-
-40%
ಮಿನುಗು ದೀಪ
0ಮಿನುಗು ದೀಪ
ಬದುಕಿನ ಶುಷ್ಕ ವಸ್ತುಗಳನ್ನು ಕಾವ್ಯರಸದಲ್ಲಿ ಅದ್ದಿ ಚಪ್ಪರಿಸಿ ಸವಿಯುವಂತೆ ಮಾಡುವ ಕಾವ್ಯ ಪಾಕ ಪ್ರವೀಣೆ ಇವರು. ನಮ್ಮ ಮುಂದಿರುವ ಪ್ರಕೃತ ಹನಿಗವನ ಸಂಕಲನದಲ್ಲಿ ‘ಮುಕ್ತಕಗೀತೆ’, ಮತ್ತು ‘ಚುಟುಕ’ಗಳ ಬಗೆಯವು. ಇಲ್ಲಿಯ ವಿಷಯಗಳ ಹರವು ಅಣುರೇಣುತೃಣದಿಂದ ಬ್ರಹ್ಮ ಬ್ರಹ್ಮಾಂಡ ಪರ್ಯಂತವಾದವು. ಅಡಿಗೆ ಮನೆ ಸೌಟಿನಿಂದ ಹಿಡಿದು, ಚಪ್ಪಲಿ, ಕುಂಚ, ಕಲ, ಬಲ, ಬೆಟ್ಟ, ಕಡಲು, ಗಗನ, ಅಳು- ನಗು, ಸೂರ್ಯ- ಚಂದ್ರ, ಗಂಡ- ಹೆಂಡತಿ, ಇರುವೆ- ಅನೆ, ನಾಯಿ- ನರಿ, ವಸ್ತುಗಳನ್ನು ಒಮ್ಮೆ ಚಕಮಕಿಯ ಬೆಳಕಾಗಿ ಮಿಂಚಾಗಿ , ಒಮ್ಮೆ ರಸಾರ್ದ್ರ ನುಡಿಯಾಗಿ , ಕಿಡಿಯಾಗಿ, ಲೇವಡಿಯಾಗಿ, ಉಪಹಸ್ಯವಾಗಿ, ಹಂಗಿಸಿ, ಭಂಗಿಸಿ, ನೇರವಾಗಿ , ವಕ್ರವಾಗಿ, ತಿರುಚಿ, ಮಣಿಸಿ, ಖಂಡಿಸಿ, ಮಂಡಿಸಿ, ಸಿಹಿಯಾಗಿ, ಒಗರಾಗಿ, ಖಾರವಾಗಿ, ಕಹಿಯಾಗಿ, ನಾನಾ ಕಲ್ಲಹರಳುಗಳನ್ನು ಎಸೆಯುತ್ತ, ಬಾಣಬಿರುಸು ಬಿಡುತ್ತ, ಪಟಾಕಿ – ಚಟಾಕಿಗಳನ್ನು ಹಾರಿಸುತ್ತ , ಕಾವ್ಯ ದಿಗಂತವನ್ನು ವಿಸ್ತರಿಸುತ್ತಾ ನಡೆದಿದ್ದಾರೆ. -
-40%
ಅಲೆಯ ಆಲಾಪ
0ಅಲೆಯ ಆಲಾಪ
ಕನ್ನಡದಲ್ಲಿ ಇತ್ತೀಚೆಗೆ ಹೇರಳವಾಗಿ ಹನಿಗವನ, ಚುಟುಕುಗಳ ಸಾಹಿತ್ಯ ಸೃಷ್ಟಿಯಾಗಿದೆ. ತ್ರಿಪದಿ , ಮುಕ್ತಕ, ಚೌಪದಿಗಳು ಕೂಡ ಅಷ್ಟ ಜನ ಸಾಮಾನ್ಯರನ್ನು ಆಕರ್ಷಿಸಿದೆ. ಬೃಹತ್ತಾದುದನ್ನು , ಮಹತ್ತಾದದನ್ನು ಕಾಯಿಸಿ ಶೋಧಿಸಿ ಭಟ್ಟಿ ಇಳಿಸಿ ಮೂರು ಹ್ರಸ್ವ ಪಂಕ್ತಿಗಳಲ್ಲಿ ಹೇಳುವ ಯತ್ನಕ್ಕೆ ನನ್ನ ಮನ ಮುದಗೊಂಡಿತು.
ನನ್ನ ಅನುಭವಗಳ, ನೆನಪುಗಳ , ಮನದ ಒಳಪುಗಳ ಸಾರೆಸರ್ವಸ್ವವನ್ನು ಹಿತಮಿತವಾಗಿ ಚಿತ್ರಿಸಲು ಯತ್ನಿಸಿದ್ದೇನೆ. ಪ್ರಾಸ ಎಲ್ಲಿ ಸಹಜವಾಗಿ ಬಂದಿದೆಯೋ ಅಲ್ಲಲ್ಲಿ ಅದನ್ನು ಬರಮಾಡಿಕೊಂಡಿದ್ದೇನೆ.
