Description
ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಬದುಕನ್ನು ಕಣ್ಣಿಗೆ ಕಟ್ಟುವಂತೆ ಕಾದಂಬರಿಗಾರ್ತಿ ಮಿತ್ರಾ ವೆಂಕಟರಾಜ ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ಜೀವನದಲ್ಲಿ ಎದುರಾಗುವ ಘಟನೆಗಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಮತ್ತು ಹಳ್ಳಿಯಲ್ಲಿ ಪ್ರಮುಖವಾಗಿರುವ ಕುಟುಂಬಗಳ ರೀತಿ ನೀತಿಗಳ ಇತರ ಸಾಧಾರಣ ಕುಟುಂಬಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಸವಿವರವಾಗಿ ಚಿತ್ರಿಸಲಾಗಿದೆ. ಮಿತ್ರಾ ವೆಂಕಟರಾಜ ಅವರು ಎರಡು ಭಾಗಗಳಲ್ಲಿ ಕಾದಂಬರಿಯ ಒಟ್ಟು ಜೀವನದ ಪರಂಪರೆ ಅಳಿಸಿಹೋಗದಹಾಗೆ ಚಿತ್ರಿಸಿ ಮುಂದಿನ ತಲೆಮಾರಿಗೆ ದಾಖಲೆ ಉಳಿಸಿದ್ದಾರೆ.
ಅಣ್ಣ ತಮ್ಮಂದಿರಿಬ್ಬರ ನಡುವಣ ಪ್ರೀತಿ-ದ್ವೇಷಗಳ ತಿಕ್ಕಾಟವೇ ಕತೆಯ ಮೂಲವಸ್ತುವಾದರೂ, ಪಾರ ಎಂಬವಳ ಕತೆಯೂ ಕಾದಂಬರಿಯ ಉದ್ದಕ್ಕೆಲ್ಲ ಹರಿದುಕೊಂಡು ಅದಕ್ಕೆ ಇನ್ನೊಂದು ಆಯಾಮವನ್ನು ಕೊಡುತ್ತದೆ. ಹಾಗೆಯೇ ಇದು ಪಾರ, ಲಕ್ಷ್ಮಿದೇವಿ, ಅವಳ ಸೊಸೆ ಕಮಲಿ – ಈ ಮೂವರು ಹೆಂಗಸರ ಬದುಕಿನ ಹೋರಾಟದ ಕತೆಯೂ ಹೌದು.
Reviews
There are no reviews yet.