- -10%
ಬಹುರೂಪಿ ಗಿರೀಶ್ ಕಾರ್ನಾಡ್
0Original price was: ₹250.00.₹225.00Current price is: ₹225.00.ಬಹುರೂಪಿ ಗಿರೀಶ ಕಾರ್ನಾಡ
ಈ ಪುಸ್ತಕದಲ್ಲಿ ಅನೇಕ ಜನ ಗಿರೀಶ ಕಾರ್ನಾಡರ ಒಡನಾಡಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
- -10%
ಬಕುಲದ ಬಾಗಿಲಿನಿಂದ
0Original price was: ₹200.00.₹180.00Current price is: ₹180.00.ಬಕುಲದ ಬಾಗಿಲಿನಿಂದ
ಈ ಕೃತಿಯು ಸುಧಾ ಆಡುಕಳ ಇವರ ಕೃತಿಯಾಗಿದೆ.
- -10%
ಹೈ ಅಂಗೋಲ
0Original price was: ₹240.00.₹216.00Current price is: ₹216.00.A travelogue authored by Prasad Naik
- -10%
ಆಡಾಡತ ಆಯುಷ್ಯ
0Original price was: ₹425.00.₹383.00Current price is: ₹383.00.ಆಡಾಡತ ಆಯುಷ್ಯ
-ಗಿರೀಶ ಕಾರ್ನಾಡ
ಆಡಾಡತ ಆಯುಷ್ಯ – ಈ ಕ್ರತಿಯು ಗಿರೀಶ ಕಾರ್ನಾಡ ಅವರ ಆತ್ಮಕಥೆಯಾಗಿದ್ದು, ಆತ್ಮಕಥೆಯ ಪೂರ್ವಾರ್ಧವನ್ನು ಒಳಗೊಂಡಿದೆ
ಪ್ರಾಕ್ಕು
ನನ್ನ ತಾಯಿಯ ಹೆಸರು ಕೃಷ್ಣಾಬಾಯಿ. ಕೃಷ್ಣಾಬಾಯಿ ಮಂಕೀಕರ. ಕುಟುಂಬದ ಹಿರಿಯರೆಲ್ಲ ಆಕೆಯನ್ನು ‘ಕುಟ್ಟಾಬಾಯಿ’ ಎಂದೇ ಸಂಬೋಧಿಸುತ್ತಿದ್ದರು. ಆಮೇಲೆ ತನಗಿಂತ ಕಿರಿಯರಿಗೆ, ಮುಂದಿನ ತಲೆಮಾರಿಗೆ, ‘ಕುಟ್ಟಕ್ಕ’ ಆದಳು. ೧೯೮೪ರಲ್ಲಿ , ಅಂದರೆ ಆಕೆಗೆ ಎಂಭತ್ತೆರಡು ತುಂಬಿದಾಗ, ನನ್ನ ಅತ್ತಿಗೆ ಸುನಂದಾ ಆಕೆಯ ಬೆನ್ನು ಹತ್ತಿ ಆಕೆಯಿಂದ ಆತ್ಮಕತೆ ಬರೆಯಿಸಿಕೊಂಡಳು. ನನ್ನ ತಂದೆಯ ಒಂದು ಹಳೆಯ ಡಾಯರಿಯಲ್ಲಿ, ಅವನು ಅಲ್ಲಲ್ಲಿ ಲೆಕ್ಕ ಗೀಚಿ ಬಿಟ್ಟಿರುವ ಪುಟಗಳ ಖಾಲಿ ಜಾಗದಲ್ಲಿ, ಕೊಂಕಣಿಯಲ್ಲಿ ಬರೆದ ಸುಮಾರು ಮೂವತ್ತು ಪುಟಗಳ ಕೃತಿ ಅದು. ಆಕೆ ಅದನ್ನು ಬರೆಯುವಷ್ಟರಲ್ಲಿ ನಾನು, ನನ್ನ ಸಹೋದರ-ಸಹೋದರಿಯರು ಬಾಲ್ಯದುದ್ದಕ್ಕೂ ನಮ್ಮನ್ನು ಪೀಡಿಸಿದ ಭೀತಿಗಳಿಗೆ, ಆತಂಕಗಳಿಗೆ ಹಾಗೂ ಹೀಗೂ ಪರಿಹಾರ ಹುಡುಕಿದ್ದೆವು. ಆಕೆಯ ಆತ್ಮಚರಿತ್ರೆ ಈ ದುಗುಡಗಳ ಬಗ್ಗೆ ಸರಳವಾಗಿ, ಪ್ರಾಮಾಣಿಕವಾಗಿ ಮಾತನಾಡಿ ಅವುಗಳನ್ನು ಬಯಲಿಗೆಳೆದು ಪರೀಕ್ಷಿಸಲಿಕ್ಕೆ ಎಡೆ ಮಾಡಿಕೊಟ್ಟಿತು.
