-
-52%
ಜಾದೂಲೋಕದ ಮಾಂತ್ರಿಕ ಪ್ರೊ.ಶಂಕರ್
0ಜಾದೂಲೋಕದ ಮಾಂತ್ರಿಕ ಪ್ರೊ.ಶಂಕರ್
ಜಾದೂಗಾರ ಪ್ರೊ. ಶಂಕರರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ.
-
-39%
ಜೇನುಕೃಷಿ ತಜ್ಞ-ಹವ್ಯಾಸಗಳ ಹರಿಕಾರ ಪೈಲೂರು ಲಕ್ಷ್ಮೀನಾರಾಯಣ ರಾವ್
0ಜೇನುಕೃಷಿ ತಜ್ಞ-ಹವ್ಯಾಸಗಳ ಹರಿಕಾರ ಪೈಲೂರು ಲಕ್ಷ್ಮೀನಾರಾಯಣ ರಾವ್
ಪೈಲೂರು ಲಕ್ಷ್ಮೀನಾರಾಯಣ ರಾವ್ ರವರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ.
-
-52%
ಸಾಧನೆಯ ಬೆಳಕು ನಾವರಿಯದ ದೇರಾಜೆ
0ಸಾಧನೆಯ ಬೆಳಕು ನಾವರಿಯದ ದೇರಾಜೆ
ದೇರಾಜೆ ಸೀತಾರಾಮಯ್ಯನವರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ.
-
-52%
ಮಾತಿನ ಮಹಾಕವಿ ಶೇಣಿ ಗೋಪಾಲಕೃಷ್ಣ ಭಟ್ಟ
0ಮಾತಿನ ಮಹಾಕವಿ ಶೇಣಿ ಗೋಪಾಲಕೃಷ್ಣ ಭಟ್ಟ
ಮಾತಿನ ಮಹಾಕವಿ ಶೇಣಿ ಗೋಪಾಲಕೃಷ್ಣ ಭಟ್ಟರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ.
-
-52%
ಉದ್ಯಮರಂಗದ ಆದ್ಯಪ್ರವರ್ತಕ ವಿ.ಎಸ್. ಕುಡ್ವ
0ಉದ್ಯಮರಂಗದ ಆದ್ಯಪ್ರವರ್ತಕ ವಿ.ಎಸ್. ಕುಡ್ವ
ಉದ್ಯಮರಂಗದ ಆದ್ಯಪ್ರವರ್ತಕ ವಿ.ಎಸ್. ಕುಡ್ವರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ.
-
-52%
ವಾಸ್ತವವಾದದ ಸಾಹಿತಿ ರಾಮಚಂದ್ರ ಉಚ್ಚಿಲ
0ವಾಸ್ತವವಾದದ ಸಾಹಿತಿ ರಾಮಚಂದ್ರ ಉಚ್ಚಿಲ
ಸಾಹಿತಿ ರಾಮಚಂದ್ರ ಉಚ್ಚಿಲರ ಕಿರು ಜೀವನ ಚರಿತ್ರೆಯನ್ನು ಈ ಪುಸ್ತಕ ಒಳಗೊಂಡಿದೆ.
-
-50%
ಸಮಾಹಿತ-ವರ್ಷಾ ಸಂಚಿಕೆ-೨೦೧೭
0ಸಮಾಹಿತ
(ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ)
ವರ್ಷಾ ಸಂಚಿಕೆ
ಸಂಪುಟ-೨
ಸಂಚಿಕೆ-೫
ಸಪ್ಟಂಬರ್ – ಅಕ್ಟೋಬರ್ ೨೦೧೭ಇದೊಂದು ಸಾಹಿತ್ಯಿಕ ಸಾಂಸ್ಕೃತಿಕ ದ್ವೈಮಾಸಿಕ ಪತ್ರಿಕೆಯಾಗಿದೆ. ಡಾ. ಗಿರಡ್ಡಿ ಗೋವಿಂದರಾಜರ ಅಧ್ಯಕ್ಷತೆಯಲ್ಲಿ `ಸಮಾಹಿತ ಟ್ರಸ್ಟ್ ಧಾರವಾಡ’ ಸ್ಥಾಪನೆಗೊಂಡು ಅದರ ಆಶ್ರಯದಲ್ಲಿ `ಸಮಾಹಿತ’ ಸಾಹಿತ್ಯಕ ಸಾಂಸ್ಕೃತಿಕ ದ್ವೈಮಾಸಿಕವು ಧಾರವಾಡದ ಸಾಹಿತ್ಯ ಪತ್ರಿಕೆಗಳ ಪರಂಪರೆಯ ಹೊಸ ಪಲ್ಲವವಾಗಿ ಮೂಡಿಬರುತ್ತಿದೆ.
ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –
ಸಮಾಹಿತ ಸಪ್ಟಂಬರ್ – ಅಕ್ಟೋಬರ್ ೨೦೧೭
ನುಡಿದಡೆ ನುಡಿಗೆಟ್ಟ ನುಡಿಯ ನುಡಿವುದಯ್ಯ…
ಗಾಂಧಿ ಶಾಂತಿ ಮಾರ್ಗ : ಗಾಂಧಿ ಅಹಿಂಸಾ ಮಾರ್ಗವು ಸರಕಾರದ ದಬ್ಬಾಳಿಕೆ ನೀತಿಯೊಂದಿಗೆ ಹೊಂದಾಣಿಕೆ ಆಗಬಹುದೆ?
“ಮುಲಕ್ಕರಂ” ಪ್ರತಿಭಟಿಸಿ ಬಲಿಯಾದ “ನಂಗೇಲಿ”ಯ ನೈಜ ಕಥೆ
ವೀರಣ್ಣ ಮಡಿವಾಳ ಅವರ ಆರು ಕವಿತೆಗಳು…
ತಲ್ಲಣ, ವಿಸ್ಮಯದ ಸಾಮಾಜಿಕ ಧಾರ್ಮಿಕ ರಾಜಕಾರಣ…
ಸಂಧ್ಯಾದೇವಿ
ಮೈತುಂಬಿ ಮನತುಂಬಿ ಹಾಡಿದ ವರಕವಿ ಬೇಂದ್ರೆಯವರ ಶ್ರಾವಣ ಗೀತಗಳು
ಕ್ಸು ಲಿಷೀಯ ಐದು ಕವಿತೆಗಳು
ತತ್ವಪದಗಳಲ್ಲಿ ಅನುಭಾವದ ಸ್ವರೂಪ ಹಾಗೂ ಹಂತಗಳು
ಎಚ್.ಎಸ್.ವೆಂಕಟೇಶಮೂರ್ತಿಯವರ “ಋುಗ್ವೇದ ಸ್ಫುರಣ’’ ಕನ್ನಡದ ಕನ್ನಡಿಯಲ್ಲಿ ಋುಗ್ವೇದ “ಸ್ಫುರಣ’’
ಅಗೆವಾಗ್ಗೆ – ಸಿಕ್ಕಿದ್ದು…
ಘನಾಕೃತಿವಾದ – ಕ್ಯೂಬಿಸಂ ಮತ್ತು ಮುಖಪುಟದ ಚಿತ್ರ -
-40%
ಕೈಲಾಸ-ಮಾನಸ
0ಕೈಲಾಸ-ಮಾನಸ ಸರೋವರಗಳ ಯಾತ್ರೆ ಅದೊಂದು ಯಾತ್ರೆಗಳ ಯಾತ್ರೆ. ಅಗತ್ಯ ಮಾನಸಿಕ ಮತ್ತು ದೈಹಿಕ ದಾರ್ಢ್ಯತೆ ಇದ್ದರೆ ಮಾತ್ರ ಈ ಯಾತ್ರೆ ಪೂರೈಸಬಹುದು. ಭಾರತೀಯರ ಅದರಲ್ಲೂ ಹಿಂದೂ ಧರ್ಮಾನುಯಾಯಿಗಳ ಪಾಲಿಗೆ ಶಿವ ಆರಾಧ್ಯ ದೈವ. ದೇವಾನುದೇವತಗಳಲ್ಲಿ ಅಗಗ್ರಣ್ಯ. ಶಿವನ ಆವಾಸ ಸ್ಥಾನ ಕೈಲಾಸ ಪರ್ವತವೆಂದೂ, ವಿಷ್ಣುವಿನ ವಾಸಸ್ಥಾನ ಮಾನಸ ಸರೋವರವೆಂದೂ ಎಲ್ಲ ಭಾವುಕ ಭಕ್ತರ ತಲೆ ತಲಾಂತರದ ನಂಬಿಕೆ. ಪುರಾಣ, ಪುಣ್ಯಕತೆಗಳ ಪ್ರಕಾರ ಹಿಮಾಲಯ ಮತ್ತು ಕೈಲಾಸ ಪರಿಸರದ ಲೋಕ ದೇವಲೋಕ. ಜನಮಾನಸದಲ್ಲಿ ಈ ನಂಬಿಕೆ ಬೇರೂರಿನಿಂತಿದೆ. ಕೈಲಾಸ ಪರ್ವತ ಅದೊಂದು ಅಳಿವಿಲ್ಲದ ನೈಸರ್ಗಿಕ ಸ್ಥಾವರ. ಮಾನಸ ಸರೋವರ, ಕಿನ್ನರ ಲೋಕದ ಬತ್ತದ ಆಗರ. ಅವುಗಳ ಯಾತ್ರೆ ಆಸ್ತಿಕರ ಜೀವಮಾನದ ಆಶೆ.
