)
    ೫-೮-೨೦೧೭ ರಿಂದ ೧೧-೮-೨೦೧೭ ರವರೆಗೆ ಪ್ರಕಟವಾದ ಲೇಖನಗಳು.

    ಈ ಸಂಚಿಕೆಯಲ್ಲಿನ ಲೇಖನಗಳು :

    ನೆರುದಾ ಎನ್ನುವ ಕನಸು ಮತ್ತು ಕವಿತೆ..
    ಸನತ್ ಕುಮಾರ್ ಗುಣಮುಖರಾಗಿದ್ದಾರೆ. ..ಮನಸ್ಸೀಗ ನಿರಾಳ
    ಹೂವಿನ ಚಿತ್ತಾರದಲ್ಲಿ ಕುಪ್ಪಳಿಯ ಝೇಂಕಾರ
    ಆಧುನಿಕ ತಲ್ಲಣಗಳ ‘ನುಣ್ಣನ್ನ ಬೆಟ್ಟ’
    ಛಾಯಾ ಭಗವತಿ ಸಂಕಟ
    ಆಳ್ವಾಸ್‌ನ ಆತ್ಮಹತ್ಯೆ ಉತ್ತರ ಇಲ್ಲಿದೆ..
    ಕುವೆಂಪು ಹುಡುಕುತ್ತಾ ಬಂದರು ತಾರಿಣಿ
    ಹೇಗಿದ್ದೀ….ಎಂದೆ
    ಸಂಜೆಯ ಸರಕಿಗೆ…!
    ತುರ್ತಾಗಿ ಬೇಕಾಗಿದ್ದಾರೆ… ನಾಡಿ ಪಂಡಿತರು!
    ‘ಮಾರಿಬಿಡಿ’ ಎನ್ನುವ ತಲ್ಲಣ
    ನಮನಮಗೆ ಬೇಕಾದಾಗ ಮಾತ್ರ ಪ್ರಗತಿಪರರು..
    ಅವರು ಮೇಲುಕೋಟೆಯಲ್ಲಿದ್ದ ಗಾಂಧಿ..
    ಕೆಎಂಎಸ್, ಅರವಿಂದ ಮಾಲಗತ್ತಿ, ವಸುಂಧರಾ ಭೂಪತಿ, ಲೋಕೇಶ್ ಅಕಾಡೆಮಿ ಅಧ್ಯಕ್ಷರಾಗಿ ನೇಮಕ
    ಗಾಂಧಾರಿ ತುಣುಕುಗಳು
    ಬ್ರೆಕ್ಟ್ ಪರಿಣಾಮ..
    ಅರೆಗಣ್ಣಿನಿಂದ ನೋಡಿ..
    ಆತ ಬೋಲ್ಟ್, ಹುಸೇನ್ ಬೋಲ್ಟ್..
    ‘ಒನ್ ಅವರ್ ಹೋಟೆಲ್ಲಾ?’
    ಬರೆದು ಬೆತ್ತಲಾದ ಮೇಲೆ..
    ‘ಕಾಡಂಕಲ್ಲ್ ಮನೆ’ಯಲ್ಲಿ ವೈದೇಹಿ
    ಹೊಸ ಅಕಾಡೆಮಿಗಳ ಸಂಭ್ರಮ.. ಕ್ಲಿಕ್ ಕ್ಲಿಕ್
    ಮೊದಲ ಮಿಲನ ನೆನಪಿಸಿಕೊಂಡವು..
    ಕುವೆಂಪು ಭಾಷಾ ಭಾರತಿಯಲ್ಲಿ ಕೆ ಎಂ ಎಸ್
    ತುಸು ನಿಲ್ಲು ಕಾಲವೇ
    ಭ್ರಷ್ಟ ವ್ಯವಸ್ಥೆಯ ಹುಚ್ಚು ವ್ಯಸನ

    15.00
    Add to basket
  • ಥೇಟು ಅವಳ ಹಾಗೇ!! (ಅವಧಿ – ಸಂಚಿಕೆ – ೬ )

    0

    ಥೇಟು ಅವಳ ಹಾಗೇ!!