ಇನ್ನು ಸುಂದರವಾದ ‘ಹೈಕು ಹಂದರದಲ್ಲಿ ಮನವು ವಾಯುವಿಹಾರ ಮಾಡುತ್ತದೆ ಬುವಿಬಾನ ದಾರಿಯಲಿ, ಜಪಾನಿನ ಹೈಕು ಕವಿತೆಗಳು ಮನದ ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮಭಾವ ಪ್ರಚೋದಿಸಿ ಭಾವನೆಗೆ ಪ್ರತಿಷ್ಠಾಪನೆಯ ಮಂಟಪವನ್ನು ಕಟ್ಟತ್ತದೆ ಕೇವಲ ಮೂರು ಸಾಲುಗಳಲ್ಲಿ.
ಈ ಪುಸ್ತಕದಲ್ಲಿ ಬರುವ ತ್ರಿಪದಿಗಳು
ಅಲೆಯ ಆಲಾಪ
ಮುಕ್ಕಾಲು ಪದ್ಯಗಳು
ಹೈಕು – ಹಂದರ -
-40%
ಅಂತರಂಗಯಾನ
0ಅಂತರಂಗಯಾನ
ಹೈಕುಗಳು ಸಹೃದಯರ ಹೃದಯವನ್ನು ಹಾಯ್ದು ಒಳನುಗ್ಗಿ ಚಿರವಾಗಿ ಅಲ್ಲೇ ಸೆರೆಯಾಗಿರಬಲ್ಲವು. ಏಕೆಂದರೆ ಇಲ್ಲಿನ ಕಾವ್ಯದ ವಿಚಾರಗಳಿಗೆ ಭಾವನೆಗಳಿಗೆ ಕಾಲವನ್ನು ಮೀರಿ ನಿಲ್ಲುವ ಸತ್ಯದ ಸ್ಪರ್ಶಗುಣವಿದೆ.
ಈ ಕೃತಿಯಲ್ಲಿನ ವಿಷಯ ವ್ಯಾಪ್ತಿಯ ಹರಹು ತುಂಬ ವಿಶಾಲವಾದುದು. ಸೃಷ್ಟಿಯಲ್ಲಿನ ಪ್ರಕೃತಿ ಪರಿಸರದಿಂದ ಮೊದಲ್ಗೊಂಡು ದಿನಬಳಕೆಯ ಅತ್ಯಂತ ಪರಿಚಿತ ಸಾಮಾನ್ಯ ಸಂಗತಿಗಳವರೆಗೂ ಈ ಹೈಕುಗಳು ನಮ್ಮೊಂದಿಗೆ ಆಪ್ತವಾಗಿ ಸಂಭಾಷಿಸುತ್ತವೆ. ಊದುಕಡ್ಡಿ,, ಇರುವೆ, ಸೌಟು, ಕುಕ್ಕರ್, ಸಾಬೂನುಗುಳ್ಳೆ, ಗಾಳಿಪಟ…. ಕಡೆಗೆ ಸೋಪಿನಲ್ಲಿ ಸಿಕ್ಕ ಕೂದಲೆಳೆ… ಅದೇನೇ ಇರಲಿ, ಇವೆಲ್ಲ ಯಾವುದೊ ತತ್ವವೊಂದನ್ನು ಬಿಂಬಿಸುವ ಸತ್ವಶಾಲಿ ಸಾಲುಗಳಾಗಿ ಪರಿಣಮಿಸಿಬಿಡುತ್ತವೆ. ಅತಿಬಳಕೆಯಿಂದಾಗಿ ಗಮನಕ್ಕೇ ಬಾರದ ವಿಷಯವಸ್ತು ಕೂಡ ಇಲ್ಲಿ ಓದುಗನ ಗಮನ ಸೆಳೆದು ಸೃಷ್ಟಿವೈಚಿತ್ರ್ಯಕ್ಕೆ ನನ್ನ ನಮನ ಸಲ್ಲಿಸಿಬಿಡುತ್ತದೆ. ಇದು ನಿಜಕ್ಕೂ ಕವಯತ್ರಿಯಲ್ಲಿರುವ ಕಾವ್ಯ ಕೈಚಳಕವೇ ಸರಿ! -
-40%
ಕೊರವಂಜಿಯ ಪಡುವಣ ಯಾತ್ರೆ
0ಅರುವತ್ತರ ದಶಕದ ಆದಿಭಾಗದಲ್ಲಿ ರಾಶಿಯವರು ಒಂದು ವೈದ್ಯಕೀಯ ತಂಡದೊಂದಿಗೆ ರಷ್ಯಾ ಹಾಗೂ ಯೂರೋಪ್ ದೇಶಗಳ ಪ್ರವಾಸವನ್ನು ಕೈಗೊಂಡರು. ಪ್ರವಾಸದ ಉದ್ದೇಶ ಆ ದೇಶಗಳ ವೈದ್ಯಕೀಯ ವಿಧಿವಿಧಾನಗಳ ಅಧ್ಯಯನವಾದರೂ ರಾಶಿಯವರ ತುಂಟ ಮನಸ್ಸು ಅಲ್ಲಿನ ಜನಜೀವನದ ವೈಚಿತ್ರ್ಯಗಳನ್ನು ನೋಡಿ ತನ್ಮೂಲಕ ನಗೆಯನ್ನು ಹೊಮ್ಮಿಸುವ ಅವಕಾಶವನ್ನು ಕಂಡುಕೊಂಡಿತು. ಆ ಪ್ರಕ್ರಿಯೆಯ ಫಲಶ್ರುತಿಯೇ ‘ಕೊರವಂಜಿಯ ಪಡುವಣ ಯಾತ್ರೆ’.
