ನವಕರ್ನಾಟಕ ೬ ದಶಕದಿಂದ ಕನ್ನಡ ಸಾಹಿತ್ಯ ಸೇವೆ ಮಾಡುತ್ತಿರುವ ಪ್ರಕಾಶನ ಸಂಸ್ಥೆ. ಈಗಾಗಲೇ ನವಕರ್ನಾಟಕ ಪ್ರಕಾಶನ ೫೫೦೦ ಪುಸ್ತಗಳನ್ನು ಓದುಗರಿಗೆ ಪರಿಚಯಿಸಿದೆ.

  • -10%

    ಸಾವೇ ಬರುವುದಿದ್ದರೆ ನಾಳೆ ಬಾ

    0

    ಈ ಪುಸ್ತಕವು ನೇಮಿಚಂದ್ರ ಅವರ ಬದುಕು ಬದಲಿಸಬಹುದು ಎಂಬ ಭರವಸೆಯ ಲೇಖನಗಳನ್ನು ಹೊಂದಿದೆ.

    Original price was: $2.40.Current price is: $2.16.
    Add to basket
  • -10%

    ಸಾರ್ಥಕತೆಯ ಸಾಧಕ ಸರ್ವಜ್ಞ

    0

    ಸರ್ವಜ್ಞನದು ವಿಲಕ್ಷಣವಾದ, ವಿಶಿಷ್ಟವಾದ ವ್ಯಕ್ತಿತ್ವ. ಅವನ ಜೀವನಪ್ರೀತಿ ಅಸದೃಶ. ಹಾಗೆಯೇ ಅವನ ನಿಷ್ಠುರತೆ ಮತ್ತು ವ್ಯವಸ್ಥೆಯನ್ನು ವಿರೋಧಿಸುವ ಪರಿ ಅನನ್ಯ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಇಷ್ಟರ ಮಟ್ಟಿಗೆ ದಿಟ್ಟತನ, ಸ್ವಾತಂತ್ರ್ಯ ಹಾಗೂ ಮನೋಧೈರ್ಯವನ್ನು ವ್ಯಕ್ತಪಡಿಸುವ ಮತ್ತೋರ್ವ ಕವಿ ಸಿಗಲಾರ.

    Original price was: $0.30.Current price is: $0.27.
    Add to basket
  • -10%

    ಸಾಮಾಜಿಕ ಕ್ರಾಂತಿಯ ಹರಿಕಾರ ಲೋಕರಾಜ ಸಯಾಜಿರಾವ ಗಾಯಕವಾಡ

    0

    ಪ್ರಜೆಗಳ ಬಗೆಗೆ ಕಳಕಳಿ, ಯೋಜನಾಬದ್ಧ ಆಡಳಿತ, ದೂರದೃಷ್ಟಿಯನ್ನೇ ವೈಶಿಷ್ಟ್ಯವಾಗಿಟ್ಟುಕೊಂಡ. ಅಂಥ ಅಪರೂಪದ ಬರೋಡೆಯ ಸಯಾಜಿರಾವ ಗಾಯಕವಾಡ ಮಹಾರಾಜರ ಚರಿತ್ರೆಯಿದು.

    Original price was: $0.60.Current price is: $0.54.
    Add to basket
  • -10%

    ರಸಾಯನ ವಿಜ್ಞಾನದ ಸಾಮಾನ್ಯ ತತ್ವಗಳು

    0

    ರಸಾಯನ ವಿಜ್ಞಾನದ ಸಾಮಾನ್ಯ ತತ್ವಗಳು ಪದವಿ-ಪೂರ್ವ ಮತ್ತು ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ ರಸಾಯನ ವಿಜ್ಞಾನದ ಮೂಲ ತತ್ವಗಳ ಸಮತೋಲ ಮತ್ತು ವಿಮರ್ಶಾತ್ಮಕವಾದ ವಿವರಗಳನ್ನು ಒದಗಿಸುತ್ತದೆ.