    (ಅವಧಿ – ಸಂಚಿಕೆ – ೬ )
    ೩೦-೭-೨೦೧೭ ರಿಂದ ೪-೮-೨೦೧೭ ರವರೆಗೆ ಪ್ರಕಟವಾದ ಲೇಖನಗಳು.

    ಈ ಸಂಚಿಕೆಯಲ್ಲಿನ ಲೇಖನಗಳು :

    ಶ್ರೀಶಂಕರ್, ವಯಸ್ಸು 67, ಗೋಧಿಬಣ್ಣ, ಸಾಧಾರಣ ಮೈಕಟ್ಟು!
    ಅವನ ಮಧುಭರಿತ ನೆನಪೇ..
    ಒದ್ದೆ ರಾತ್ರಿ..
    ಭಟ್ಟರ ‘ಮುಗುಳು ನಗೆ’
    ಬನ್ನಿ ಸಾಧನಕೇರಿಗೆ..
    ನಾಳೆ ಎಂದರೆ ಭಯವಾಗಿದೆ…
    ಶಾಂತಿ ಕೆ ಅಪ್ಪಣ್ಣ ಅವರಿಗೆ ಡಾ ಎಚ್ ಶಾಂತಾರಾಮ್ ಪ್ರಶಸ್ತಿ
    ಹೌದು…ಹೆಮಿಂಗ್ವೆ ಗೆಲ್ಲುವುದೇ ಹಾಗೆ!
    ‘ಅವಧಿ’ ಅಭಿಯಾನ ಬನ್ನಿ ಸಾಧನಕೇರಿಗೆ..
    ಯಾವ ಪಾತ್ರವೂ ನನ್ನೊಡನೆ ಮನೆಗೆ ಬರಲಿಲ್ಲ..
    ಥೇಟು.. ಅವಳ ಹಾಗೆ!!
    ಇನ್ನೂ ಹುಟ್ಟದ ಮಗುವಿಗೆ..
    ಯೋಗರಾಜ್ ಭಟ್ ಬರೆದಿದ್ದಾರೆ..
    ಪ್ರಾದೇಶಿಕ ಪತಂಗಗಳ ಬೆಂಕಿಯ ಸಂಗ…!
    ಅಷ್ಟು ಸುಲಭಕ್ಕೆ ಕವಿತೆಯಾಗಲಾರದು ಹಸಿವು
    ಬಣ್ಣ ಅಳಿಸಿ, ವೇಷ ಕಳಚಲು ಹೊರಡುತ್ತೇನೆ ನಾನು!
    ಹೀಗೆಯೇ ಮೊನ್ನೆ ಕಂಪ್ಯೂಟರಿನಲ್ಲಿ ಇಮೇಜ್ ನೋಡುತ್ತಿದ್ದಾಗ..
    ಹೀಗೆ ಪ್ರೀತಿಸಿ ಪ್ರೀತಿಸಿ ನಾನೂ, ಅವನೂ..
    ಇಲ್ಲಿದ್ದಾರೆ ‘ಪುಟ್ಟಮ್ಮತ್ತೆ’ ‘ಅಮ್ಮಚ್ಚಿ’ ಮತ್ತು ‘ಅಕ್ಕು’
    ಮಣಿರತ್ನಂ ಎಂಬ ಆ ’ಬಡ್ಡೆತ್ತದು’
    ಓಹ್! ಕಂಗನಾ..
    ನನ್ನೆದೆಗೆ ಬೆಂಕಿ ಬಿದ್ದಿದೆ..
    ಕಿ ರಂ ಪುಸ್ತಕ ಎಡಿಟ್ ಮಾಡುತ್ತಾ..
    ಆಸ್ಪತ್ರೆಯ ಮುಂಭಾಗದ ‘ಒನ್ ವೇ’..

