• -40%

    ಶ್ರೀರಾಮ ಜನ್ಮಭೂಮಿ ತೀರ್ಪು

    0

    ಶ್ರೀರಾಮ ಜನ್ಮಭೂಮಿ ತೀರ್ಪು
    ಹಿಂದು, ಇಂದು, ಮುಂದು, ಸುತ್ತ

    ಈ ಪುಟ್ಟ ಗ್ರಂಥದ ಮೂರು ಮುಖ್ಯ ಲೇಖನಗಳನ್ನು ನಾನು ಸಮೀಪ ಕಾಲದಲ್ಲಿ ಕರ್ನಾಟಕದ ಬೇರೆ ಬೇರೆ ಪತ್ರಿಕೆಗಳಿಗಾಗಿ ಬರೆದದ್ದು. 2ನೆಯದು ಒಂದು ಮಾತ್ರ ಈ ಪುಸ್ತಕದಲ್ಲಿ ಸೇರ್ಪಡೆಗಾಗಿಯೇ ಬರೆದದ್ದು. ಎಲ್ಲಾ ಪರಸ್ಪರ ಸಂಬಂಧಿಸಿದ್ದು. ಕೋಲಾಹಲಕರವಾದ ಇಂದಿನ ಅವ್ಯವಸ್ಥೆಯ ಸ್ಥಿತಿಯಲ್ಲಿ ಒಂದು ವಾಸ್ತವವಾದ, ಸರ್ವೇಕ್ಷಣ ಚಿತ್ರವನ್ನು ನೀಡುತ್ತದೆಂದು ನಂಬಿದ್ದೇನೆ. ನಮ್ಮ ಜನ ಮುಗ್ಧರು ಮಾತ್ರವಲ್ಲ, ಮೂಢರೂ, ಮತಿಭ್ರಷ್ಟಾವಸ್ಥೆಯಲ್ಲಿರುವ ವಿಭ್ರಮಶೀಲರು! ಗುಲಾಮಗಿರಿಯ ಗುಂಗಿನಿಂದ ಇನ್ನೂ ಹೊರಬರಲಾಗದ ಈ ಅಸಹಾಯಕ ದುಃಸ್ಥಿತಿಯ ಲಾಭ ಪಡೆಯುತ್ತಿರುವವರು ನೆಹ್ರೂ ಪರಂಪರೆಯ ಇತಿಹಾಸ ಪ್ರಜ್ಞಾಶೂನ್ಯ, ಭ್ರಾಂತ ರಾಜಕಾರಣಿಗಳು, ಅಸತ್ಯದ ವಿಲಾಸದಲ್ಲಿ ಅಸಂಬದ್ಧ ಕನಸು ಕಾಣುತ್ತಿರುವ ಉನ್ಮತ್ತರು, ದುರಾಸೆಯ, ದುರಾಲೋಚನೆಯ ಅಲ್ಪಸಂಖ್ಯಾತ ಮುಖಂಡ ರಾಜಕಾರಣಿಗಳು, ಕಾಮ್ರೇಡರು ಮತ್ತು ಪೊಳ್ಳು ಸೆಕ್ಯುಲರಿಜಂ ಪ್ರವಾಹದಲ್ಲಿ ಕೊಚ್ಚುತ್ತಿರುವವರ ಓಟು ಬೇಟೆಯಲ್ಲಿರುವ ಎಲ್ಲ ದುಷ್ಟ ಸಂಚಿನ ರಾಜಕಾರಣಿಗಳು, ವಿದೇಶೀ ದ್ರೋಹ ಶಕ್ತಿಗಳು.