ಕೈಲಾಸಮಾನಸದೊಂದಿಗೆ ಹಿಮಾಲಯ, ಟಿಬೆಟ್, ನೇಪಾಳ ಕುರಿತು ಹಲವಾರು ವಿಷಯಗಳನ್ನು ಪ್ರವಾಸದ ವೇಳೆ ಅರಿಯಲು ಸಾಧ್ಯವಾಯಿತು. ಆದ್ದರಿಂದ ಹಿಮಾಲಯದ ವಿಭಿನ್ನ ಪ್ರಾಕೃತಿಕ ವೈಚಿತ್ರ್ಯಗಳ ಬಗ್ಗೆ, ಪರಿಸರದ ಬಗ್ಗೆ ಕೆಲವು ಅಂಶಗಳು ಈ ಕಥನದಲ್ಲಿ ಸೇರಿಕೊಂಡಿವೆ.
-
-40%
ಒಂದು ಆನೆಯ ಸುತ್ತ
0ಒಂದು ಆನೆಯ ಸುತ್ತ
(ವಸ್ತುಸ್ಥಿತಿಯನ್ನು ಆಧರಿಸಿದ ಕಾಲ್ಪನಿಕ ಕಾದಂಬರಿ)
ವನ್ಯಜೀವಿಗಳ ಬಗ್ಗೆ ಮಾತಾಡುತ್ತೇವೆ. ಅವುಗಳ ಅಳಿವಿನ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತೇವೆ. ಆದರೆ ಬರಿಯ ಮಾತು, ಕಾಳಜಿಗಳಿಂದ ಅವು ಉಳಿಯಲಾರವು. ಅವುಗಳ ಅಳಿವಿಗೆ ಕಾರಣವಾಗುವ ಅಂಶಗಳ ಬಗ್ಗೆ ನಮ್ಮ ಗಮನ ಹರಿಯಬೇಕು. ಆನೆಗಳಂತಹಾ ದೈತ್ಯಜೀವಿಗಳು ಊರೊಳಗೆ ನುಗ್ಗಿ ಆಸ್ತಿ, ಮನೆ, ಬೆಳೆ, ಜೀವಹಾನಿಗಳನ್ನು ಮಾಡಿದಾಗ ಅದರ ನೇರ ಪರಿಣಾಮ ಎದುರಿಸುವವರ ಬವಣೆ ವರ್ಣನಾತೀತ. ಆಗೆಲ್ಲಾ ಸಹಜವಾಗಿಯೇ ಅವುಗಳ ಮೇಲೆ ಆಕ್ರೋಶ ವ್ಯಕ್ತವಾಗುತ್ತದೆ. ಈಗ ಮಲೆನಾಡಿನ ಕೆಲವೆಡೆ ಆಗುತ್ತಿರುವುದು ಇದೇ. ತಿಳಿದೋ ತಿಳಿಯದೆಯೋ ಅನಿವಾರ್ಯ ಎಂದುಕೊಂಡು ಪ್ರಾಣಿಗಳ ವಾಸಸ್ಥಳಗಳನ್ನೆಲ್ಲಾ ನಾವು ಆಕ್ರಮಿಸಿಕೊಳ್ಳುತ್ತಿದ್ದೇವೆ. ವಿಧಿ ಇಲ್ಲದೆ ಅವೇ ಊರೊಳಗೆ ನುಗ್ಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದೇವೆ. ತೊಂದರೆಯಾದಾಗ ಮಾತ್ರ ಹಾಹಾಕಾರ ವೆಬ್ಬಿಸುತ್ತೇವೆ. ಆನೆಗಳ ಸ್ವಚ್ಛಂದ ತಿರುಗಾಟಕ್ಕೆ ಅಡ್ಡಿ ಮಾಡಿ ಅವುಗಳ ಆಹಾರ, ನೆಲೆ ನಾಶ ಮಾಡಿದ್ದೇವೆ. ಊರೊಳಗೆ ಬಂದಾಗ ಅವುಗಳನ್ನು ಕೊಲ್ಲುವ ಮಾತೂ ಬರುತ್ತದೆ. ಅಲ್ಲ, ತೊಂದರೆಗೊಳಗಾದ ಜನರೇ ತಮಗೆ ತೋಚಿದ ಯಾವುದಾದರೂ ಒಂದು ರೀತಿಯಲ್ಲಿ ಅವುಗಳನ್ನು ಕೊಲ್ಲುತ್ತಿದ್ದಾರೆ. ಇದಕ್ಕೆಲ್ಲಾ ಪರಿಹಾರವೇ ಇಲ್ಲವೇ ಇಲ್ಲ ಎಂದಲ್ಲ; ಇದೆ, ಪೂರ್ತಿಯಾಗಿ ಅಲ್ಲದಿದ್ದರೂ ಮಿತಿ ಮೀರದಷ್ಟು ಖಂಡಿತಾ ಇದೆ. ಆದರೆ ಒಬ್ಬಿಬ್ಬರು ಮಾಡುವಂಥದ್ದಲ್ಲ. ಸಂಕಲ್ಪ ಬೇಕು. ಘನಸರ್ಕಾರದ ಕೃಪೆಯಾಗಬೇಕು. ಆದಷ್ಟೂ ಈ ಅಪೂರ್ವವಾದ ಪಶ್ಚಿಮಘಟ್ಟವನ್ನು ಭೇದಿಸಬಾರದು. ಅಲ್ಲಿ ಜನ ಜಾತ್ರೆ ಕೂಡದು. ಈಗಿರುವ ಹೆದ್ದಾರಿಗಳ ಹೊರತಾಗಿ ಹೊಸ ದಾರಿಗಳನ್ನು ನಿರ್ಮಿಸಬಾರದು. ಇರುವ ರಸ್ತೆಗಳನ್ನೇ ಸುವ್ಯವಸ್ಥೆಗೊಳಿಸಬೇಕು. ಗೊತ್ತು ಗುರಿ ಇಲ್ಲದೆ ಅರೆಕಟ್ಟುಗಳನ್ನು ಕಟ್ಟಲೇ ಬಾರದು. ಹಾಗಾದರೆ ಅಭಿವೃದ್ಧಿ ಬೇಡವೇ? ಅವಶ್ಯ ಇರುವ ವಿದ್ಯುತ್ತಿನ ಉತ್ಪಾದನೆ ನಿಲ್ಲಿಸಬೇಕೇ? ಎಂದೂ ಅನಿಸಬಹುದು. ಈಗ ದುಬಾರಿ ಎನಿಸಿದರೂ ಅದನ್ನು ಬೇರೆ ಬಗೆಯಲ್ಲಿ ಉತ್ಪಾದಿಸಬೇಕು. ಲಾಭ ನಷ್ಟದ ತೂಕ ಹಾಕಿ ನೋಡಿದರೆ ಮುಂದಾಲೋಚನೆ ಇಲ್ಲದೆ ಮಾಡುವ ಈ ರೀತಿಯ ಕೆಲಸಗಳಿಂದ ಲಾಭಕ್ಕಿಂತ ಅಪಾರವಾದ ನಷ್ಟವೇ ಜಾಸ್ತಿ ಎನ್ನುವುದು