    Original price was: $1.50.Current price is: $1.35.
    Add to basket
  • -10%

    ಪುಟ್ಟ ಪುಟಾಣಿಯ ದೊಡ್ಡ ಕತೆ

    0

    ಪುಟಾಣಿ ಎಂಬುದು ಫೋಟಾನ್ ಎಂಬ ಚೈತನ್ಯದ ಪೊಟ್ಟಣವನ್ನು ಸೂಚಿಸುವ ಕಣ. ಮುಖ್ಯವಾಗಿ ಬೆಳಕನ್ನು ಪ್ರತಿನಿಧಿಸುವ ಕಣ. ಇದು ಸೂರ್ಯನಲ್ಲಿ ಉತ್ಪತ್ತಿಯಾಗುವುದು ಹೇಗೆ? ನಮ್ಮನ್ನು ತಲುಪುವುದು ಹೇಗೆ? ಇಂತಹ ವೈಜ್ಞಾನಿಕ ವಿವರಗಳನ್ನು ತಿಳಿಹೇಳಲು ಭೌತ ವಿಜ್ಞಾನ ಹಾಗೂ ಗಣಿತದ ಬುನಾದಿ ಅತಿ ಅವಶ್ಯ. ಆದರೆ ಚಿಕ್ಕ ಮಕ್ಕಳಿಗೆ ಕತೆಯ ರೂಪದಲ್ಲಿ ಹೇಳುವ ಪ್ರಯತ್ನವೇ ಈ ಪುಸ್ತಕ.

    Original price was: $0.72.Current price is: $0.65.
    Add to basket
  • -10%

    ಪುನಶ್ಚೇತನ ಯೋಗದ ಹಾದಿ

    0

    ಡಾ||ಓಂಕಾರ್ ಅವರು ಸೂಚಿಸಿರುವ ವಿಧಾನಗಳು ಸರಳ ಹಾಗೂ ಸ್ಪಷ್ಟತೆಯಿಂದ ಕೂಡಿದ್ದು ಅನುಕರಣಯೋಗ್ಯವಾಗಿವೆ. ಈ ಪುಸ್ತಕದ ಮತ್ತೊಂದು ವಿಶೇಷವೆಂದರೆ, ಹೆಚ್ಚಿನ ದೈಹಿಕ ಶ್ರಮವನ್ನು ಸಹಿಸಲಾಗದ ಅಶಕ್ತರೂ ಹಾಗೂ ವಯಸ್ಸಾದವರೂ ಕೂಡ ಈ ವಿಧಾನಗಳಿಂದ ತಮ್ಮ ಸ್ವಾಸ್ಥ್ಯವನ್ನು ಸುರಕ್ಷಿತವಾದ ರೀತಿಯಲ್ಲಿ ಉತ್ತಮಪಡಿಸಿಕೊಳ್ಳಬಹುದು. ಆರೋಗ್ಯವಂತರೂ ಸಹ ಸ್ವಾಸ್ಥ್ಯ ರಕ್ಷಣೆಯನ್ನಷ್ಟೇ ಅಲ್ಲದೆ ತಮ್ಮ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಈ ಪುಸ್ತಕವನ್ನು ಅವಲಂಬಿಸಬಹುದು.
    -ಡಾ||ಬಿ.ಎಸ್.ಶ್ರೀನಾಥ್

    Original price was: $0.60.Current price is: $0.54.
    Add to basket
  • -10%

    ಪ್ರಾಚೀನ ಭಾರತ

    0

    ಈ ಸಚಿತ್ರ ಕೃತಿಯ ಲೇಖಕರಾದ ಪ್ರೊ|| ರಾಮ್ ಶರಣ ಶರ್ಮಾ ಪ್ರಖ್ಯಾತ ಭಾರತೀಯ ಇತಿಹಾಸ ಲೇಖಕರು. ಇದನ್ನು ಶ್ರೀ ಎನ್.ಪಿ.ಶಂಕರನಾರಾಯಣ ರಾವ್ ಸಮರ್ಥವಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇತಿಹಾಸ ಬೆಸೆದ ಕೊಂಡಿಗಳ ಮೂಲಕ ಇಂದಿನ ಆಗು-ಹೋಗುಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ, ಅಂತೆಯೇ ಭವಿಷ್ಯವನ್ನು ರೂಪಿಸುವುದಕ್ಕೆ ಇತಿಹಾಸದ ವಸ್ತುನಿಷ್ಠ ಅಧ್ಯಯನ ನೆರವಾಗುತ್ತದೆ.