    Original price was: $1.20.Current price is: $0.72.
    Add to basket
  • -40%

    ರಾಜಧರ್ಮ-ರಾಜನೀತಿ ಭಾಗ ೧

    0

    ರಾಜಧರ್ಮ, ರಾಜನೀತಿ ಭಾಗ ೧ 

    ಪತ್ರಿಕೆಗಳಿಗೆ ಅಂಕಣಗಳನ್ನು ಬರೆಯುವುದು ಕಷ್ಟದ ಕೆಲಸ ಎಂದು ನನ್ನ ಅನುಭವ. ಬೇರೆಯವರ ಅಭಿಪ್ರಾಯವು ಬೇರೆಯೇ ಇದ್ದರೆ ಅದಕ್ಕೆ ಅವರವರೇ ಹೊಣೆ. ಬರೆಯುವವನ “ವ್ಯವಸಾಯ” – ಅಂದರೆ ಓದಿನ ವ್ಯಾಪ್ತಿ, ಅದರ ಸಾಂದರ್ಭಿಕ ಅನ್ವಯಿಕೆ, ಸಂಗತಿಗಳನ್ನು, ಸಂದರ್ಭಗಳನ್ನು ನೋಡುವಲ್ಲಿ, ಅರಿಯುವಲ್ಲಿ, ವಿಶ್ಲೇಷಣೆ ಮಾಡುವಲ್ಲಿ ಇರಬೇಕಾದ ನಿರ್ದಿಷ್ಟ ಸಾಮುದಾಯಿಕ, ಸಾರ್ವತ್ರಿಕ ಹಿತ, ನಿಷ್ಠುರವಾದರೂ ಸತ್ಯವನ್ನು ಹೇಳುವ ಛಲ, ಎದೆಗಾರಿಕೆ, ಅದಕ್ಕೆ ಬೇಕಾದ ಸಮರ್ಥನೆಗಳನ್ನು ಓದಿನಿಂದಲೂ, ಅನುಭವದಿಂದಲೂ ನಿರೂಪಿಸುವ ಪರಿಶ್ರಮ – ಅಡಕವಾಗಿ, ಓದುಗರ ಎಲ್ಲ ವರ್ಗಗಳನ್ನೂ ಮನದಲ್ಲಿಟ್ಟು, ತಿಳಿಯುವಂತೆ ಎಚ್ಚರ ವಹಿಸಬೇಕಾದ ಬರೆಹದ ಬಿಗಿ, ತಿಳಿ, ಭಾರವಾಗದ ಶೈಲಿ, ಅಲ್ಲಲ್ಲಿ ನೆನಪುಗಳು, ವ್ಯಕ್ತಿ ಚಿತ್ರಣ, anecdotes , ರೋಚಕವಾದ ಸಂಗತಿಗಳು ಎಲ್ಲೋ ಚದುರಿದ್ದರೂ, ಸಣ್ಣವಾಗಿದ್ದರೂ, ಹಿಡಿಯುವ ಸೂಕ್ಷ್ಮತೆ, ವಾರಾವಾರ ಪತ್ರಿಕಾಲಯಕ್ಕೆ ಸಕಾಲಕ್ಕೆ ತಲುಪಿಸಬೇಕಾದ ಹೊಣೆ, ಎಚ್ಚರ – ಇಂಥವು ಸುಲಭಸಾಧ್ಯವಾಗಿ ವಶವಾಗುವ ಗುಣಗಳಲ್ಲ. ಎಲ್ಲರೂ ಹೀಗೆ ಬರೆಯತ್ತಾರೋ ಇಲ್ಲವೋ, ಎಂಬುದು ನಿಮಗೂ ಗೊತ್ತಿದೆ. ಬರೀ Journalistic  ಎಂಬ ರೀತಿಯ ಸುದ್ದಿ ವಿಶ್ಲೇಷಣೆಗೇ ಮೀಸಲಾದ ಅಂಕಣ ಬರೆಹಗಾರರ ರೀತಿ ಬೇರೆ. ಅಲ್ಲಿ ಸೂಕ್ಷ್ಮತೆ, ವಿಶ್ಲೇಷಣಾ ಕುಶಲತೆ, ಸಮಗ್ರ ಸಂಗತಿಗಳ ಪಕ್ಷಿ ವೀಕ್ಷಣ, ಸುದ್ದಿ ಸಾಮೀಪ್ಯ, ತಕ್ಕಮಟ್ಟಿನ ನಿಷ್ಪಕ್ಷಪಾತತೆ, ಅತಿರೇಕ, ಆಕ್ರೋಶ, ಇಲ್ಲದ ಶೈಲಿ, ಓದುಗನನ್ನು ಮೆಚ್ಚಿಸಹೊರಡದ ಸುದ್ದಿನಿಷ್ಠೆ, ವಸ್ತು ನಿಷ್ಠೆ – ಬರೀ “report ” ಆಗದಂತೆ ವಹಿಸಬೇಕಾದ ಎಚ್ಚರ, ಇವು ಒಂದು ಬಗೆ.