ಪ್ರಕೃತಿಯ ಒಳಹೊರಗು ತಿಳಿದವರಿಗೆ ಅರ್ಥವಾಗುತ್ತದೆ. ಇದರ ಪರಿಣಾಮ ಅನುಭವಿಸುವವರು ನಮ್ಮ ಮುಂದಿನ ಪೀಳಿಗೆಯವರು. ಅಂದರೆ ನಮ್ಮ ಮಕ್ಕಳು, ಮೊಮ್ಮಕ್ಕಳು! ಇದು ಒಂದು ತರಹ ‘ಚಿನ್ನದ ಮೊಟ್ಟೆ ಇಡುವ ಕೋಳಿಯ ಹೊಟ್ಟೆ ಸೀಳಿದಂತೆ!’ ಮಳೆ ತರಿಸುವ ಮಳೆಕಾಡುಗಳು, ಪ್ರಕೃತಿಯ ಸಮತೋಲನ ಸಾಧಿಸುವ ವನ್ಯಜೀವಿಗಳು, ಇಡೀ ನಮ್ಮ ದೇಶಕ್ಕೇ ಸಾಲುವಷ್ಟು ಅಪೂರ್ವವಾದ ಔಷಧಿ ಸಂಪತ್ತನ್ನು ಹೊಂದಿದ ಸಸ್ಯಗಳು ಎಲ್ಲಕ್ಕೂ ಮೂಲ ಪಶ್ಚಿಮಘಟ್ಟಗಳ ಸಾಲುಗಳು. ಅವುಗಳ ಮೂಲಗಳನ್ನೇ ನಾಶಮಾಡಿ ನಾವು ಸುಖಪಡುವುದಲ್ಲ. ಅದಕ್ಕೆ ಹಾನಿ ಮಾಡದೆ ಅದರಿಂದ ಸಿಗುವ ಲಾಭವನ್ನು ಪಡೆಯುವುದೇ ವಿವೇಚನೆ. ತೊಂದರೆ ಕೊಡುವ ಆನೆಗಳಂತಹಾ ಪ್ರಾಣಿಗಳು ಊರಿಗೆ ಬಂದರೆ ಅಲ್ಲಿನ ಜನಗಳ ಬದುಕು ನರಕವಾಗುತ್ತದೆ. ಅದಕ್ಕೂ ವ್ಯವಸ್ಥೆಯಾಗಬೇಕು. ಕೆಲವೆಡೆ ತಡೆಗೋಡೆ, ಕೆಲವೆಡೆ ಕಂದಕಗಳನ್ನು ತೋಡಿಯಾದರೂ ಅವು ಊರಿಗೆ ಬಾರದಂತೆ ತಡೆಯಬೇಕು. ಗುಡ್ಡ, ಬೆಟ್ಟ, ತೊರೆ, ಪ್ರಪಾತಗಳಿರುವ ಸಾವಿರಾರು ಕಿ.ಮೀ. ಉದ್ದಕ್ಕೆಲ್ಲಾ ಅದನ್ನು ಮಾಡುವುದೆಂತು? ಎನಿಸಬಹುದು. ವಿಪರೀತ ಖರ್ಚಿನ ಬಾಬ್ತು ನಿಜ, ಆದರೆ ಯಾವ್ಯಾವುದಕ್ಕೋ ಕೋಟಿ ಕೋಟಿ ಖರ್ಚು ಮಾಡುವ ನಮಗೆ ಅದು ಖಂಡಿತಾ ಅಸಾಧ್ಯವಲ್ಲ. ಅಲ್ಲದೆ ಚೀನದ ಮಾಹಾಗೋಡೆಯ ಮುಂದೆ ಇದೆಷ್ಟರ ಕೆಲಸ? ಮನಸ್ಸಿದ್ದರೆ ಮಾರ್ಗ!