-
-40%
ಜ್ಞಾನವೃಕ್ಷ
0ಜ್ಞಾನವೃಕ್ಷ
(ಜೀವನ ಮತ್ತು ಬದುಕು)
ಜೀವನ ಸಹಜ ಪ್ರಕೃತಿಯಾದರೆ ಬದುಕು ಸಂಸ್ಕಾರದಿಂದ ರೂಪುಗೊಂಡ ಪ್ರತಿಮೆ. ಧಾರ್ಮಿಕ, ಸಾಮಾಜಿಕ, ವೈಜ್ಞಾನಿಕ, ಭೌತಿಕವೇ ಮೊದಲಾದ ಅನೇಕ ವಿಷಯಗಳನ್ನು ಕೈಗೆತ್ತಿಕೊಂಡು ಹಿಂದೂ, ಮುಸ್ಲಿಮ್ ಕ್ರಿಶ್ಚಿಯನ್, ಸಿಖ್, ಪಾರ್ಸಿ ಮುಂತಾದ ಜನಾಂಗಗಳಿಗೆ ಸಂಬಂಧಿಸಿದ ಗ್ರಂಥಗಳ ಜೊತೆಗೆ ತುಲನಾತ್ಮಕ ಅಧ್ಯಯನದಿಂದ ತಮ್ಮ ಪ್ರಬಂಧಗಳನ್ನು ಮಂಡಿಸುತ್ತಾರೆ. ಈ ಬಹುಮುಖ ಅಧ್ಯಯನ ಇಂದಿನ ಸಮಾಜಕ್ಕೆ ಬದುಕಿನ ಕನ್ನಡಿಯಾಗಿ ಬಾಳಿನ ಮುನ್ನುಡಿಯಾಗಿ ಓದುಗರನ್ನು ಮುನ್ನಡೆಸಲು ಸಹಾಯಕವಾಗಿದೆ. ‘ಉಪವಾಸದ ಹಿನ್ನೆಲೆಯಲ್ಲಿ ಏಕಾದಶಿಯ ಮಹತ್ವ’ವನ್ನು ನಾನಾ ಬಗೆಯಾಗಿ ವಿಶ್ಲೇಷಿಸಿದ್ದಾರೆ. -
-40%
ಕರ್ಮ
0ಕರ್ಮ
ಭೌತಿಕವಾಗಿಯೂ ಪಾರಮಾರ್ಥಿಕವಾಗಿಯೂ ಶ್ರದ್ಧೆ ಮತ್ತು ನಂಬಿಕೆಯ ನಡುವಿನ ವ್ಯತ್ಯಾಸ ಇದ್ದೇ ಇದೆ. ಈ ವ್ಯತ್ಯಾಸವನ್ನು ಪ್ರಾಯೋಗಿಕವಾಗಿ ಈ ಕೃತಿಯಲ್ಲಿ ಚರ್ಚಿಸಲಾಗಿದೆ.