    Original price was: $4.20.Current price is: $2.52.
    Add to basket
  • -40%

    ಬೀಜದೊಳಗಣ ವೃಕ್ಷ

    0

    ಬೀಜದೊಳಗಣ ವೃಕ್ಷ
    ಶ್ರೀಮತಿ ಗೀತಾ ವಸಂತ ಅವರು ಬೇಂದ್ರೆ ಕಾವ್ಯದ ವಿರಾಟ್ ಸ್ವರೂಪದ ಬಗ್ಗೆ `ಬೀಜದೊಳಗಣ ವೃಕ್ಷ’ ಎಂಬ ಹೆಸರಿನಿಂದ ಅಧ್ಯಯನ ಗ್ರಂಥವೊಂದನ್ನು ಬರೆದು ಪ್ರಸ್ತುತ ಪಡಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಅವರು ತುಮಕೂರು ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧವನ್ನು ಸಲ್ಲಿಸಿ ಡಿ.ಲಿಟ್. ಪದವಿ ಪಡೆದಿದ್ದಾರೆ. ಅದನ್ನು ಓದುಗರಿಗೆ ಉಪಯೋಗವಾಗುವ ರೀತಿಯಲ್ಲಿ ಮಾರ್ಪಡಿಸಿ ಕೃತಿ ರಚಿಸಿದ್ದಾರೆ.

    Original price was: $2.16.Current price is: $1.30.
    Add to basket
  • -40%

    ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ

    0

    ಸಾಹಿತ್ಯದ ವೈಜ್ಞಾನಿಕ ಮೀಮಾಂಸೆ
    ಕಾವ್ಯಮೀಮಾಂಸೆಯನ್ನು ಕುರಿತಂತೆ ಗಿರಿ ಅವರು ನಡೆಸುವ ವೈಜ್ಞಾನಿಕ ಶೋಧ, ಚಿಂತನೆ ಮಹತ್ವದ ಅಂಶಗಳನ್ನು ಹೊರ ಹಾಕುತ್ತದೆ. ಪ್ರಾಚೀನ ಭಾರತೀಯ ಮೀಮಾಂಸೆಯ ಸಾಧನೆಗಳನ್ನು ಮತ್ತು ಸಮಸ್ಯೆಗಳನ್ನು ಅಥವಾ ಕೊರತೆಗಳನ್ನು ಗಿರಿ ಅವರು ಶೋಧಿಸುತ್ತಾರೆ; ಸ್ಪಷ್ಟ ನಿಲುವಿನಲ್ಲಿ ಅವುಗಳನ್ನು ದಾಖಲಿಸುತ್ತಾರೆ.

    Original price was: $7.20.Current price is: $4.32.
    Add to basket
  • -40%

    ಗಿರೀಶ ಕಾರ್ನಾಡ ಹಾಗೂ ಭಾರತೀಯ ರಂಗಭೂಮಿ

    0

    ಗಿರೀಶ ಕಾರ್ನಾಡ ಹಾಗೂ ಭಾರತೀಯ ರಂಗಭೂಮಿ :
    (ನಾಟಕಗಳ ವಿಮಶಾತ್ಮಕ ಅಧ್ಯಯನ)
    ಕನ್ನಡದ ಹಿರಿಯ ಸ್ವೋಪಜ್ಞ ವಿಮರ್ಶಕರಲ್ಲಿ ಒಬ್ಬರಾದ ಡಾ.ಜಿ.ಎಸ್.ಅಮೂರ ಅವರು ಗಿರೀಶ ಕಾರ್ನಾಡರ ಬಾನುಲಿ ನಾಟಕ ‘ಮಾ ನಿಷಾದ’ ವೂ ಸೇರಿದಂತೆ ಎಲ್ಲ ಹನ್ನೆರೆಡು ನಾಟಕಗಳ ಕೂಲಂಕಷ ಅಧ್ಯಯನ ಕೈಗೊಂಡು ಈ ಕೃತಿಯನ್ನು ರಚಿಸಿದ್ದಾರೆ.
    ಕಾರ್ನಾಡರ ನಾಟಕಗಳ ಮೇಲೆ ಇತಿಹಾಸ, ಪುರಾಣ, ವೇದ, ಪಾಶ್ಚಾತ್ಯ ಹಾಗು ಪೌರ್ವಾತ್ಯ ರಂಗಭೂಮಿಗಳ ನಾಟಕಕಾರ, ಸಮಕಾಲೀನ ಸಂದರ್ಭದ ಪ್ರೇರಣೆ ಪ್ರಭಾವಗಳನ್ನು ಈ ನಾಟಕಗಳ ಸಾಧ್ಯತೆ ಹಾಗೂ ಮಿತಿಗಳು ಇತ್ಯಾದಿಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿ ವಿಮರ್ಶಿಸಿದ್ದಾರೆ.
    ಇದು ಕಾರ್ನಾಡರ ನಾಟಕಗಳ ಓದುಗರಿಗೆ, ವಿಶೇಷ ಅಧ್ಯಯನ ಮಾಡುವ ಅಭ್ಯಾಸಿಗಳಿಗೆ ದಿಕ್ಸೂಚಿಯಾಗಬಲ್ಲ ಅಪರೂಪದ ವಿಮರ್ಶಾತ್ಮಕ ಕೃತಿಯಾಗಿದೆ.

    Original price was: $1.80.Current price is: $1.08.
    Add to basket
  • -40%

    ಯು. ಆರ್. ಅನಂತಮೂರ್ತಿ

    0

    ಯು. ಆರ್. ಅನಂತಮೂರ್ತಿ 

    ವೈಚಾರಿಕತೆ ಹಾಗೂ ಸಾಹಿತ್ಯ  :
    ಅನಂತಮೂರ್ತಿಯವರು ನನ್ನ ಸಮಕಾಲೀನರಲ್ಲೇ ಅತ್ಯಂತ ಗಂಭೀರ ಮನೋಧರ್ಮದ ಲೇಖಕರು. ಬದುಕಿನ ಬಗ್ಗೆ, ಸಮಾಜದ ಬಗ್ಗೆ, ಮಾನವನ ದೈನಿಕ ಜೀವನದ ಬಗ್ಗೆ. ಅವನ ಭವಿತವ್ಯದ ಬಗ್ಗೆ ತಾವು ಅಭ್ಯಾಸ ಮಾಡಿದ್ದನ್ನು, ಗಾಢವಾಗಿ ಚಿಂತಿಸಿದ್ದನ್ನು ನಾಟ್ಯೀಕರಿಸುತ್ತ ವಿಚಾರವನ್ನೇ ಒಂದು ಜೀವಂತ ಅನುಭವದ ಪ್ರಭಾವಬೀರುವ ಸ್ಥಿತಿಗೆ ಒಯ್ದು ನಮಗೆ ಮುಟ್ಟಿಸುವ ಕಳಕಳಿಯ ಪ್ರಯತ್ನ ಇವರ ಸಾಹಿತ್ಯದ ಪ್ರಮುಖ ಲಕ್ಷ್ಯಗಳಲ್ಲೊಂದಾಗಿದೆ. ನಮ್ಮ ಪ್ರಜ್ಞೆಯನ್ನು ಹಿಗ್ಗಿಸುವಲ್ಲಿ ಸಾಹಿತ್ಯಕ್ಕಿರುವ ಮಹತ್ವದ ಪಾತ್ರವನ್ನು ಕುರಿತು ಇವರಿಗಿರುವ ಗಾಢವಾದ ಶ್ರದ್ಧೆಯೇ ಇವರು ಬರೆದ ಪ್ರತಿಯೊಂದು ನಮ್ಮ ಪ್ರೀತಿಗೆ, ಗೌರವಕ್ಕೆ ಪಾತ್ರವಾಗುವಂತೆ ಮಾಡುತ್ತದೆ.

