• -40%

    ಡಬ್ಲ್ಯು. ಬಿ. ಯೇಟ್ಸ್ ನ ಕಾವ್ಯದ ಮೇಲೆ ಭಾರತೀಯ ತತ್ತ್ವಶಾಸ್ತ್ರ ಪ್ರಭಾವದ ಸಾಧ್ಯತೆ

    0

    ಡಬ್ಲ್ಯು. ಬಿ . ಯೇಟ್ಸ್ ನ ಕಾವ್ಯದ ಮೇಲೆ  ಭಾರತೀಯ ತತ್ತ್ವಶಾಸ್ತ್ರ ಪ್ರಭಾವದ ಸಾಧ್ಯತೆ

    ಯೇಟ್ಸನಿಗೆ ಭಾರತೀಯ ಪ್ರಭಾವಮೂಲಗಳು ಕೇವಲ ಕಾವ್ಯಸಾಮಗ್ರಿಯ ಮಟ್ಟದಲ್ಲಿ ಉಳಿದರೆ, ಎಲಿಯಟ್ಟನಿಗೆ ಅವು ತತ್ತ್ವನಿಷ್ಕರ್ಷೆಯ, ಜೀವನದರ್ಶನದ ಸ್ಫೂರ್ತಿಯೂ ಆಗಿದೆಯೆಂದು ಕಂಡಮೇಲೆ ವೇದೋಪನಿಷತ್ತುಗಳ ಬೆಲೆ, ಪಾಶ್ಚಾತ್ಯ ಸಂಸ್ಕೃತಿಯ ಮೋಹದ ಸುಳಿಯಲ್ಲಿ ಸಿಕ್ಕ ಅಂದಿನ ನನಗೆ ಅಪಾರವಾಗಿ ಕಂಡು, ನನ್ನನ್ನೇ ನಾನು ಅರಿಯುವ ಪ್ರಯತ್ನದಲ್ಲಿ ಈ ಕವಿದ್ವಯರ ಪಾತ್ರವನ್ನು ಚಿರಸ್ಮರಣೀಯವನ್ನಾಗಿಸಿದೆ. ನಷ್ಟಪ್ರಾಯನಾಗಿದ್ದ ನನ್ನನ್ನು ಇಂದಿನ ಸ್ಥಿತಿಗೆ ತಲುಪಿಸಿರುವ ಈ ಕವಿಗಳನ್ನು ಎಂದೆಂದೂ ಮರೆಯಲಾರೆ; ಇವರ ವಿಷಯಕ ನಿಬಂಧವನ್ನು ಬರೆದ ನನಗೆ ದೊರೆತ ಈ ಫಲ, ಡಾಕ್ಟೊರೇಟ್‍ಗಿಂತ ಅಮೌಲ್ಯವಾದ ಫಲ, ಇದೇ! ಈ ಮಾತನ್ನು ಧನ್ಯತೆಯಿಂದ ಬರೆಯುವ ಭಾಗ್ಯ ನನ್ನದು. ನಾಲ್ಕುಜನಕ್ಕೆ ಈ ಅಲ್ಪಕೃತಿಯಿಂದ ಪ್ರಯೋಜನವಾದರೆ, ಮುಂದೆ ಎಲಿಯಟ್ಟನ ವಿಷಯಕ್ಕೂ, ಇತರ ಆಂಗ್ಲ ಕವಿಗಳ ಬಗೆಗೂ ಈ ಮಾದರಿಯ ಗ್ರಂಥಗಳನ್ನು ಬರೆಯುವ ವಿಚಾರವಿದೆ. ಗೆಳೆಯ ಪ್ರೊ. ಶಿವಾನಂದ ಗಾಳಿಯವರು ಈ ಬಗೆಗೆ ಹಗಲೆಲ್ಲ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಈ ಪುಸ್ತಿಕೆಗೆ ಸಿಗುವ ಪುರಸ್ಕಾರ, ಪ್ರೋತ್ಸಾಹ ಅದನ್ನು ನಿರ್ಧರಿಸಲಿದೆ.

    Original price was: ₹50.00.Current price is: ₹30.00.
    Add to basket
  • -40%

    ಅಮೀನಪುರದ ಸಂತೆ

    0

    ಅಮೀನಪುರದ ಸಂತೆ
    ಕಥಾ ಸಂಕಲನ

    ಕನ್ನಡ ರಂಗಭೂಮಿಯ ವೈವಿಧ್ಯಗಳನ್ನು ಹೆಚ್ಚಿಸಿದ್ದಾರೆ. ಮಾಸ್ತಿ, ಅನಂತಮೂರ್ತಿ, ತೇಜಸ್ವಿ, ಕುಂ.ವೀರಭದ್ರಪ್ಪ ಮೊದಲಾದವರು ಸಣ್ಣಕತೆಗಳ ಆಳ, ವಿಸ್ತಾರವನ್ನು ಗಮನಾರ್ಹವಾಗಿ ವಿಸ್ತರಿಸಿದ್ದಾರೆ. ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯಗಳೆಂಬ ಘಟ್ಟಗಳ ಮೂಲಕ ಹಾದು ಬಂದ ಕನ್ನಡ ಸಾಹಿತ್ಯವು ಈ ಶತಮಾನದ ಅಂಚಿನಲ್ಲಿ ಮತ್ತೆ ಹೊಸತನಕ್ಕಾಗಿ ಹಾತೊರೆಯುತ್ತಿದೆ. ಮಲ್ಲಿಕಾರ್ಜುನ ಹಿರೇಮಠರವರ ‘ಅಮೀನಪುರದ ಸಂತೆ’ಯಲ್ಲಿ ಅಂತಹ ಹೊಸ ಬಗೆಯ ತುಡಿತ ವೊಂದಿರುವುದನ್ನು ಪ್ರಸ್ತುತ ಪ್ರಬಂಧದಲ್ಲಿ ಗುರುತಿಸಲು ಪ್ರಯತ್ನಿಸಲಾಗಿದೆ.