- -10%
ಯಯಾತಿ – ನಾಟಕ
0Original price was: ₹130.00.₹117.00Current price is: ₹117.00.ಯಯಾತಿ – ನಾಟಕ
ಇದು ಗಿರೀಶ ಕಾರ್ನಾಡ ರಚನೆಯ ನಾಟಕವಾಗಿದೆ.
- -10%
ಅಗ್ನಿ ಮತ್ತು ಮಳೆ
0Original price was: ₹110.00.₹99.00Current price is: ₹99.00.ಇದು ಗಿರೀಶ್ ಕಾರ್ನಾಡವರು ಬರೆದ ನಾಟಕವಾಗಿದೆ.ಶ್ರೀಯುತ ಗಿರೀಶ ಕಾರ್ನಾಡರು ೧೯೯೩ ರಲ್ಲಿ ಅಮೇರಿಕಾದ ಮಿನಿಯಾಪೋಲಿಸ್ ನಗರದ ಗಥ್ರೀ ಥಿಏಟರ್ ನಾಟ್ಯ ಸಂಸ್ಥೆಯವರಿಗಾಗಿ ಬರೆದ ನಾಟಕ.
- -10%
ಕಥನ ಕಾರಣ
0Original price was: ₹350.00.₹315.00Current price is: ₹315.00.ಕಥನ ಕಾರಣ –
(ಎಪ್ಪತ್ತು ಆಧುನಿಕ ಕನ್ನಡ ಸಣ್ಣಕತೆಗಳ ವಿಶ್ಲೇಷಣೆ)ಈ ಪುಸ್ತಕದಲ್ಲಿ ೭೦ ಬೇರೆ ಬೇರೆ ಲೇಖಕರ ಲೇಖನಗಳಿವೆ. ಇವು ಪತ್ರಿಕೆಯ ಸಾಪ್ತಾಹಿಕದಲ್ಲಿ ಓದಿ ಮರೆಯುವ ಲೇಖನಗಳಲ್ಲ . ಆಗಾಗ ಮತ್ತೆ ಮತ್ತೆ ಓದಿ ಮಥನ ಮಾಡಿಕೊಳ್ಳಬೇಕಾದ ಲೇಖನಗಳು. ಯಾವುದೇ ಸಾಹಿತ್ಯಿಕ ಓದು ಸಮಕಾಲೀನ ಸಮಾಜ–ಸಂಸ್ಕೃತಿ–ರಾಜಕಾರಣವನ್ನು ಸಂಪೂರ್ಣವಾಗಿ ಹೊರಗಿಡುವಂತಿಲ್ಲ ಎಂಬ ಎಚ್ಚರವನ್ನು ಈ ಕೃತಿ ತಿಳಿಸುತ್ತದೆ.