    15.00
    Add to basket
  • -52%

    ಉತ್ತರ ವಿಹಾರ

    0

    ಉತ್ತರ ವಿಹಾರ
    (ಪ್ರವಾಸಕಥನ)

    ಕಳೆದ ಎರಡು ಮೂರು ವರ್ಷಗಳಲ್ಲಿ ದೇಶದ ಉತ್ತರ ಭಾಗಗಳಲ್ಲಿ ಕೈಗೊಂಡ ಪ್ರವಾಸದ ಫಲಸ್ವರೂಪ ಈ ಕೃತಿ. ಉತ್ತರಪ್ರದೇಶ ಮತ್ತು ಬಿಹಾರದ ಪ್ರಮುಖ ಪ್ರವಾಸಿ ತಾಣಗಳಲ್ಲದೆ, ಕಾಶ್ಮೀರ, ಉತ್ತರಾಖಂಡದ ಕೆಲವು ಪ್ರೇಕ್ಷಣೀಯ ಸ್ಥಳಗಳು ಹಾಗೂ ಪೂರ್ವಾಂಧ್ರ ಕುರಿತು ಎರಡು ಕಥನಗಳು ಕೃತಿಯಲ್ಲಿ ಸೇರಿವೆ. ಇವುಗಳಲ್ಲಿ ಕಾಶ್ಮೀರ ಪ್ರವಾಸ ಮಾತ್ರ ಸಹಕುಟುಂಬ ಪ್ರವಾಸವಾಗಿದ್ದರೆ, ಉಳಿದ ಪ್ರವಾಸಗಳು ಸಹೃದಯ ಸನ್ಮಿತ್ರರೊಂದಿಗೆ ಕೈಗೊಂಡ ಪ್ರವಾಸಗಳು. ನೋಡುವ ಕಣ್ಣಿಗೆ ಪ್ರತಿ ಪ್ರವಾಸವೂ ಒಂದು ಅಪೂರ್ವ ಅನುಭವವೆ. ಒಂದು ಪ್ರದೇಶದ ಇತಿಹಾಸ, ಭೂಗೋಳ, ಪರಂಪರೆ ಕುರಿತು ತೀವ್ರ ಆಸಕ್ತಿ ನನ್ನ ಪ್ರವಾಸ ಕಥನಗಳ ಹಿಂದಿನ  ಪ್ರೇರಕ ಶಕ್ತಿ. ಪ್ರತಿಯೊಂದು ವಿಶಿಷ್ಟ, ವಿಭಿನ್ನ. ನನ್ನ ಹಿಂದಿನ ಆರೂ ಪ್ರವಾಸ ಕಥನಗಳಿಗೆ ಓದುಗರಿಂದ ಒಳ್ಳೆಯ ಸ್ಪಂದನೆ ಸಿಕ್ಕಿದೆ.

    Original price was: ₹170.00.Current price is: ₹82.00.
    Add to basket
  • -40%

    ಅತಿಥಿ ದೇವೋ ಭವ

    0

    ಅತಿಥಿ ದೇವೋ ಭವ
    (ಅತಿಥಿಯ ರಸಪ್ರಸಂಗಗಳು)