    Original price was: ₹70.00.Current price is: ₹42.00.
    Add to basket
  • -25%

    ಅಪರಂಜಿ –  ಸೆಪ್ಟೆಂಬರ್ ೨೦೧೭

    0

    ಅಪರಂಜಿ –  ಸೆಪ್ಟೆಂಬರ್ ೨೦೧೭

    ತಿಳಿನಗೆಯ ಕಾರಂಜಿ
    ಸಂಪುಟ ೩೪
    ಸಂಚಿಕೆ – ೧೨

    ಈ ಸಂಚಿಕೆಯಲ್ಲಿನ  ಬರಹಗಳು ಈ ಕೆಳಗಿನಂತಿವೆ :

    ಅಪರಂಜಿ ಸೆಪ್ಟೆಂಬರ್ – ೨೦೧೭
    ಅಪರಂಜಿ ಕಿಡಿ
    “ನಮ್ಮ ಮಿಮ್ಮಲ್ಲಿ”
    ವಾಲ್ಮೀಕಿ ಸೃಷ್ಟಿಸಿದ ಛಂದಸ್ಸು ಅವನದ್ದಲ್ಲ ಎನ್ನಬಹುದೆ?
    ಮೈಸೂರು ಪೇಟ
    ಐ.ಟಿ. ದಾಳಿ!
    ಸಂಜೆಹೊತ್ಗೆ ಸೀರೆ ಎಂಟ್ಮೊಳ ನೇಯ್ದರಂತೆ
    ಪಂಚ್ ಪದ್ಯಗಳು
    ಕೇಶ ಕ್ಲೇಶ ಕಳೆದಾಗ
    ಬ್ರೇಕಿಂಗ್ ನ್ಯೂಸ್
    ಭುಕ್ಕುಂಡ ವಿಜಯ
    ಹೀಗೊಂದು ಮದುವೆ
    ವೀಕ್ ಎಂಡ್ ವಿಥ್ ವೆಂಡರ್
    ತುಂತುರು ತುಂತುರು ತುಂತುರು ತುಂತುರು ತುಂತುರು ತುಂತುರು ತುಂತುರು
    ಸೇವಾ……….ಸಂಘ
    ವ್ಯಂಗ್ಯ ಮೆಲುಕು

    Original price was: ₹20.00.Current price is: ₹15.00.
    Add to basket
  • ‘ಅಂಗೋಲ’ ಅನ್ನುವ ಮುದ್ರಣ ದೋಷ (ಅವಧಿ – ಸಂಚಿಕೆ – ೧೨)

    0

    ‘ಅಂಗೋಲ’ ಅನ್ನುವ ಮುದ್ರಣ ದೋಷ

    (ಅವಧಿ – ಸಂಚಿಕೆ – ೧೨)
    ೯-೯-೨೦೧೭ ರಿಂದ ೧೬-೯-೨೦೧೭ ರವರೆಗೆ ಪ್ರಕಟವಾದ ಲೇಖನಗಳು.

    ಈ ಸಂಚಿಕೆಯಲ್ಲಿನ ಲೇಖನಗಳು :

    `ಒಂದು ಗುಡ್ ಬೈನೂ ಇಲ್ಲ…. ಹೋಗಿಬಿಟ್ರಾ?’, ಅಂತ ಅನ್ನಿಸ್ತು.
    ಸಂತೆಯೊಳಗೆ ಸಿಕ್ಕ ಸಂತ ಕಾಡಲ್ಲಿ ಕಣ್ಮರೆಯಾದ..
    ಯಾಕಳುವೆ ತೇಜಸ್ವಿ..??
    MEN 6625
    ‘ಹಾಯ್ ತೇಜಸ್ವಿ..’ ಮಾಡಿದ್ದು ಹೀಗೆ..
    ತೇಜಸ್ವಿ ಎಂಬ ‘ಮ್ಯಾಜಿಕ್’
    ತೇಜಸ್ವಿ ‘ಜೇಡಲೋಕ’
    ‘ಚಿದಂಬರ ರಹಸ್ಯ’ ರಂಗದ ಮೇಲೆ
    ಅಪ್ಪಾಜಿ, ಅಮ್ಮಾಜಿ, ಇಂದಿರಾಜಿ…
    ಸಜ್ಜಾಗುತ್ತಿದೆ ಊರು.. ಇನ್ನು ಒಂದೇ ವಾರಕ್ಕೆ ತೇರು..
    ಗೌರಿ ಹತ್ಯೆ ಪ್ರತಿರೋಧಕ್ಕೆ ಸಜ್ಜಾಯಿತು ಸೆಂಟ್ರಲ್ ಕಾಲೇಜ್
    ಗೌರಿಗಾಗಿ ಸಜ್ಜಾಗುತ್ತಿದೆ ಕೊಡೆಗಳು ..
    ಇಂಥ ಐಎಎಸ್ ಅಧಿಕಾರಿಯೂ ಇರ್ತಾರೆ…
    GST ಎಂಬುದು ‘ಗಡಿಬಿಡಿ ಸಾಂತಾಣಿ ಟ್ಯಾಕ್ಸ್!’
    ಯು ಆರ್ ಅನಂತಮೂರ್ತಿ ಸಮೀಪ ದರ್ಶನ
    ಹುಡುಗಿ, ನೀನು ಅದಾವ ಸಂತನ ಸೃಷ್ಠಿ..
    ‘ನಾನು ಗೌರಿ’ ಪ್ರತಿರೋಧ ಸಮಾವೇಶ
    ‘ನಾನು ಗೌರಿ’ ಪ್ರತಿರೋಧ ಸಮಾವೇಶ ಮೆರವಣಿಗೆಯ ಪೋಟೋ ಆಲ್ಬಂ
    ಪಾಟೀಲರು ಇನ್ನು ನೆನಪು ಮಾತ್ರ..
    `ಅಂಗೋಲ’ ಅನ್ನುವ ಮುದ್ರಣದೋಷ..
    ಅಕ್ಕ ಬಯಲಾದಳು?!
    ಆರತಿ ‘ಸ್ಮೋಕಿಂಗ್ ಜೋನ್’
    ಅಂದ್.. ಯಾನ್ ಕುಡ್ಲದಾಯೆ..
    ಕಟಕಟೆಯಲ್ಲಿ ನಿಂತ ಕವಿತೆ..
    ತೂಗುವ ತೋಳ್ತೊಡೆಯ ಬೀಗು ಬಾಹುವಿನ ಕದನೋತ್ಸಾಹ..
    ದುಗುಡದ ನೆನಪು..
    ಬೇತಾಳದ ಚಂಗೋಲೆ..
    ದಾಭೋಲ್ಕರ್ ಎಂದರೆ..
    ನಾನು, ನನ್ನ ಅಣ್ಣ ಹಾಮಾನಾ..
    ಓ, ಜ್ಞಾನವೆಂಬುದು ಎಷ್ಟು ಭಯಂಕರ..
    ಚಿಟಿಕೆ ಸಾಸಿವೆಯ ಮುಂದೆ..

    15.00
    Add to basket
  • ಗೌರಿಯ ಪಯಣ (ಅವಧಿ – ಸಂಚಿಕೆ – ೧೧)

    0

    ಗೌರಿಯ ಪಯಣ

    (ಅವಧಿ – ಸಂಚಿಕೆ – ೧೧)
    ೨-೯-೨೦೧೭  ರಿಂದ ೮-೯-೨೦೧೭  ರವರೆಗೆ ಪ್ರಕಟವಾದ ಲೇಖನಗಳು.

    ಈ ಸಂಚಿಕೆಯಲ್ಲಿನ ಲೇಖನಗಳು :

    ‘ಸಿಲೋನ್ ಸೈಕಲ್’ ಪೋಟೋ ಆಲ್ಬಂ
    ನನಗೆ ಪ್ರೇಮಿಸಲೂ ಬರುತ್ತದೆ ಆರೀಫ್ ಮಿಂಯಾ….
    ‘ಬುಕ್ ಕಾರ್ನರ್’ನಲ್ಲಿ ಆನಂದ ಕುಂಚನೂರ
    ಪೂರ್ಣ ವಿರಾಮದಲ್ಲಿ ಎಲ್ಲವೂ ಅಂತ್ಯ..
    ಷರೀಫಾ..
    ಕನ್ನಡ ಸಿನಿಮಾ ಅಂತ ನೋಡಿ’ ಅನ್ನೋದಿದ್ಯಲ್ಲ..
    ಮೊನ್ನೆ ಕಾದಂಬರಿಯನ್ನು ಕೈಗೆತ್ತಿಕೊಂಡೆ..
    ಮುಗಿದ ‘ಅಮೃತಯಾನ’
    ‘ಮಾರಿಬಿಡಿ’ ಆಲ್ಬಮ್
    ಇದೂ ಸೋನಿಯಾ ಟ್ರಿಕ್ ಅಲ್ಲವೇ?
    ಇವತ್ತೂ ರಾತ್ರಿ ಐದೂವರೆ ಕೋಟಿ ಖಾಲಿ ಹೊಟ್ಟೆಗಳು!
    ಪ್ರಶ್ನೆಯಷ್ಟೆ! ಯಾವ ಕುತೂಹಲವೂ ಇಲ್ಲ..
    ಮೂರು ತನಿಖಾ ತಂಡ ರಚನೆ: ಸಿ ಎಂ ಘೋಷಣೆ
    ಇದು ಒಬ್ಬರು ಕಲಬುರಗಿ, ಒಬ್ಬರು ಗೌರಿ ಲಂಕೇಶ್ ಅವರ ಹತ್ಯೆಅಲ್ಲ..
    ಸಾವಿನ ಸಂಚಿನ ಬಗ್ಗೆ ಮೊದಲೇ ಗೌರಿ ಲಂಕೇಶ್ ಗೆ ಗೊತ್ತಿತ್ತಾ?
    ಗೌರಿ ಲಂಕೇಶ್ ಹತ್ಯೆ
    ಅವಳು ನಿರ್ಗಮನದ ಹಾದಿಯಲ್ಲಿದ್ದಳು. ತಾಯಿಗೆ ಹೇಗೆ ಹೇಳಲಿ..
    ಅವು ಸಿಕ್ಕಿ ಬಿಟ್ಟವು..
    ಈ ಎಲ್ಲಕ್ಕೂ ಗುರುವೇ ನಮಸ್ಕಾರ..
    ಒಂದೂವರೆ ನಿಮಿಷ…
    ನೀಲು…
    ಗೌರಿ ಜೊತೆ ಅವಧಿ
    ಗೌರಿಯ ಪಯಣ…
    ಗೌರಿ ಅಂತಿಮ ದರ್ಶನ…
    ಮಿಸ್ ಯೂ ಗೌರಿ…
    ಅದೇ ಪಿಸ್ತೂಲ್..
    ನಕ್ಸಲ್ ಮಾತು ಯಾಕೆ ಬಂತು?: ಕವಿತಾ ಲಂಕೇಶ್
    ಗೌರಿ ಇಲ್ಲವಾದ ಮರು ದಿನ…
    ಟ್ಯಾಕ್ಸ್ ಕೊಡಲ್ಲ ಅಂದ್ರೆ ಕೊಡಲ್ಲ..
    ನನಗೆ ಸಾವಿದೆ.. ನನ್ನ ವಿಚಾರಗಳಿಗಲ್ಲ
    ಅಲ್ಲಿ ಗೌರಿ ತಣ್ಣಗೆ ಮಲಗಿದ್ದಳು…
    ಮೌನ ನಮ್ಮ ಆಯ್ಕೆ ಆಗದಿರಲಿ.. : ಗೌರಿ ಹತ್ಯೆ ಬಗ್ಗೆ ಪಿ ಸಾಯಿನಾಥ್
    ಈ ಭಾನುವಾರ ‘ರಕ್ತವರ್ಣೆ’