- -10%
ಮಸುಕು ಬೆಟ್ಟದ ದಾರಿ
0Original price was: ₹300.00.₹270.00Current price is: ₹270.00.ಮಸುಕು ಬೆಟ್ಟದ ದಾರಿ :
ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಮೂಡುವ `ಮಸುಕು ಬೆಟ್ಟದ ದಾರಿ’ ಕಾದಂಬರಿ ತನ್ನ ವಸ್ತುವಿನಿಂದಾಗಿ ಅನನ್ಯವಾಗಿದೆ. `ಹೈಪರ್ ಥೈಮೆಸ್ಟಿಕ್ ಸಿಂಡ್ರೋಮ್’ ಎಂಬ ವಿಚಿತ್ರ, ಅತಿ ಅಪರೂಪದ ಮಿದುಳಿನ ಲಕ್ಷಣದ ಹುಡುಗ ನಿರಂಜನ ಇಲ್ಲಿನ ನಾಯಕ. ಮೆದು ಮನಸ್ಸು, ಸರಳ ಸೌಜನ್ಯದ ಪೊಲೀಸ್ ಕಾನ್ಸ್ಟೇಬಲ್ ರಾಜೀವ ಈತನ ತಂದೆ. ತಂದೆಯಾಗಿ ಮಗನನ್ನು ಜೀವನದಲ್ಲಿ ನಿಲ್ಲಿಸಲು ಆತ ಪಡುವ ಪಡಿಪಾಟಲು ಮೊದಲ ಭಾಗದಲ್ಲಿದೆ. ನಿರಂಜನನ ಎಲ್ಲ ನೆನಪುಗಳೂ ಶಾಶ್ವತ, ಭಾವನೆಗಳ ಸಮೇತ. ಇತರರಲ್ಲಿ ಇರುವಂತೆ ಶಾಶ್ವತ ನೆನಪು ಹಾಗೂ ತಾತ್ಕಾಲಿಕ ನೆನಪು ಎಂಬ ಭಾಗಗಳಿಲ್ಲ, ಕ್ರಮೇಣ ಮರೆತು ಹೋಗುವುದೂ ಇಲ್ಲ. ನಿಯಂತ್ರಣ ಕೂಡ ಇಲ್ಲದ ನೆನಪುಗಳ ಪ್ರವಾಹದಲ್ಲಿ ಸಿಕ್ಕಿಕೊಳ್ಳುವ ನಿರಂಜನ ಶಾಲೆಯಲ್ಲಿ ತುಂಬ ಹಿಂದೆ ಬೀಳುತ್ತಾನೆ. ಬೆಂಗಳೂರು ನಿಮ್ಹಾನ್ಸ್ ಡಾಕ್ಟರರು ಅವನ ಕಾಯಿಲೆಯನ್ನು ಸರಿಯಾಗಿ ನಿದಾನ ಮಾಡುತ್ತಾರಾದರೂ, ಪರಿಹಾರ ಅವರಿಗೂ ತಿಳಿಯದು. ನಿರಂಜನನ ತಾಯಿ ಸತ್ತದ್ದು, ರಾಜೀವ ಮರುಮದುವೆ ಆಗದಿರುವುದು, ಅವರ ನೆಂಟರುಗಳ ವಿವರ ಅವನ ಕೌಟುಂಬಿಕ ಹಿನ್ನೆಲೆಯನ್ನು ನೀಡುತ್ತದೆ.
- -10%
- -10%
ತಲೆದಂಡ
0Original price was: ₹130.00.₹117.00Current price is: ₹117.00.ತಲೆದಂಡ :
ತಲೆದಂಡ ನಾಟಕದ ನಿಜವಾದ ವಸ್ತು ಸಾಮಾಜಿಕ ಹಾಗೂ ರಾಜಕೀಯ ಕ್ರಾಂತಿ ಹಾಗೂ ಈ ಕ್ರಾಂತಿಯ ವೈಫಲ್ಯದ ಒಂದು ಸ್ಥಿತಿ. ನಿಜವಾದ ಕ್ರಾಂತಿ ಕೊನೆಯಿಲ್ಲದ ಒಂದು ಪ್ರತಿಕ್ರಿಯೆಯಾಗಿರುವುದರಿಂದ ಹಾಗೂ ಅದರ ಪರಿಣಾಮಗಳು ದೂರಗಾಮಿಯಾಗಿರುವುದರಿಂದ ಸೋಲು ಅದರ ಒಂದು ಅವಸ್ಥೆಯನ್ನು ಮಾತ್ರ ಸೂಚಿಸುತ್ತದೆ. ತಾನು ಹುಟ್ಟು ಹಾಕಿದ ಕ್ರಾಂತಿ ಒಂದಿಲ್ಲೊಂದು ದಿನ ಯಶಸ್ವಿಯಾಗುತ್ತದೆ ಎಂದು ಬಸವಣ್ಣ ನಂಬಿದ್ದಾನೆ. ಒಂದು ದಿವಸ ಈ ವರ್ಣಾಶ್ರಮ ಧರ್ಮ ಈ ಜಾತಿ ವ್ಯವಸ್ಥೆ ಇವೆಲ್ಲ ಅಳಿದು ಹೋಗುತ್ತವೆ. ಈ ಮಾತು ವೀರಶೈವ ಶರಣರ ಕ್ರಾಂತಿಗೂ ಅನ್ವಯಿಸುವಂತದು. ನಾಟಕ ಕ್ರಾಂತಿಯ ಸ್ವರೂಪ ಹಾಗೂ ಅದರ ಸೋಲು ಗೆಲುವುಗಳಿಗೆ ಕಾರಣವಾದ ಸಾಮಾಜಿಕ ಹಾಗೂ ರಾಜಕೀಯ ಶಕ್ತಿಗಳ ಶೋಧನವಾಗಿರುವುದರಿಂದ ಅದು ಸಾವ್ರತ್ರಿಕತೆಯನ್ನು ಪ್ರಸ್ತುತಪಡಿಸುತ್ತದೆ.