    Original price was: $2.40.Current price is: $2.16.
    Add to basket
  • -11%

    ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ?

    0

    ವಿದ್ಯಾರ್ಥಿಗಳೇ, ಪರೀಕ್ಷೆಯನ್ನು ಯಶಸ್ವಿಯಾಗಿ ಎದುರುಸುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ? ಇಲ್ಲಿವೆ ನೋಡಿ ಸರಳ-ಸುಲಭ ಉಪಾಯಗಳು.

    Original price was: $0.66.Current price is: $0.59.
    Add to basket
  • -10%

    ಒಂದು ಅರ್ಥಪೂರ್ಣ ಸತ್ಯ

    0

    ‘ಹಿಮಾಂಶು ಜೋಶಿ ಕೀ ಲೋಕಪ್ರಿಯ ಕಹಾನಿಯಾಂ’ ಮತ್ತು ‘ಸಾಗರ್ ತ‍ಟ್ ಕೇ ಶಹರ್’ -ಈ ಎರಡು ಕಥಾಸಂಕಲನಗಳಿಂದ ಆಯ್ದ ಹದಿನಾರು ಕತೆಗಳು ಲೇಖಕರ ಜೀವನಾನುಭವ ಹಾಗೂ ಅನುಭೂತಿಗಳಿಂದ ಸುತ್ತಮುತ್ತಲಿನ ಪರಿಸರ -ವಿಶೇಷವಾಗಿ ಪರ್ವತ ಪ್ರದೇಶ, ಜನಜೀವನ, ಮಣ್ಣಿನ ಸೊಗಡು, ಹೆಣ್ಣಿನ ಬವಣೆ, ಸ್ವಾತಂತ್ರ್ಯ ಹೋರಾಟಗಾರರ ನೋವು ಹಾಗೂ ಹಿರಿಯ ನಾಗರಿಕರ ಅಸಹಾಯಕತೆ-ಇವುಗಳನ್ನು ನಾನಾ ರೂಪಗಳಲ್ಲಿ, ನಾನಾ ಬಣ್ಣಗಳಲ್ಲಿ ಚಿತ್ರಿಸಿದ್ದಾರೆ. ಕನ್ನಡದ ಓದುಗರ ಆಸ್ವಾದನೆಗಾಗಿ ಹಿಂದಿಕತೆಗಳನ್ನು ಅನುವಾದಿಸಿದವರು ಡಾ.ಜೆ.ಎಸ್.ಕುಸುಮಗೀತ.

    Original price was: $1.20.Current price is: $1.08.
    Add to basket
  • -11%

    ನೂರು ಸಿಂಹಾಸನಗಳು

    0

    ಸಮಾಜದ ತೀರ ಹಿಂದುಳಿದ ವರ್ಗದಿಂದ ಬಂದು ಸಮಾಜ ಸುಧಾರಕರ ಆಶ್ರಯದಲ್ಲಿ ವಿದ್ಯೆ ಕಲಿತು ಸಿವಿಲ್ ಸರ್ವಿಸ್ ನಲ್ಲಿ ಉತ್ತೀರ್ಣಗೊಂಡ ಒಬ್ಬ ಐಎಎಸ್ ಅಧಿಕಾರಿಯ ವ್ಯಥೆಯ ಕಥೆ. ಎಂಥ ಪ್ರತಿಭಾವಂತನಿಗೂ ಅಂತಸ್ತು-ಜಾತಿಯ ಹೊಡೆತಗಳು ನಮ್ಮ ಸಮಾಜದಲ್ಲಿ ಬಲವಾಗಿ ಬೀಳುತ್ತವೆ ಎಂಬುದಕ್ಕೆ ಈ ಕಥನ ಸಾಕ್ಷಿ.