    15.00
    Add to basket
  • ‘ಚಂದ್ರ’ನಿಗೆ ಸಿಕ್ಕ ಗಣೇಶ  (ಅವಧಿ – ಸಂಚಿಕೆ – ೧೦)

    0

    ‘ಚಂದ್ರ’ನಿಗೆ ಸಿಕ್ಕ ಗಣೇಶ 

    (ಅವಧಿ – ಸಂಚಿಕೆ – ೧೦)
    ೨೫-೦೮ -೨೦೧೭  ರಿಂದ ೧-೯- ೨೦೧೭  ರವರೆಗೆ ಪ್ರಕಟವಾದ ಲೇಖನಗಳು.

    ಈ ಸಂಚಿಕೆಯಲ್ಲಿನ ಲೇಖನಗಳು : 

    ಗ..ಗ..ಗ..ಗ..ಗಣೇಶ
    ‘ಚಂದ್ರ’ನಿಗೆ ಸಿಕ್ಕ ಗಣೇಶ
    ಆಡಿದ ಮಾತುಗಳೆಲ್ಲ ವಚನಗಳೇನಲ್ಲ..
    ಚಂದ್ರನ ರೊಟ್ಟಿಗಳು..
    ಕಲ್ಬುರ್ಗಿ ಹತ್ಯೆ: ಉತ್ತರ ಕೊಡಿ
    ನನ್ನ ಪುಸ್ತಕಗಳಾದರೂ ಎಂಥವು!
    ಜೋಯ್ಡಾದ ಹುಡುಗಿಯ ಪುಳಕ
    ‘ಅಭಿನವ’ಕ್ಕೆ ರಾಷ್ಟ್ರೀಯ ಪ್ರಶಸ್ತಿ ಗರಿ
    ಕಾರಂತರ ಜೊತೆ ‘ಕಲಾ ಮಾಧ್ಯಮ’
    ಇಸ್ತ್ರಿ ಗಣೇಶ.. ಮಿಕ್ಸರ್ ಗಣೇಶ..
    ಎಲೆಲೆ.. ಸಿಂಧು
    ‘ಆಧಾರ್’ ಎಂಬುದು ಮಹಾ ಹಗರಣದ ‘ಕಣಿ’
    ಚಲಿಸೊ ಮೋಡವ ತಡೆದು, ನಿನ್ನ ಹೆಸರನು ಬರೆದು..
    ವೇಳು, ನಮ್ಮ ವಿವೇಕ ಎಲ್ಲಿ ಹೋಯ್ತು ಹೇಳು!
    ಪ್ರತಿಭಾವಂತ ಬರಹಗಾರನ ಕತೆಗಳಿವು..
    ಬೆಳಕು ಕಂಡದ್ದೆ ಹೀಗೆ
    ಪ್ರೀತಿಯ ಶ್ರೀಧರ್ ಅಂಕಲ್‍ಗೆ…
    ‘ಅತಿಯಾದ ಭಾವುಕತೆಯನ್ನು ತೋರುವ ಭಾರತದಂತಹ ದೇಶದಲ್ಲಿ ಸಂಶೋಧಕರ ಜೀವನ ಸುಲಭ ಸಾಧ್ಯವಲ್ಲ..’
    #ಉತ್ತರಕೊಡಿ
    ಅರಿವು ಕೂಡ ಪ್ರತಿಭಟನೆಯ ರೂಪ
    ಅಯ್ಯಯ್ಯೋ.. ಉಪೇಂದ್ರ
    ಚಿಂತನೆಗಳ ಹಂತಕರೂ.. ಹಂತಕರ ಚಿಂತನೆಗಳೂ..
    ಇದು ‘ಕತ್ತಲೆ ಕಾನು’
    ಬಂಬಯ್ಯಾ!
    ಒಡೆದಿದ್ದು ಹೃದಯವಲ್ಲವಲ್ಲಾ..
    ನೆಲಮೂಲದಲ್ಲಿ ಬರೆಯುವ ‘ಅಷ್ಟೆ’
    ವಿದಾಯಕ್ಕೆಷ್ಟು ಸಂಜೆಗಳು..

    15.00
    Add to basket
  • -40%

    ಗಾಂಧಿಯನ್ನು ನಿಜವಾಗಿ ಕೊಂದವರು ಯಾರು?

    0

    ಗಾಂಧಿಯನ್ನು ನಿಜವಾಗಿ ಕೊಂದವರು  ಯಾರು?