    ಸ್ವಾಮಿರಾವ ಕುಲಕರ್ಣಿಯವರ  `ಅತಿಥಿ ದೇವೋ ಭವ’ ಎಂಬ ಅತಿಥಿಯ ಅನುಭವಗಳ ರಸಪ್ರಸಂಗಗಳ ಕುರಿತಾಗಿ ಬರೆದ ಪ್ರಬಂಧಗಳ ಸಂಕಲನ.
    “ಕನ್ನಡ ಸಾಹಿತ್ಯದಲ್ಲಿ ಇದೊಂದು ಹೊಸ ಪ್ರಯೋಗದ ಅಪರೂಪದ ಸಾಹಿತ್ಯ ಪ್ರಕಾರವಾಗಿದೆ.” ೧೯೯೮ರಲ್ಲಿ ಪ್ರಕಟವಾದ ನನ್ನ `ರಂಗನಾಟಕದ ರಸಪ್ರಸಂಗಳು’- ರಂಗಾನುಭವದ ಕಿರುಲೇಖನಗಳ ಕೃತಿಯ ಬಗ್ಗೆ ಹಿರಿಯ ಸಾಹಿತಿ ದಿ. ಡಾ. ಹಾ. ಮಾ. ನಾಯಕರ ಮಾತುಗಳಿವು. ರಂಗಭೂಮಿಯ ಹಿರಿಯರಾದ ಮಾಸ್ಟರ್ ಹಿರಣ್ಣಯ್ಯನವರು “ನಾನೂ ಹಲವು ದಶಕಗಳಿಂದ ನಾಟಕ ಮಾಡತಿದ್ದೀನಿ. ಇಂತಹ ಅನೇಕ ಘಟನೆಗಳು, ಪ್ರಸಂಗಗಳು ನಡೆದಿವೆ. ನಿಮ್ಮ `ರಂಗನಾಟಕಗಳ ರಸಪ್ರಸಂಗಗಳು’ ಓದಿದ ಮೇಲೆ, ನಾನು ಇಂತಹ ಪ್ರಸಂಗಗಳನ್ನು ಬರೆಯದೇ ತಪ್ಪು ಮಾಡಿದೆ ಅನಿಸುತ್ತದೆ.’ ಈರ್ವರು ಹಿರಿಯರ ಈ ಮಾತುಗಳೇ `ಅತಿಥಿ ದೇವೋಭವ’ ಬರಹಕ್ಕೆ ಮೂಲ ಪ್ರೇರಣೆಯಾಗಿವೆ.

    Original price was: ₹70.00.Current price is: ₹42.00.
    Add to basket
  • -40%

    ಇಣುಕಿದಲ್ಲಿ ಛಂದ

    0

    ಇಣುಕಿದಲ್ಲಿ ಛಂದ
    (ಲಲಿತ ಪ್ರಬಂಧಗಳು)

    ಕಾವ್ಯ ನನಗೆ ಮೌನಗಳ ಮೀಟುವ ಏಕತಾರಿ. ನಾಟಕ ಹಲವು ಸಮಸ್ಯೆಗಳ ಚಿಂತನೆಯ ಅನಾವರಣ. ಸುತ್ತಲಿನ ನನಗಿಷ್ಟವಾದದ್ದನ್ನೆಲ್ಲ ಎತ್ತಿಕೊಂಡು ತನ್ಮಯಳಾಗುವ ಖುಷಿ, ಲಲಿತ ಪ್ರಬಂಧ.
    ಎದುರಾಗುವ ಸನ್ನಿವೇಶ, ವ್ಯಕ್ತಿಗಳನ್ನು ರಾಗಭಾವಗಳಿಂದ ಪ್ರತ್ಯೇಕಿಸಿ ನವಿರು ಹಾಸ್ಯಕ್ಕೆ ಪ್ರತಿಮೆಯಾಗಿಸಿಯೂ, ಓರೆ ಕೋರೆಗಳ ಸಾಪೇಕ್ಷತೆಯನ್ನು ಈ ಪ್ರಪಂಚದ ಸಾರ್ವತ್ರಿಕ ಸಹಜ ನಡವಳಿಕೆಯಾಗಿ ಸ್ವೀಕರಿಸುವ ಆರೋಗ್ಯಕರ ಔದಾರ್ಯವೇ ಲಲಿತಪ್ರಬಂಧದ ಜೀವನಾಡಿ. ಯಾವುದೇ ಸಾಹಿತ್ಯಿಕ ಕಾಲಘಟ್ಟದ ಹಣೆಪಟ್ಟಿಯ ಹಂಗಿಲ್ಲದೆ ಹರಿವ ಹೊಳೆ ಲಲಿತ ಪ್ರಬಂಧ. ನನ್ನ ಬೊಗಸೆಯಲಿ ಹಿಡಿವಷ್ಟು ಸಲಿಲವನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ. ಕನ್ನಡದಲ್ಲಿ ಗೊರೂರು, ವಿ. ಸೀ., ಪು.ತಿ.ನ., ಎ. ಎನ್. ಮೂರ್ತಿರಾಯರು, ಅ. ರಾ. ಮಿತ್ರ ಮುಂತಾದ ಲೇಖಕರು ಲಲಿತ ಪ್ರಬಂಧ ಪ್ರಕಾರವನ್ನು ಬೆಳೆಸಿದ್ದಾರೆ. ಮನೆಯ ಪುಸ್ತಕದ ರಾಶಿಯಲ್ಲಿ ಮೊದಲು ನನ್ನ ಕಣ್ಣಿಗೆ ಬಿದ್ದ ರಾ. ಕು. ಅವರ `ಗಾಳಿಪಟ’ ಪ್ರತಿಯೊಂದು ಮರು ಓದಿನಲ್ಲೂ ಅದೇ ಸಂತೋಷ ಕೊಡುವ ಕೃತಿ.