ಪ್ರಸ್ತುತ ನಗರ ಸಮಾಜದಲ್ಲಿನ ವ್ಯಕ್ತಿ ತನ್ನ ತಂದೆಯ ಸಾವಿನ ನಂತರ ತನ್ನ ಊರಿಗೆ ಅಪ್ಪನ ಕ್ರಿಯೆ ಮಾಡಲು ಹೋಗಿ ಆ ಅಪರಕ್ರಿಯೆಯ ದಿನಗಳಲ್ಲಿ ಸಂಭವಿಸುವ ತೊಳಲಾಟ, ಭೂತ, ವರ್ತಮಾನಗಳ ಜಗ್ಗಾಟ, ಬಂಧಗಳ ಮನೋ ವ್ಯಾಪಾರ ಇವೆಲ್ಲವನ್ನೂ ಸಮಕಾಲೀನ ಶೈಲಿಯಲ್ಲಿ ಕಟ್ಟಿಕೊಟ್ಟಿರುವ ಕಾದಂಬರಿ ಕರ್ಮ. ಬಿಡುಗಡೆಯಾದ ಎರಡೇ ವರ್ಷದಲ್ಲಿ ನಾಲ್ಕು ಮುದ್ರಣಗಳನ್ನು ಕಂಡಿರುವ ಈ ಕೃತಿ ಅಪಾರ ಜನಮನ್ನಣೆ ಮತ್ತು ತಾತ್ವಿಕ ಚರ್ಚೆಯನ್ನು ಸಾಹಿತ್ಯ ವಲಯದಲ್ಲಿ ಹುಟ್ಟುಹಾಕಿದೆ. ನಾಟಕಕಾರ ಮತ್ತು ಕಾದಂಬರಿಕಾರರಾದ ಕರಣಂ ಪವನ್ ಪ್ರಸಾದರ ಮೊದಲ ಕಾದಂಬರಿಯಿದು. -
-40%
ಊರು ಸುಟ್ಟರೂ ಹನುಮಪ್ಪ ಹೊರಗ….
0ಊರು ಸುಟ್ಟರೂ ಹನುಮಪ್ಪ ಹೊರಗ….
ಹೊಸ ನಾಟಕಗಳು ಬರುತ್ತಿಲ್ಲವೆಂಬ ಅಳುಕನ್ನು ಅಳಿಸಬಲ್ಲ ಯುವ ಕತೆಗಾರರು ನಾಟಕ ರಚನೆಯತ್ತ ಮುಖ ಮಾಡಿರುವುದು ನಿಜಕ್ಕೂ ಸಂತಸದ ಸಂಗತಿ. ಈಗಾಗಲೇ ಕತೆಗಾರರು ಎಂದೇ ಹೆಸರಾಗಿರುವ ಗೆಳೆಯ ಹನಮಂತ ಹಾಲಿಗೇರಿಯವರ ಊರು ಸುಟ್ಟರೂ ಹನುಮಪ್ಪ ನಾಟಕವನ್ನು ಆಟಮಾಟ ತಂಡದ ಅಡ್ಯಾಟಕ್ಕೆ ಮಾಡಬೇಕೆಂದುಕೊಂಡಾಗ ತಂಡದ ಎಲ್ಲಾ ಸಾಧ್ಯತೆಗಳಿಗೆ ಹೊಂದಿಕೊಳ್ಳುವಂತೆ ನಾಟಕದ ವಿನ್ಯಾಸದಲ್ಲಿ ಬದಲಾವಣೆ ಮಾಡಿಕೊಟ್ಟರು.
ಎರಡು ಊರುಗಳ ನಡುವಿನ ಜಗಳ ನಾಟಕೀಯವಾದ ಹತ್ತಾರು ಘಟಣೆಗಳನ್ನು ಕಥಾಹಂದರದಲ್ಲಿ ಎಳೆದುಕೊಂಡಿದೆ. ಆದರೆ ಜಗಳಕ್ಕೆ ಕಾರಣನಾದ ದೇವರು ಮಾತ್ರ ವಾಸ್ತವದ ಪ್ರತಿನಿಧಿಯಾಗಿದ್ದಾನೆ. ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿ ದ್ವೇಷ ಹುಟ್ಟಿಕೊಳ್ಳುತ್ತದೆ. ನಮ್ಮದು ಎಂದು ಗೆರೆಹಾಕಿಕೊಂಡು ಗಡಿ ಗುರುತಿಸಿಕೊಂಡಲ್ಲಿ ಇನ್ನೊಬ್ಬರದು ಎಂಬ ದ್ವೇಷದ, ಅಸಡ್ಡೆಯ, ತಿರಸ್ಕಾರದ ನೋಟವೂ ಹುಟ್ಟಿಕೊಳ್ಳುತ್ತದೆ. ಪ್ರತಿಯೊಂದು ಸೀಮೆಯಲ್ಲೂ ಊರಿನ ಹಕ್ಕಿಗಾಗಿ ಎರಡೂರ ಸೀಮೆಗಳ ನಡುವೆ ಸಣ್ಣದೊಂದು ಜಗಳವಿದ್ದೆ ಇರುತ್ತದೆ.