    ನಾನು ರಾಜಕಾರಣಿಯೂ ಅಲ್ಲ. ರಾಜಕಾರಣ ವಿಶ್ಲೇಷಣೆಯು ನನ್ನ ಪ್ರಧಾನ ಕ್ಷೇತ್ರವೂ ಅಲ್ಲ. ಸಾಹಿತ್ಯದ ಅಧ್ಯಯನ, ಅದರ ಪ್ರಯೋಜನವನ್ನು ಸಾರ್ವಜನಿಕರಿಗೆ ರಾಷ್ಟ್ರೀಯ ಹಿತದೃಷ್ಟಿಯಿಂದ ಬಡಿಸುವ ಕಾಯಕ, ನಿರಂತರ ಚಿಂತನ-ಋಷಿಮುನಿಗಳ ಪ್ರಾಚೀನ ಪರಂಪರೆಯಲ್ಲಿ ಬಂದ ಲೋಕ ಸಂಗ್ರಹ ವಿಚಾರಗಳ, ಭಾವನೆಗಳ, ಅಧ್ಯಾತ್ಮಶಕ್ತಿಯ ಜಾಗೃತಿಗಳ ಕಾಯಕವನ್ನು ನನಗೆ ಸಾಧ್ಯವಾದ ಮಟ್ಟಿಗೆ ಮಾಡಿಕೊಂಡು ಲೋಕಕ್ಕೆ ಸ್ಪಂದಿಸುವ ಒಬ್ಬ ನಿವೃತ್ತ ಪ್ರಾಧ್ಯಾಪಕ. ಇದೆಲ್ಲ ನಿಮಗೆ ಗೊತ್ತೇ ಇದ್ದೂ ನಾನಿಲ್ಲಿ ನೆನಪಿಸುವ ಅಗತ್ಯ ಏಕೆ ಇದೆ? ಎಂದು ಹೇಳಲೇ ಬೇಕಾಗಿದೆ.
    ಅನೇಕ ಮುಗ್ಧ ಭಾರತೀಯರಂತೆ ನಾನೂ ಮ|| ಗಾಂಧಿಯವರನ್ನು ಮೆಚ್ಚಿಕೊಂಡ ಕಾಲ ಇತ್ತು. ‘ಗಾಂಧಿ, ನೆಹ್ರೂ’ ಎಂದೊಡನೆ `ಜೈ ಎನ್ನುವ ಬಾಲ್ಯ ಇತ್ತು. ೧೯೫೦ರ ಸುಮಾರಿಗೆ ನೆಹ್ರೂ ಭ್ರಮೆ ಬಿಡಲಾರಂಭಿಸಿತ್ತು. ಈ `ನೆಹ್ರೂ’ ಮೂಲ ಯಾವುದು? `ಇವರು ನಿಜ ರಾಷ್ಟ್ರ ಭಕ್ತರೇ? ಸ್ವತಂತ್ರ ಚಿಂತಕರೇ? ತ್ಯಾಗಶೀಲರೇ? ಶೀಲವುಳ್ಳ, ವಿಶ್ವಸನೀಯ ನಾಯಕರೇ?’ ಎಂದು ಪ್ರಶ್ನೆ ಕೇಳಿಕೊಳ್ಳುತ್ತಾ ಹೋದಂತೆ, ಓದು ವ್ಯಾಪ್ತಿ, ಚಿಂತನ, ಚರ್ಚೆ, ಸಮಾಲೋಚನೆಗಳು ನಡೆಯುತ್ತಾ ಬಂದಂತೆ, `ಇವರು ಗಾಂಧಿ ಪ್ರಭಾವದ ದುರ್ಬಳಕೆಯ ಮಹಾಸ್ವಾರ್ಥಿ, ಎಷ್ಟೂ ಭಾರತೀಯತೆಯ ಪರಿಚಯವಿಲ್ಲದ ಢೋಂಗೀ ರಾಜಕಾರಣಿ’ ಎಂಬುದಕ್ಕೆ ಅವರದೇ ನಡೆವಳಿಕೆಗಳು, ರಾಷ್ಟ್ರಾವನತಿ, ತಪ್ಪು ಹೆಜ್ಜೆಗಳು ಪ್ರಮಾಣೀಕರಿಸುತ್ತಾ  ಬಂದವು. ಘಾತಕತನ, ಸಾಕ್ಷಿಗಳ ಕುಕ್ಕುವ ಬೆಳಕಿನಲ್ಲಿ ದೇವರೆಂದು ಭಾವಿಸಿದ್ದವನಿಗೆ ದೆವ್ವದ ಸಾಕ್ಷಾತ್ಕಾರವಾಯ್ತು. ಆಗುತ್ತಲೇ ಇದೆ. ಈ ಬೆಳಕಿನಲ್ಲೇ `ಸುಭಾಷರ ಕಣ್ಮರೆ’ ಪುಸ್ತಕವನ್ನು ನಾನು ಬರೆದದ್ದು. ರಾಮಾಯಣ, ಮಹಾಭಾರತ, ಭಾಗವತಗಳ ಆಸುರೀ ಶಕ್ತಿಗಳು, ಅವುಗಳ ಶಕ್ತಿ, ಹಿಡಿತ, ಅವುಗಳ ಬೇರು, ವಿಷಫಲಗಳು ಈಗಣ ಭಾರತದಲ್ಲೂ ಕಾಣಲಾರಂಭಿಸಿ, ನಾನು ಕ್ಷೇತ್ರಾಂತರದಲ್ಲೂ ದುಷ್ಟ ಪಾತ್ರಗಳ ಪರಿಚಯಕ್ಕೆ ಕೈ ಹಾಕುವ ಕೆಲಸಕ್ಕೆ ಬಂದುದು ಆಕಸ್ಮಿಕವಾಗಿ ಕಂಡರೂ ದೈವಪ್ರೇರಣೆಯೂ ಕಾಣಲಾರಂಭಿಸಿದೆ.