-
-40%
ಮಕ್ಕಳ ಮನೋಲೋಕ-೨ ಆಕಾಶಕ್ಕೆ ಏಣಿ
0ಮಕ್ಕಳ ಮನೋಲೋಕ-೨ ಆಕಾಶಕ್ಕೆ ಏಣಿ:
(ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಸನ ಮಾಲೆ)
ನಾವು ಮಕ್ಕಳಿಗಾಗಿ ಮಾಡುವ ಎಲ್ಲ ಪ್ರಯತ್ನಗಳ ಅಂತಿಮ ಗುರಿ-ಮಕ್ಕಳ ಅರಳುವಿಕೆ. ಪರಿಸರ, ಸಂಸ್ಕಾರ, ಸಾಹಿತ್ಯ, ಕಲೆ ಇವುಗಳೆಲ್ಲಾ ಪೂರಕವಾಗಿದ್ದಾಗ ಮಾತ್ರ ಮಕ್ಕಳ ಪೂರ್ಣ ಮಾನಸಿಕ ವಿಕಸನ ಸಾಧ್ಯ. ವೃಷ್ಟಿಯಿಂದ ಸಮಷ್ಟಿ, ಪ್ರತಿಯೊಬ್ಬ ಮಗುವೂ ಶಕ್ತಿಯಾದಾಗಲೇ ರಾಷ್ಟ್ರದ ಬೆಳೆವಣಿಗೆ, ರಾಷ್ಟ್ರದ ಚಾರಿತ್ರ್ಯ, ರಾಷ್ಟ್ರದ ಸಾಮರ್ಥ್ಯ. ಈ ಪೂರ್ಣತ್ವಕ್ಕಾಗಿಯೇ ಸತತ ಅನ್ವೇಷಣೆ ಮತ್ತು ಪ್ರಯತ್ನಶೀಲತೆಯ ಅಗತ್ಯ.
ಯಾವ ಜೀವಿಯಲ್ಲೇ ಆಗಲಿ ಅದರ ಒಂದೊಂದು ವರ್ತನೆಗೆ ಸಂಬಂಧಪಟ್ಟಂತೆ ಒಂದೊಂದು ಮನೋವೃತ್ತಿ ಇರುತ್ತದೆ. ಮೂಕ ಪ್ರಾಣಿಗಳ ಮತ್ತು ಸಣ್ಣ ಮಕ್ಕಳ ಮನೋವೃತ್ತಿಯನ್ನು ನಡವಳಿಕೆ, ಹೇಳಿಕೆಗಳ ಮೂಲಕ ನಾವು ಊಹಿಸಿ ತಿಳಿಯಬೇಕೇ ಹೊರತು ನೇರವಾಗಿ ತಿಳಿಯುವುದು ಅಸಾಧ್ಯ. ಮಕ್ಕಳು ಬೆಳೆದು ಶಾಲೆಗೆ ಹೋಗಿ ಜ್ಞಾನ ಸಂಪಾದಿಸುವುದರ ಜೊತೆಗೆ ಅವರಿಗೆ ನೈತಿಕ ಬುನಾದಿಯಾಗಿ ಪ್ರಾಮಾಣಿಕತೆ, ಗುರು ಹಿರಿಯರಿಗೆ ಗೌರವ ತೋರಿಸುವುದು, ವಿನಯ ಶೀಲತೆ, ಶ್ರದ್ಧೆ, ಅಚ್ಚುಕಟ್ಟುತನ ಇವುಗಳನ್ನು ಕಲಿಸಿಕೊಟ್ಟು ಅವರ ಚಾರಿತ್ರ್ಯನಿರ್ಮಾಣ ಮಾಡುವ ಮನೋಶಿಕ್ಷಣದ ಅವಶ್ಯಕತೆಯೂ ಇದೆ. -
-40%
ಹುಡುಗಾಟ- ಹುಡುಕಾಟ
0ಹುಡುಗಾಟ- ಹುಡುಕಾಟ
‘ತರಂಗ’ ವಾರಪತ್ರಿಕೆ ಧಾರವಾಹಿ
(ಹದಿಹರೆಯದವರಿಗಾಗಿ )ಇದು ಜನಪ್ರಿಯ ‘ತರಂಗ ವಾರಪತ್ರಿಕೆ’ಯಲ್ಲಿ ಧಾರಾವಾಹಿಯಾಗಿ ಹರಿದುಬಂದ ಹದಿ ಹರೆಯದವರಿಗಾಗಿ ಬರೆದ ಕಾದಂಬರಿ. ಸರಿಯಾದ ಕ್ರಮದಲ್ಲಿ ಬೆಳೆದ ಮಕ್ಕಳ ಮನಸ್ಸಿನಲ್ಲಿ ಅದೆಷ್ಟು ಆತ್ಮವಿಶ್ವಾಸವಿರುತ್ತದೆ, ಎಂತಹಾ ಕಷ್ಟ ಬಂದರೂ ಅದನ್ನು ಹೇಗೆ ಎದುರಿಸುತ್ತಾರೆ, ಎನ್ನುವುದನ್ನು ವಿವರಿಸುವ ಪಶ್ಚಿಮಘಟ್ಟದ ಒಳಗನ್ನು ಸ್ವಲ್ಪವಾದರೂ ತೆರೆದಿಡಲು ಯತ್ನಿಸಿದ ಕಾದಂಬರಿ. ಕಷ್ಟ ಬಂದಾಗ ಮನುಷ್ಯ ಇನ್ನಿಲ್ಲದಂತೆ ಹೋರಾಡುತ್ತಾನೆ. ದೊಡ್ಡವರಾದರೂ ಅಷ್ಟೆ; ಮಕ್ಕಳೂ ಅಷ್ಟೆ. ಪಶ್ಚಿಮಘಟ್ಟದ ಇದು ಜನಪ್ರಿಯ ‘ತರಂಗ ವಾರಪತ್ರಿಕೆ’ಯಲ್ಲಿ ಧಾರಾವಾಹಿಯಾಗಿ ಹರಿದುಬಂದ ಹದಿ ಹರೆಯದವರಿಗಾಗಿ ಬರೆದ ಕಾದಂಬರಿ. ಸರಿಯಾದ ಕ್ರಮದಲ್ಲಿ ಬೆಳೆದ ಮಕ್ಕಳ ಮನಸ್ಸಿನಲ್ಲಿ ಅದೆಷ್ಟು ಆತ್ಮವಿಶ್ವಾಸವಿರುತ್ತದೆ, ಎಂತಹಾ ಕಷ್ಟ ಬಂದರೂ ಅದನ್ನು ಹೇಗೆ ಎದುರಿಸುತ್ತಾರೆ, ಎನ್ನುವುದನ್ನು ವಿವರಿಸುವ ಪಶ್ಚಿಮಘಟ್ಟದ ಒಳಗನ್ನು ಸ್ವಲ್ಪವಾದರೂ ತೆರೆದಿಡಲು ಯತ್ನಿಸಿದ ಕಾದಂಬರಿ. ಕಷ್ಟ ಬಂದಾಗ ಮನುಷ್ಯ ಇನ್ನಿಲ್ಲದಂತೆ ಹೋರಾಡುತ್ತಾನೆ. ದೊಡ್ಡವರಾದರೂ ಅಷ್ಟೆ; ಮಕ್ಕಳೂ ಅಷ್ಟೆ. ಪಶ್ಚಿಮಘಟ್ಟದ ಅರಣ್ಯ ಈಗಲೂ ನಿಗೂಢವೇ. ದಾರಿ ತಿಳಿದವರೂ ಅದರೊಳಗೆ ಸುತ್ತಿ ಬೆವರುವುದುಂಟು. ದಾರಿ ತಿಳಿಯದ ಚಾರಣಿಗರೇ ಮಳೆಗಾಲದಲ್ಲಿ ದಿಕ್ಕು-ದೆಸೆ ತಿಳಿಯದೆ ಬದುಕು ಕಳೆದುಕೊಂಡಿರುವುದೂ ಉಂಟು. ಅರಣ್ಯವೆಂದರೇನೆಂದೇ ತಿಳಿಯದ ಮೂವರು ಉತ್ಸಾಹಿ ಹದಿಹರೆಯದವರು ಅಕಸ್ಮಾತ್ತಾಗಿ ಇಂತಹಾ ದಟ್ಟವಾದ ಅರಣ್ಯದೊಳಗೆ ಸಿಕ್ಕಿ ಹಾಕಿಕೊಂಡು ಬದುಕಿಗಾಗಿ ಹೋರಾಡುವುದನ್ನು ವಿವರಿಸುವುದೇ ಹುಡುಗಾಟವಾಡಲು ಹೋಗಿ ಹುಡುಕಾಟಕ್ಕೆ ದಾರಿಯಾದ ಈ ಹದಿಹರೆಯದವರ ಕಾದಂಬರಿ. ಆ ಪ್ರಾಯದವರ ಮನೋಭಾವ ಹೇಗಿರುತ್ತದೆ? ಅದರೊಂದು ಚಿತ್ರಣ ನೀಡುವ ಯತ್ನವೂ ಇಲ್ಲಿದೆ. ‘ಕಷ್ಟ ಬಂದಾಗ ಎದೆಗುಂದದೆ ಅದನ್ನು ಎದುರಿಸುವುದು ಹೇಗೆ?’ ಎಂಬ ಚಿಂತನೆ ಹೇಗೆ ಕಷ್ಟವನ್ನು ಕೊನೆಗೂ ದೂರ ಮಾಡುತ್ತದೆ ಎನ್ನುವುದನ್ನು ಹದಿಹರೆಯದವರ ಜೊತೆಗೆ ದೊಡ್ಡವರೂ ಓದಬಹುದು.
