Description
ವಿದ್ಯಾರ್ಥಿಗಳಿಗೆ ಪರೀಕ್ಷೆ ಎಂದರೆ ಪೆಡಂಭೂತದಂತೆ. ವರ್ಷವಿಡೀ ಓದಿದ, ಗ್ರಹಿಸಿದ ವಿಷಯಗಳನ್ನು ಮೂರು ಗಂಟೆಗಳಲ್ಲಿ ನೆನಪಿನಿಂದ ಹೆಕ್ಕಿ ತೆಗೆಯಬೇಕಲ್ಲವೇ! ಹಾಗಾಗಿ ಭಯ, ಆತಂಕ ಸಹಜ. ಜೊತೆಗೆ ಶಿಕ್ಷಕರ-ಹೆತ್ತವರ ಒತ್ತಡ ಎಲ್ಲಾ ಸೇರಿ ಅವರ ಮನಸ್ಸು ಖಿನ್ನವಾಗುತ್ತದೆ. ಓದಿನ ಏಕಾಗ್ರತೆ ಕಡಿಮೆಯಾಗುತ್ತದೆ. ‘ಯಾಕಾದ್ರೂ ಬಂತಪ್ಪ ಈ ಪರೀಕ್ಷೆ’ ಎನ್ನುವ ಚಡಪಡಿಕೆ ಶುರುವಾಗುತ್ತದೆ. ಈ ಸಮಯದಲ್ಲಿ ಹೆತ್ತವರ, ಶಿಕ್ಷಕರ ಪಾತ್ರ ಅವರಿಗೆ ಪ್ರೋತ್ಸಾಹದಾಯಕವಾಗಿರಬೇಕು. ಇಲ್ಲದಿದ್ದರೆ ಅವರ ಮುಂದಿನ ಭವಿಷ್ಯ ಮುರುಟಿ ಹೋಗಬಹುದು. ವಿದ್ಯಾರ್ಥಿಗಳೇ, ಪರೀಕ್ಷೆಯನ್ನು ಯಶಸ್ವಿಯಾಗಿ ಎದುರುಸುವುದು ಹೇಗೆ ಎಂದು ಚಿಂತಿಸುತ್ತಿದ್ದೀರಾ? ಇಲ್ಲಿವೆ ನೋಡಿ ಸರಳ-ಸುಲಭ ಉಪಾಯಗಳು.
Reviews
There are no reviews yet.