    Original price was: ₹150.00.Current price is: ₹90.00.
    Add to basket
  • -40%

    ಶ್ರೀರಾಮ ಜನ್ಮಭೂಮಿ ತೀರ್ಪು

    0

    ಶ್ರೀರಾಮ ಜನ್ಮಭೂಮಿ ತೀರ್ಪು
    ಹಿಂದು, ಇಂದು, ಮುಂದು, ಸುತ್ತ

    ಈ ಪುಟ್ಟ ಗ್ರಂಥದ ಮೂರು ಮುಖ್ಯ ಲೇಖನಗಳನ್ನು ನಾನು ಸಮೀಪ ಕಾಲದಲ್ಲಿ ಕರ್ನಾಟಕದ ಬೇರೆ ಬೇರೆ ಪತ್ರಿಕೆಗಳಿಗಾಗಿ ಬರೆದದ್ದು. 2ನೆಯದು ಒಂದು ಮಾತ್ರ ಈ ಪುಸ್ತಕದಲ್ಲಿ ಸೇರ್ಪಡೆಗಾಗಿಯೇ ಬರೆದದ್ದು. ಎಲ್ಲಾ ಪರಸ್ಪರ ಸಂಬಂಧಿಸಿದ್ದು. ಕೋಲಾಹಲಕರವಾದ ಇಂದಿನ ಅವ್ಯವಸ್ಥೆಯ ಸ್ಥಿತಿಯಲ್ಲಿ ಒಂದು ವಾಸ್ತವವಾದ, ಸರ್ವೇಕ್ಷಣ ಚಿತ್ರವನ್ನು ನೀಡುತ್ತದೆಂದು ನಂಬಿದ್ದೇನೆ. ನಮ್ಮ ಜನ ಮುಗ್ಧರು ಮಾತ್ರವಲ್ಲ, ಮೂಢರೂ, ಮತಿಭ್ರಷ್ಟಾವಸ್ಥೆಯಲ್ಲಿರುವ ವಿಭ್ರಮಶೀಲರು! ಗುಲಾಮಗಿರಿಯ ಗುಂಗಿನಿಂದ ಇನ್ನೂ ಹೊರಬರಲಾಗದ ಈ ಅಸಹಾಯಕ ದುಃಸ್ಥಿತಿಯ ಲಾಭ ಪಡೆಯುತ್ತಿರುವವರು ನೆಹ್ರೂ ಪರಂಪರೆಯ ಇತಿಹಾಸ ಪ್ರಜ್ಞಾಶೂನ್ಯ, ಭ್ರಾಂತ ರಾಜಕಾರಣಿಗಳು, ಅಸತ್ಯದ ವಿಲಾಸದಲ್ಲಿ ಅಸಂಬದ್ಧ ಕನಸು ಕಾಣುತ್ತಿರುವ ಉನ್ಮತ್ತರು, ದುರಾಸೆಯ, ದುರಾಲೋಚನೆಯ ಅಲ್ಪಸಂಖ್ಯಾತ ಮುಖಂಡ ರಾಜಕಾರಣಿಗಳು, ಕಾಮ್ರೇಡರು ಮತ್ತು ಪೊಳ್ಳು ಸೆಕ್ಯುಲರಿಜಂ ಪ್ರವಾಹದಲ್ಲಿ ಕೊಚ್ಚುತ್ತಿರುವವರ ಓಟು ಬೇಟೆಯಲ್ಲಿರುವ ಎಲ್ಲ ದುಷ್ಟ ಸಂಚಿನ ರಾಜಕಾರಣಿಗಳು, ವಿದೇಶೀ ದ್ರೋಹ ಶಕ್ತಿಗಳು.