    Original price was: $1.80.Current price is: $1.08.
    Add to basket
  • -40%

    ಭಾಷಾಂತರ : ಸೈದ್ಧಾಂತಿಕ ಹಾಗೂ ಆನ್ವಯಿಕ ನೆಲೆಗಳು

    0

    ಭಾಷಾಂತರ : ಸೈದ್ಧಾಂತಿಕ ಹಾಗೂ ಆನ್ವಯಿಕ ನೆಲೆಗಳು

    ಕಳೆದ ಎರಡು–ಮೂರು ದಶಕಗಳಲ್ಲಿ ಪಾಶ್ಚಿಮಾತ್ಯ–ಭಾರತೀಯ ವಿಶ್ವ ವಿದ್ಯಾಲಯಗಳಲ್ಲಿ ಭಾಷಾಂತರವನ್ನು ಕುರಿತು ಅಗಾಧ ಚಿಂತನೆ ನಡೆದಿದೆ; ಭಾಷಾಶಾಸ್ತ್ರೀಯ, ವಸಾಹತೋತ್ತರ, ಸ್ತ್ರೀವಾದಿ, ಜಾನಾಂಗಿಕ, ಇತ್ಯಾದಿ ನೆಲೆಗಳಲ್ಲಿ ಭಾಷಾಂತರಕ್ರಿಯೆಯ ಸ್ವರೂಪ ಹಾಗೂ ಪರಿಣಾಮಗಳನ್ನು ಕುರಿತು ಅನೇಕ ಸ್ವೋಪಜ್ಞ ಸಿದ್ಧಾಂತಗಳು ಮೂಡಿ ಬಂದಿವೆ. ಅವುಗಳಲ್ಲಿ, ನನಗೆ ಮಹತ್ವಪೂರ್ಣವಾದ ಕೆಲವು ಸೈದ್ಧಾಂತಿಕ ಧಾರೆಗಳನ್ನು ಇಲ್ಲಿ ಪರಿಚಯಿಸಲಾಗಿದೆ.

    Original price was: $2.10.Current price is: $1.26.
    Add to basket
  • -40%

    ಕುವೆಂಪು : ಯುಗದ ಕವಿ

    0

    ಕುವೆಂಪು ಅವರ ವ್ಯಕ್ತಿತ್ವದ ಮೂಲನೆಲೆಯಾಗಿ ಆಧ್ಯಾತ್ಮಿಕತೆ, ಅವರ ಬರವಣಿಗೆಯು ಸ್ಥಳೀಯ ಮತ್ತು ವೈಶ್ವಿಕಗಳನ್ನು ಹೆಣೆಯುವ ಬಗೆ, ಅವರು ಲೌಕಿಕ ಮತ್ತು ಆಗಮಿಕಗಳ ನಡುವೆ ಸಾಧಿಸಿರುವ ಸಹಯೋಗದ ಸ್ವರೂಪ, ಅವರ ನಾಟಕಗಳ ಸಮಕಾಲೀನತೆ ಮತ್ತು ಸಾಮಾಜಿಕತೆ, ಕಾದಂಬರಿಗಳ ದಾರ್ಶನಿಕ ನೆಲೆಗಟ್ಟು ಮುಂತಾದ ಸಂಗತಿಗಳು ಇಲ್ಲಿ ಹೊಸ ಆಯಾಮಗಳನ್ನು ಪಡೆದುಕೊಂಡಿವೆ.

    Original price was: $1.80.Current price is: $1.08.
    Add to basket