    Original price was: ₹200.00.Current price is: ₹120.00.
    Add to basket
  • -40%

    ಮ್ಯೂಟೇಶನ್

    0

    ಮ್ಯೂಟೇಶನ್
    (ಕಥಾಸಂಕಲನ)

    ಇದು ‘ಆರಾಮಕುರ್ಚಿ ಮತ್ತು ಕತೆಗಳು’ ನಂತರದ, ನನ್ನ ಎರಡನೆಯ ಕಥಾಸಂಕಲನವಾಗಿದೆ. ಈ ಕತೆಗಳನ್ನು ಬೇರೆ ಬೇರೆ ಕಾಲಘಟ್ಟದಲ್ಲಿ ಬರೆಯಲಾಗಿದೆ. ಸಣ್ಣಕತೆಗಳು ನನ್ನನ್ನು ತಿಳಿಗೊಳಿಸುತ್ತಾ ಬಂದಿವೆ. ಬರೆದಾದ ಮೇಲೆ ಅವುಗಳಲ್ಲಿ ನನ್ನ ಮುಖ ನೋಡುತ್ತಾ ಸಂತೋಷಪಟ್ಟಿದ್ದೇನೆ. ಅಲ್ಲಿ ಕಂಡ ಇತರ ಮುಖಗಳು ಕೂಡ ಅಚ್ಚರಿ ಹುಟ್ಟಿಸಿವೆ. ಬರೆಯುವ ಕ್ರಿಯೆಯೇ ನನ್ನನ್ನು ನಾನು ಶುದ್ಧೀಕರಿಸಿಕೊಳ್ಳುವ ಕ್ರಿಯೆಯಾಗಿದೆ. ಬರೆದಾದ ಮೇಲೆ ಅದು ಮೂಡಿಸುವ ಪ್ರಸನ್ನತೆ ಬಿಡುಗಡೆಯ ಭಾಗ್ಯ ಕೊಟ್ಟಿದೆ. ನಾಟಕ, ಕಾವ್ಯ ಸಾಹಿತ್ಯದ ಪ್ರಮುಖ ಅಂಗಗಳಾದರೂ ಕೂಡ, ಕತೆ-ಕಾದಂಬರಿ ಮಾತ್ರ ಪೂರ್ಣದೇಹಿಗಳಂತೆ ಕಂಡಿವೆ. ಬಹುತೇಕ ಓದುಗರು ಸಣ್ಣಕತೆಗಳಿಗೆ ಭೇಟಿಕೊಡುವಷ್ಟು, ಉಳಿದ ಪ್ರಕಾರಗಳಿಗೆ ಭೇಟಿ ಕೊಡಲಾರರು. ಸಣ್ಣಕತೆಯ, ಸಣ್ಣದೆನ್ನುವ ಭಾವನೆಯೇ ಮನುಷ್ಯನ ಸಾವನ್ನು ನೆನಪಿಸುತ್ತಿರಬಹುದು! ಹುಟ್ಟು ಸಾವಿನ ಮಧ್ಯದ ಬದುಕು ಬರಿ ಸಣ್ಣ ಕತೆಯಾಗಿರಬಹುದು! ಹೀಗಾಗಿ ಓದುಗರಿಗೆ ಇದರ ಬಗ್ಗೆ ವಿಲಕ್ಷಣವಾದ ಸೆಳೆತವಿದೆ.