    Original price was: ₹100.00.Current price is: ₹60.00.
    Add to basket
  • -40%

    ರಾಜಧರ್ಮ-ರಾಜನೀತಿ ಭಾಗ ೧

    0

    ರಾಜಧರ್ಮ, ರಾಜನೀತಿ ಭಾಗ ೧ 

    ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವುದು ಕಷ್ಟದ ಕೆಲಸ ಎಂದು ನನ್ನ ಅನುಭವ. ಬೇರೆಯವರ ಅಭಿಪ್ರಾಯವು ಬೇರೆಯೇ ಇದ್ದರೆ ಅದಕ್ಕೆ ಅವರವರೇ ಹೊಣೆ. ಬರೆಯುವವನ “ವ್ಯವಸಾಯ” – ಅಂದರೆ ಓದಿನ ವ್ಯಾಪ್ತಿ, ಅದರ ಸಾಂದರ್ಭಿಕ ಅನ್ವಯಿಕೆ, ಸಂಗತಿಗಳನ್ನು, ಸಂದರ್ಭಗಳನ್ನು ನೋಡುವಲ್ಲಿ, ಅರಿಯುವಲ್ಲಿ, ವಿಶ್ಲೇಷಣೆ ಮಾಡುವಲ್ಲಿ ಇರಬೇಕಾದ ನಿರ್ದಿಷ್ಟ ಸಾಮುದಾಯಿಕ, ಸಾರ್ವತ್ರಿಕ ಹಿತ, ನಿಷ್ಠುರವಾದರೂ ಸತ್ಯವನ್ನು ಹೇಳುವ ಛಲ, ಎದೆಗಾರಿಕೆ, ಅದಕ್ಕೆ ಬೇಕಾದ ಸಮರ್ಥನೆಗಳನ್ನು ಓದಿನಿಂದಲೂ, ಅನುಭವದಿಂದಲೂ ನಿರೂಪಿಸುವ ಪರಿಶ್ರಮ – ಅಡಕವಾಗಿ, ಓದುಗರ ಎಲ್ಲ ವರ್ಗಗಳನ್ನೂ ಮನದಲ್ಲಿಟ್ಟು, ತಿಳಿಯುವಂತೆ ಎಚ್ಚರ ವಹಿಸಬೇಕಾದ ಬರೆಹದ ಬಿಗಿ, ತಿಳಿ, ಭಾರವಾಗದ ಶೈಲಿ, ಅಲ್ಲಲ್ಲಿ ನೆನಪುಗಳು, ವ್ಯಕ್ತಿ ಚಿತ್ರಣ, anecdotes , ರೋಚಕವಾದ ಸಂಗತಿಗಳು ಎಲ್ಲೋ ಚದುರಿದ್ದರೂ, ಸಣ್ಣವಾಗಿದ್ದರೂ, ಹಿಡಿಯುವ ಸೂಕ್ಷ್ಮತೆ, ವಾರಾವಾರ ಪತ್ರಿಕಾಲಯಕ್ಕೆ ಸಕಾಲಕ್ಕೆ ತಲುಪಿಸಬೇಕಾದ ಹೊಣೆ, ಎಚ್ಚರ – ಇಂಥವು ಸುಲಭಸಾಧ್ಯವಾಗಿ ವಶವಾಗುವ ಗುಣಗಳಲ್ಲ. ಎಲ್ಲರೂ ಹೀಗೆ ಬರೆಯತ್ತಾರೋ ಇಲ್ಲವೋ, ಎಂಬುದು ನಿಮಗೂ ಗೊತ್ತಿದೆ. ಬರೀ Journalistic  ಎಂಬ ರೀತಿಯ ಸುದ್ದಿ ವಿಶ್ಲೇಷಣೆಗೇ ಮೀಸಲಾದ ಅಂಕಣ ಬರೆಹಗಾರರ ರೀತಿ ಬೇರೆ. ಅಲ್ಲಿ ಸೂಕ್ಷ್ಮತೆ, ವಿಶ್ಲೇಷಣಾ ಕುಶಲತೆ, ಸಮಗ್ರ ಸಂಗತಿಗಳ ಪಕ್ಷಿ ವೀಕ್ಷಣ, ಸುದ್ದಿ ಸಾಮೀಪ್ಯ, ತಕ್ಕಮಟ್ಟಿನ ನಿಷ್ಪಕ್ಷಪಾತತೆ, ಅತಿರೇಕ, ಆಕ್ರೋಶ, ಇಲ್ಲದ ಶೈಲಿ, ಓದುಗನನ್ನು ಮೆಚ್ಚಿಸಹೊರಡದ ಸುದ್ದಿನಿಷ್ಠೆ, ವಸ್ತು ನಿಷ್ಠೆ – ಬರೀ “report ” ಆಗದಂತೆ ವಹಿಸಬೇಕಾದ ಎಚ್ಚರ, ಇವು ಒಂದು ಬಗೆ.

    Original price was: ₹350.00.Current price is: ₹210.00.
    Add to basket
  • -40%

    ಶ್ರೀ ಭಾಗವತ ಕಥಾ ಪ್ರಪಂಚ

    0

    ಶ್ರೀ ಭಾಗವತ ಕಥಾ ಪ್ರಪಂಚ

    ಶ್ರೀ ಭಾಗವತಧಾರಾತೀರ್ಥ ವಾಹಿನಿ

    ಈ “ಶ್ರೀ ಭಾಗವತ ಧಾರಾತೀರ್ಥವಾಹಿನೀ-ಶ್ರೀ ಭಾಗವತ ಕಥಾ ಪ್ರಪಂಚ” ಗ್ರಂಥದ ಪ್ರಕೃತ ಸಂಪುಟದ ಬಹುಭಾಗವನ್ನು ನಾನು ಬರೆದೇ ೧೬- ಅಥವಾ ೧೮ ವರ್ಷಗಳಾಗಿರಬೇಕು. ಮೊದಲ ಭಾಗಕ್ಕೆ ಸೇರ್ಪಡೆಯಾಗಬೇಕಿದ್ದ ಇನ್ನಷ್ಟನ್ನು ಇದೀಗ ಸೇರಿಸಿ ಒಂದು ರೂಪಕ್ಕೆ ತಂದು, ನನ್ನ ಮಿತ್ರ ಶ್ರೀ ಸುಬ್ರಹ್ಮಣ್ಯ ಅವರ ಪ್ರಕಾಶನದಿಂದ ಪ್ರಕಟಿಸಿ ನಿಮ್ಮ ಕೈ ಸೇರುವಂತೆ ಮಾಡಲಾಗಿದೆ. “ಈ ಗ್ರಂಥ ಏಕೆ ಇಷ್ಟು ತಡವಾಯಿತು? ಇದರಲ್ಲೇನಿದೆ? ಇದರ ಅವಶ್ಯಕತೆಯೇನು?” ಎಂಬ ಬಗೆಗೆ ನಾಲ್ಕು ಮಾತು ವಿವರಣೆ ಅವಶ್ಯವಾಗುತ್ತದೆ.
    “ಶ್ರೀಕೃಷ್ಣಾವತಾರ” (ಎರಡು ಭಾಗಗಳು) ಬರೆದಾಗಿತ್ತು. ಮೊದಲನೆಯದು ಭಾಗವತ ದಶಮಸ್ಕಂಧದ ಪೂರ್ವಾರ್ಧದ ಕಾದಂಬರೀಕರಣ, ಕಥಾರೂಪ ನಿವೇದನೆಯಾಗಿದ್ದು “ತರಂಗ” ವಾರಪತ್ರಿಕೆಯಲ್ಲಿ ಪ್ರಕಟವಾಗಲು ವಾರಾವಾರಾ ಕಂತಿನಲ್ಲಿ ಬರುವಂತೆ ಬರೆಯಲಾಗಿದ್ದು ಪ್ರಕಟವೂ ಆಯಿತು.