-
-40%
ಮಕ್ಕಳ ಮನೋಲೋಕ – ೧ ಹಕ್ಕಿಯ ಹೆಗಲೇರಿ
0ಮಕ್ಕಳ ಮನೋಲೋಕ – ೧ ಹಕ್ಕಿಯ ಹೆಗಲೇರಿ
(ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಸನ ಮಾಲೆ )ನಾವು ಮಕ್ಕಳಿಗಾಗಿ ಮಾಡುವ ಎಲ್ಲ ಪ್ರಯತ್ನಗಳ ಅಂತಿಮ ಗುರಿ-ಮಕ್ಕಳ ಅರಳುವಿಕೆ. ಪರಿಸರ, ಸಂಸ್ಕಾರ, ಸಾಹಿತ್ಯ, ಕಲೆ ಇವುಗಳೆಲ್ಲಾ ಪೂರಕವಾಗಿದ್ದಾಗ ಮಾತ್ರ ಮಕ್ಕಳ ಪೂರ್ಣ ಮಾನಸಿಕ ವಿಕಸನ ಸಾಧ್ಯ. ವೃಷ್ಟಿಯಿಂದ ಸಮಷ್ಟಿ, ಪ್ರತಿಯೊಬ್ಬ ಮಗುವೂ ಶಕ್ತಿಯಾದಾಗಲೇ ರಾಷ್ಟ್ರದ ಬೆಳೆವಣಿಗೆ, ರಾಷ್ಟ್ರದ ಚಾರಿತ್ರ್ಯ, ರಾಷ್ಟ್ರದ ಸಾಮರ್ಥ್ಯ. ಈ ಪೂರ್ಣತ್ವಕ್ಕಾಗಿಯೇ ಸತತ ಅನ್ವೇಷಣೆ ಮತ್ತು ಪ್ರಯತ್ನಶೀಲತೆಯ ಅಗತ್ಯ.
ಯಾವ ಜೀವಿಯಲ್ಲೇ ಆಗಲಿ ಅದರ ಒಂದೊಂದು ವರ್ತನೆಗೆ ಸಂಬಂಧಪಟ್ಟಂತೆ ಒಂದೊಂದು ಮನೋವೃತ್ತಿ ಇರುತ್ತದೆ. ಮೂಕ ಪ್ರಾಣಿಗಳ ಮತ್ತು ಸಣ್ಣ ಮಕ್ಕಳ ಮನೋವೃತ್ತಿಯನ್ನು ನಡವಳಿಕೆ, ಹೇಳಿಕೆಗಳ ಮೂಲಕ ನಾವು ಊಹಿಸಿ ತಿಳಿಯಬೇಕೇ ಹೊರತು ನೇರವಾಗಿ ತಿಳಿಯುವುದು ಅಸಾಧ್ಯ. ಮಕ್ಕಳು ಬೆಳೆದು ಶಾಲೆಗೆ ಹೋಗಿ ಜ್ಞಾನ ಸಂಪಾದಿಸುವುದರ ಜೊತೆಗೆ ಅವರಿಗೆ ನೈತಿಕ ಬುನಾದಿಯಾಗಿ ಪ್ರಾಮಾಣಿಕತೆ, ಗುರು ಹಿರಿಯರಿಗೆ ಗೌರವ ತೋರಿಸುವುದು, ವಿನಯ ಶೀಲತೆ, ಶ್ರದ್ಧೆ, ಅಚ್ಚುಕಟ್ಟುತನ ಇವುಗಳನ್ನು ಕಲಿಸಿಕೊಟ್ಟು ಅವರ ಚಾರಿತ್ರ್ಯನಿರ್ಮಾಣ ಮಾಡುವ ಮನೋಶಿಕ್ಷಣದ ಅವಶ್ಯಕತೆಯೂ ಇದೆ.