    Original price was: ₹70.00.Current price is: ₹42.00.
    Add to basket
  • -40%

    ಕಾಲು ದಾರಿಯ ಕಥನಗಳು

    0

    ಕಾಲು ದಾರಿಯ ಕಥನಗಳು
    (ಜಾನಪದ-ಜೀವನ-ಕಥನ)

    ಶ್ರೀ ಕೃಷ್ಣಮೂರ್ತಿ ಹನೂರು ಇವರ `ಕಾಲು ದಾರಿಯ ಕಥನಗಳು’ (ಜಾನಪದ-ಜೀವನ-ಕಥನ) ಕೃತಿಯನ್ನು ಚಂದಾದಾರರಿಗೆ ತಲುಪಿಸಲು ಸಂತೋಷವಾಗುತ್ತಿದೆ. ಶ್ರೀ ಹನೂರು ಅವರು ತಮ್ಮ ಜೀವನದ ಅಮೂಲ್ಯ ಭಾಗವನ್ನು ಜಾನಪದ ಜೀವನದೊಂದಿಗೆ ಕಳೆದು, ಅದು ನಶಿಸಿ ಹೋಗದಂತೆ ತಮ್ಮ ಅಕ್ಷರ ಸಾಹಿತ್ಯದ ಮೂಲಕ ಕೊನೆಯವರೆಗೂ ಉಳಿಯುವಂತೆ ನೋಡಿಕೊಂಡಿದ್ದಾರೆ. ಅವರಿಗೆ ಕನ್ನಡ ಸಾಹಿತ್ಯ ಋಣಿಯಾಗಿರಬೇಕು.

    Original price was: ₹260.00.Current price is: ₹156.00.
    Add to basket
  • -40%

    ಮತ್ತೊಬ್ಬ ರಾಧೆ

    0

    ಮತ್ತೊಬ್ಬ ರಾಧೆ
    (ಕೀರ್ತನಕಾರ್ತಿ ಗಲಗಲಿ ಅವ್ವನವರನ್ನು ಕುರಿತ ನಾಟಕ)
    ಈ ನಾಟಕವು ಹದಿನೆಂಟನೇ ಶತಮಾನದ ಕೀರ್ತನಕಾರ್ತಿ ಗಲಗಲಿ ಅವ್ವನವರನ್ನು ಕುರಿತದ್ದಾಗಿದೆ. ಬಾಗಲಕೋಟ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿಯಲ್ಲಿ ಪ್ರಸಿದ್ಧ ಪಂಡಿತರಾಗಿದ್ದ ಗಲಗಲಿ ಮುದಗಲ್ಲಾಚಾರ್ಯರ ಕಿರುಪತ್ನಿಯಾಗಿ ರಮಾ ತನ್ನ ಹನ್ನೆರಡು ವರ್ಷದಲ್ಲಿಯೇ ಮದುವೆಯಾಗಿ ಗಲಗಲಿ ಗ್ರಾಮವನ್ನು ಪ್ರವೇಶಿಸಿದಳು. ಮದುವೆಯಾದ ಎಂಟು ದಿನಕ್ಕೇ ವಿಧವೆಯಾದಳು. ವಿಧವೆಯಾಗಿ ಬತ್ತಿ ಹೊಸೆಯದೆ, ನ್ಯಾಯಪಂಡಿತಳಾಗಿ ಪೇಶ್ವೇ ಅರಸರ ಪಂಡಿತರನ್ನು ಸೋಲಿಸಿ, ಪುಣೆಯ ಅರಸರಿಂದ ವರ್ಷಾಶನ ಪಡೆದಳು. ಅವ್ವನವರ ಮುನ್ನೂರು ಕೀರ್ತನೆಗಳು ಪ್ರಕಟವಾಗಿವೆ. ಕನ್ನಡದಲ್ಲಿ ಕೀರ್ತನೆ ರಚಿಸಿದ ಮೊದಲ ಮಹಿಳೆಯೆಂಬ ಹೆಗ್ಗಳಿಕೆಗೆ ಗಲಗಲಿ ಅವ್ವ ಸಾಕ್ಷಿಯಾಗಿದ್ದಾಳೆ. ಪುಟ್ಟ ವಿಧವೆಯಾಗಿ ಕಾಣಿಸಿಕೊಂಡ ಈ ಮಹಿಳೆ ಗಲಗಲಿ ಅವ್ವನಾಗಿ ಬೆಳೆದು ನಿಂತದ್ದು, ಅಧ್ಯಾತ್ಮ ಮತ್ತು ಸಾಹಿತ್ಯದಲ್ಲಿ ಮಹತ್ತರ ಸಾಧನೆ ಮಾಡಿದ್ದು ಈಗ ಚರಿತ್ರೆಗೆ ಸೇರಿದ ವಿಷಯವಾಗಿದೆ.