    Original price was: ₹350.00.Current price is: ₹210.00.
    Add to basket
  • -40%

    ಆಳ್ವಾರರು ಮತ್ತು ಹರಿದಾಸರು

    0

    ಆಳ್ವಾರರು ಮತ್ತು ಹರಿದಾಸರು

    ಹರಿದಾಸರು, ಆಳ್ವಾರುಗಳು, ಶರಣರು, ಉತ್ತರ ಭಾರತೀಯ ಭಕ್ತಿ ಸಾಹಿತ್ಯ ರಚಯಿತರಾದ ಸಂತರು, ಭಕ್ತರು – ಇವರೇ ನಮ್ಮ ಸಂಸ್ಕೃತಿಯನ್ನು ಆಪತ್ಕಾಲದಲ್ಲಿ ವಿದೇಶೀಪ್ರಭಾವ, ಮತಾಂತರ ಹಾವಳಿಯಿಂದ ರಕ್ಷಿಸಿದವರು. ಯೋಗಿಗಳು, ಜ್ಞಾನಿಗಳು. ಪ್ರಕೃತ ಗ್ರಂಥದಲ್ಲಿ ನಾನು ಆಳ್ವಾರರುಗಳ ಮತ್ತು ಹರಿದಾಸರ ಕೊಡುಗೆಗಳು, ಶೈಲಿ ವ್ಯತ್ಯಾಸಗಳು, ಪರಸ್ಪರ ಪ್ರಭಾವಸಾಧ್ಯತೆಗಳನ್ನು ಕುರಿತು ಹಲವು ದಶಕಗಳ ಹಿಂದೆ ಉಡುಪಿಯಲ್ಲಿ ನೀಡಿದ ಉಪನ್ಯಾಸಗಳ ಮರುಮುದ್ರಣವಿದು.

    ಎಲ್ಲ ವೇದಾಂತವೂ ಅದಕ್ಕೆ ಪೂರಕವಾದ ತರ್ಕ ವ್ಯಾಕರಣಾದಿ ಶಾಸ್ತ್ರಗಳೂ ಪರಿಪೂರ್ಣತೆ ಹೊಂದಿ, ಪರಿಸಮಾಪ್ತಿ, ಸಮಗ್ರ ಪ್ರತ್ಯಕ್ಷಾನುಭವದ ರೂಪದಲ್ಲಿ ಉಪಾಸಕನಿಗೆ ದೊರಕುವುದೇ “ಯೋಗ”ದಲ್ಲಿ. ಹಾಗೆಂದರೆ ಬರೀ “ಆಸನ”ಗಳಲ್ಲ, ದೇಹ ವ್ಯಾಯಾಮ ಅಲ್ಲ. ಅಷ್ಟಾಂಗ ಯೋಗವಿಜ್ಞಾನಕ್ಕೇ ಭಕ್ತಿ ಎಂದು ಬೇರೊಂದು ಹೆಸರು. ಪಾತಂಜಲಯೋಗಕ್ಕೂ ಪೂರ್ವದ್ದು ಅಧ್ಯಾತ್ಮ ವೈದಿಕ ಯೋಗ. “ಮನಸ್ಸನ್ನು ದೇವರಿಂದ ತುಂಬುವುದೇ ಯೋಗ”. (ಯುಜ್ ಸೇರಿಸುವುದು). ಮನಸ್ಸನ್ನು “ಖಾಲಿ” ಮಾಡುವುದಲ್ಲ!

    Original price was: ₹50.00.Current price is: ₹30.00.
    Add to basket
  • -40%

    ಅಪರಂಜಿ – ೨೦೧೭ ಆಗಸ್ಟ್ 

    0

    ಅಪರಂಜಿ – ೨೦೧೭ ಆಗಸ್ಟ್ 
    ತಿಳಿನಗೆಯ ಕಾರಂಜಿ
    ಸಂಪುಟ ೩೪
    ಸಂಚಿಕೆ – ೧೧

    ಈ ಸಂಚಿಕೆಯಲ್ಲಿನ  ಬರಹಗಳು ಈ ಕೆಳಗಿನಂತಿವೆ :

    ಅಪರಂಜಿ ಆಗಸ್ಟ್ – ೨೦೧೭
    ಅಪರಂಜಿ ಕಿಡಿ
    “ನಮ್ಮ ನಿಮ್ಮಲ್ಲಿ”
    ರನ್ನನ ಕೌರವ ಗದೆಯಲ್ಲಿ ಗಾಳಿ ಬೀಸಿ ಭೀಮನನ್ನು ಬದುಕಿಸಿದ್ದಾ?
    ಹಸಿರೂರಿನ ದ್ವಂದ್ವಗಳು
    ಬರಗಾಲದಲ್ಲೂ ಬದುಕುವವರು…..
    ವೀಕೆಂಡ್ ವಿತ್ ಗುಂಡೇಶ್
    ಇಂದಿರಾ ಕ್ಯಾಂಟಿನ್
    ವ್ಯಂಗ್ಯ ಮೆಲುಕು
    ತುಂತುರು ತುಂತುರು ತುಂತುರು ತುಂತುರು ತುಂತುರು ತುಂತುರು ತುಂತುರು
    ಅಪರಂಜಿ ಬಳಗದ ಗುಜ್ಜಾರ್‌ಗೆ ರಾಜ್ಯ ಲಲಿತ ಕಲಾ ಅಕಾಡೆಮಿಯ ಪ್ರಶಸ್ತಿ
    ರಿಜಿಸ್ಟರ್ ಮ್ಯಾರೇಜ್
    ಮೂಗಿನ ತುದೀಲಿ ಕೋಪವಿದ್ರೆ…
    ‘ಅದು-ಇದು’ಗಳ ಸುತ್ತ ಮುತ್ತ

    Original price was: ₹20.00.Current price is: ₹12.00.
    Add to basket