- -10%
ಬಾರೋ ಸಾಧನಕೇರಿಗೆ ಮತ್ತು ನಿಷ್ಕ್ರಿಯ ಘಾತಕಿ
0Original price was: ₹60.00.₹54.00Current price is: ₹54.00.ಬಾರೋ ಸಾಧನಕೇರಿಗೆ –
‘ಬಾರೋ ಸಾಧನಕೇರಿಗೆ… ಮತ್ತು ‘ನಿಷ್ಕ್ರಿಯ ಘಾತಕಿ’ ಎಂಬ ಬಾನುಲಿ ನಾಟಕಗಳನ್ನು ವಿಶೇಷವಾಗಿ ಆಕಾಶವಾಣಿಗೆಂದು ಬರೆದು ತೆಗೆದದ್ದು. ‘ನಿಷ್ಕ್ರಿಯ ಘಾತಕಿ’ ೨೦೧೦ರಲ್ಲಿ ಧಾರವಾಡ ಆಕಾಶವಾಣಿಯಿಂದ ಪ್ರಸಾರಗೊಂಡು ರಾಜ್ಯಮಟ್ಟದ ಆಕಾಶವಾಣಿ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿ, ಕೇಂದ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿತ್ತು.
ಸಧ್ಯದ ವಾತಾವರಣದಲ್ಲಿ ಎಲ್ಲರ ಮುಖ ಐ. ಟಿ. ಕ್ಷೇತ್ರದತ್ತ ಹಾಗೂ ಪಶ್ಚಿಮದ ದೇಶಗಳತ್ತ ಮುಖ ಮಾಡಿರುವಾಗ ದೇಶೀಯ ಆಕರ್ಷಣೆ ತನ್ನ ಕಳೆಯನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಹೇಗೆ ಮತ್ತೆ ಮಾತೃಭೂಮಿ ತನ್ನ ನಿರಂತರವಾದ ಸೂಜಿಗಲ್ಲಿನ ಆಕರ್ಷಣೆಯಿಂದ ಪರದೇಶಿಗಳಾದವರನ್ನು ತನ್ನ ಹತ್ತಿರ ಎಳೆದುಕೊಳ್ಳುತ್ತದೆ ಎಂಬ ವಸ್ತುವನ್ನಿಟ್ಟುಕೊಂಡು ಬರೆದ ನಾಟಕ ‘ಬಾರೋ ಸಾಧನಕೇರಿಗೆ । ಮರಳಿ ನಿನ್ನೀ ಊರಿಗೆ, ಬೇಂದ್ರೆಯವರ ಕವನದ ಸಾಲುಗಳ ಶೀರ್ಷಿಕೆಯಾಗಿಸಿಕೊಂಡು ಹೆಣೆದ ಪ್ರಾರಂಭದ ವಾಕ್ಯವನ್ನು ನಾಟಕ ಅರ್ಥಪೂರ್ಣವಾಗಿದೆ.
ಹಾಗೆಯೇ ‘ನಿಷ್ಕ್ರಿಯ ಘಾತಕಿ’ ಎಂಬ ನಾಟಕ ಜನಸಾಮಾನ್ಯರ ಅಲಿಪ್ತತೆ ಹೇಗೆ ಜೀವನದ ಸ್ವಾಸ್ಥ್ಯವನ್ನು ಹಾಳು ಮಾಡುವದಕ್ಕೆ ಕಾರಣವಾಗುತ್ತದೆ ಎಂಬುದನ್ನು ಮನನೀಯವಾಗಿ ನಿರೂಪಿಸುತ್ತದೆ.