    Original price was: ₹70.00.Current price is: ₹42.00.
    Add to basket
  • -40%

    ಮಧುರವಾಗಲಿ ದಾಂಪತ್ಯ

    0
    Original price was: ₹120.00.Current price is: ₹72.00.
    Add to basket
  • ಮಗದೊಮ್ಮೆ ನಕ್ಕ ಬುದ್ಧ  (ಅವಧಿ – ಸಂಚಿಕೆ – ೪)

    0

    ಮಗದೊಮ್ಮೆ ನಕ್ಕ ಬುದ್ಧ 

    (ಅವಧಿ – ಸಂಚಿಕೆ – ೪)
    ೧೫-೭-೨೦೧೭ ರಿಂದ ೨೧-೭-೨೦೧೭ ರವರೆಗೆ ಪ್ರಕಟವಾದ ಲೇಖನಗಳು.

    ಈ ಸಂಚಿಕೆಯಲ್ಲಿನ ಲೇಖನಗಳು :

    ಎಸ್ಟಾನಾ ತಿನ್ರಿ.. ಬೀಜ ಇಲ್ಲೇ ಹಾಕ್ರಿ..
    ಮತ್ತೆ..
    ಓ ಗಾಂಧಿ ಅಜ್ಜ, ಓ ಗಾಲಿಬ್ ಚಾಚಾ
    ಬೋಳುಮಂಡೆ ಹುಡುಗನ ಕಥೆ..
    ಏಕ್ ರಾತ್, ಗುಲ್ಬರ್ಗ ಸ್ಟೇಷನ್ ಕೆ ನಾಮ್…..
    ‘ಪ್ರಣಯಂ’ ಎನ್ನುವ ಗ್ರೀಷ್ಮರಾಗ
    ನನ್ನೆದೆಯ ದರಬಾರಿನಲ್ಲಿ..
    ನನ್ನೊಳಗಿನ ಅಶರೀರಿಗೆ..
    ಮಗದೊಮ್ಮೆ ನಕ್ಕ ಬುದ್ಧ
    ಸಾಂಬಾರ್ ಮಾಡಲು ದುಡ್ಡಿಲ್ಲದಿದ್ದರೂ ನ್ಯಾಪಕಿನ್ ಕೊಡಿಸಿದರು..
    ಗೋಡೆ ಮೇಲಿನ ಚಿತ್ರದಲ್ಲಿ..
    ಸಿಗಬಾರದೆ ಅಂಗೈಗೆ ಆಕಾಶ..
    ನೀವು ನಿಧಾನವಾಗಿ ಸಾವನ್ನಪ್ಪಲು ಆರಂಭಿಸುತ್ತೀರಿ..
    ನಾಗೇಶ್ ಹೆಗಡೆ ಕಂಡ ‘ಕುಲಾಂತರಿ’
    ನಾಟ್ಕ ಶುರುವಾಗಿದೆ… ಸ್ಕ್ರಿಪ್ಟ್ ಎಲ್ಲುಂಟು?!!
    ಅವರು ‘ತೆರೆದ ಬಾಗಿಲು’
    ಶೂ ಗಟ್ಟಿಯಾಗಿದೆ…
    ಹಳ್ಳಿ ಭಾಷೆ ಎಂದು ಮೂಗು ಮುರಿಯುವವರು ಜಾಸ್ತಿ..
    ಯಾವ ಚೆಲವಿಯ ಮುಡಿಯದ್ದು..
    ‘ಕತ್ತಲೆಕಾನು’ ಬೆಳಕಿಗೆ ಬಂತು
    ‘ಸೈಡ್ ವಿಂಗ್’ ಫೋಟೋ ಆಲ್ಬಂ
    ಮಂಗಳ ‘ಮುದ್ರಿಕೆ’
    ತಲೆಯಲ್ಲುಳಿದ ಸೀರಿನಂತೆ..
    ಕಂಠಿ ಮತ್ತೆ ಬರೆಯುವಂತಾಗಲಿ..
    ನಿನ್ನ ನೋವು ನಾ ಅನುಭವಿಸಬಲ್ಲೆ..
    ಮಾತನಾಡು ಬದುಕೇ ದೂರ ಸರಿಯದಿರು..
    ನೀ ಬಿಟ್ಟ ಹೋದ ಕ್ಷಣದಲಿ..
    ಸೊಲ್ಲಾಪುರದಲ್ಲಿ ಆಹಾ! ಜೋಳದ ರೊಟ್ಟಿ..
    ಅದೇ ದೃಶ್ಯ ‘ಕರ್ವಾಲೊ’ದಲ್ಲಿ…
    ಸಿದ್ಧಗೊಂಡ ‘ತೇಜಸ್ವಿ ಲೋಕ ‘
    ಆಹಾ ಬಸ್ಸೇ..!!
    ವಸುಧೇಂದ್ರ ‘ಯುಗೇ ಯುಗೇ’
    ನನಗೆ ಎಚ್ಚರವಾದಾಗ, ಡೈನೊಸಾರ್ ಇನ್ನೂ ಅಲ್ಲಿಯೇ ಇತ್ತು..