    Original price was: $0.66.Current price is: $0.59.
    Add to basket
  • -10%

    ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ

    0

    ಉತ್ತಮ ಪರಿಸರ, ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಚಟುವಟಿಕೆಗಳು, ಪ್ರಾಣಾಯಾಮ, ಯೋಗ, ಸೃಜನಶೀಲ ಚಟುವಟಿಕೆಗಳು ನಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಬಲ್ಲವೇ? ಇಂತಹ ಅನೇಕ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳು ಈ ಪುಸ್ತಕದಲ್ಲಿವೆ.

    Original price was: $1.44.Current price is: $1.30.
    Add to basket
  • -10%

    ನವೋದಯ ಆಚಾರ್ಯ ಬಿ.ಎಂ.ಶ್ರೀಕಂಠಯ್ಯ

    0

    ಬಿ.ಎಂ.ಶ್ರೀ. ಎಂದೇ ಪ್ರಖ್ಯಾತರಾದ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯನವರು ‘ಕನ್ನಡ ಬಾವುಟ’ ಎಂಬ ಕೃತಿಯಲ್ಲಿ ೭ನೆಯ ಶತಮಾನದಿಂದ ಹಿಡಿದು ಸಮಕಾಲೀನ ಕಾಲದವರೆಗೆ ಪ್ರಕಟವಾದ ಕನ್ನಡ ಭಾಷೆಯ ಹೆಮ್ಮೆಯ ಕವನಗಳನ್ನು ಶಾಸನಗಳು, ಪೂರ್ವಸಾಹಿತ್ಯ, ನಾಡಪದಗಳು ಮತ್ತು ಇಂದಿನ ಹೊಸ ಕವಿತೆ ಎಂದು ನಾಲ್ಕು ಭಾಗಗಳಲ್ಲಿ ಒಂದು ಅಪೂರ್ವ ಕೃತಿಯನ್ನು ಪ್ರಕಟಿಸಿದರು. ಕನ್ನಡ ಭಾಷೆಯ
    ಮೇಲೆ ಅಭಿಮಾನವಿರುವ ಜನಸಾಮಾನ್ಯರಿಗಾಗಿ ‘ಅಣುಗ, ಕನ್ನಡ ಕಾವ, ಕನ್ನಡ ಜಾಣ’ ಎಂಬ ಪರೀಕ್ಷೆಗಳನ್ನು ಪರಿಷತ್ತಿನಲ್ಲಿ ಆರಂಭಿಸಿದರು. ಈಗ ಅಣುಗ ಪರೀಕ್ಷೆಯನ್ನು ನಡೆಸುತ್ತಿಲ್ಲ. ಆದರೆ ಕನ್ನಡ ರತ್ನ ಎನ್ನುವ ಪರೀಕ್ಷೆಯನ್ನು ನಡೆಸುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಕೇವಲ ‘ಪುರುಷಮಯ’ವಾಗಿದ್ದಾಗ, ಪರಿಷತ್ತಿನಲ್ಲಿ ಮಹಿಳಾಶಾಖೆಯನ್ನು ಡಿ.ಬಿಂದೂಬಾಯಿಯವರ ನೇತೃತ್ವದಲ್ಲಿ ಆರಂಭಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸಾರ್ವಜನಿಕ ವಿದ್ಯಾಪೀಠವಾಗಿ ಕನ್ನಡದ ಪುನರುತ್ಥಾನದಲ್ಲಿ ತೊಡಗಲು ಬಿ.ಎಂ.ಶ್ರೀಯವರು ನೀಡಿದ ಕೊಡುಗೆ ಬಹಳ ದೊಡ್ಡದು.

    Original price was: $0.30.Current price is: $0.27.
    Add to basket