    15.00
    Add to basket
  • -40%

    ಭಾರತ, ಇಸ್ಲಾಂ ಮತ್ತು ಗಾಂಧಿ

    0

    ಭಾರತ, ಇಸ್ಲಾಂ ಮತ್ತು ಗಾಂಧಿ:
    ಶ್ರೀ ಅರವಿಂದರ ಭವಿಷ್ಯವಾಣಿ
    ಮತ್ತು ಇತರ ಲೇಖನಗಳು
    ಗಾಂಧಿಯವರ ಮೇಲೂ ಹೆಚ್ಚು ಬೆಳಕು ಚೆಲ್ಲುವ, ದಿಗ್ದರ್ಶಕವಾದ ಸೂಕ್ತ ಲೇಖನಗಳು ಎಂದು ಭಾವಿಸುತ್ತೇನೆ. ಈಗ ನಮ್ಮೆದುರು ಇರುವುದು ರಾಷ್ಟ್ರ ರಕ್ಷಣೆಯ ಮಹಾ ಹೊಣೆ. ಅದಕ್ಕೆ ವಿಘ್ನವಾಗಿರುವ ಎಲ್ಲ ದುಷ್ಟ ವಿಚಾರಗಳನ್ನೂ, ಅಂಥ ಪರಂಪರೆಗಳನ್ನೂ, ಅವುಗಳನ್ನು ಹುಟ್ಟು ಹಾಕಿದವರನ್ನೂ ನಿರ್ದಾಕ್ಷಿಣ್ಯವಾಗಿ ಬಯಲು ಮಾಡಿ, ಅವುಗಳನ್ನು ಮೆಟ್ಟಿಯೇ ನಾವು ಮುಂದೆ ನಡೆದ ಹೊರತು ನಮಗೆ ಭವಿಷ್ಯವಿಲ್ಲ. ಕಣ್ಣು ಮುಚ್ಚಿ ಒಪ್ಪುವ, ಯಾರನ್ನೂ ಪೂಜಿಸುವ ಅಂಧಶ್ರದ್ಧೆ ಭಾರತೀಯ ಪರಂಪರೆಗೆ ದೂರವಾದುದು.

    Original price was: ₹150.00.Current price is: ₹90.00.
    Add to basket