• -40%

    ಟಿಪೂ ಸುಲ್ತಾನ ಕಂಡ ಕನಸು

    0

    ಟಿಪೂ ಸುಲ್ತಾನ ಕಂಡ ಕನಸು
    1997 ರಲ್ಲಿ ಭಾರತೀಯ ಸ್ವಾತಂತ್ರ್ಯಕ್ಕೆ ಐವತ್ತು ತುಂಬಿದ ಸಂದರ್ಭದಲ್ಲಿ ಇಂಗ್ಲೆಂಡಿನ ಬಿ.ಬಿಸಿ. ರೇಡಿಯೋದವರು ನನಗೆ ಸ್ವಾತಂತ್ರ್ಯ ದಿನಂದು ಬಿತ್ತರಿಸಲಿಕ್ಕಾಗಿ ಒಂದು ನಾಟಕ ಬರೆದುಕೊಡಲು ಕೇಳಿಕೊಂಡರು. ನಾಟಕದ ವಸ್ತು ಆಂಗ್ಲ-ಭಾರತೀಯ ಸಂಬಂಧವನ್ನು ಕುರಿತದ್ದಾಗಿರಬೇಕು ಎಂಬ ಮಾತು ಸೂಚ್ಯವಾಗಿ ಬಂದಾಗ ನನಗೆ ಕೂಡಲೆ ಹೊಳೆದದ್ದು ಕರ್ನಾಟಕದ ಕೊನೆಯ ಸ್ವತಂತ್ರ ಶಾಸಕನಾದ ಟಿಪೂ ಸುಲ್ತಾನನ ದುರಂತ! ತನ್ನ ಇಡಿಯ ಬಾಳನ್ನು ಬಡಿದಾಟದಲ್ಲೇ ನೀಗಿಸಿದ ಈ ವ್ಯಕ್ತಿ ಗುಟ್ಟಾಗಿ ತನ್ನ ಕನಸುಗಳನ್ನು ಬರೆದಿಡುತ್ತಿದ್ದ ಎಂಬ ಮಾತನ್ನು ಏ.ಕೆ.ರಾಮಾನುಜನ್‍ರಿಂದ ಕೇಳಿದಂದಿನಿಂದ ನನಗೆ ಟಿಪೂವಿನಲ್ಲಿ ವಿಶೇಷ ಆಸಕ್ತಿ ಉಂಟಾಗಿತ್ತು. ಅದೇ ನಾಟಕ ರಚನೆಗೆ ಪ್ರೇರಣೆಯಾಯಿತು.

    Original price was: $0.72.Current price is: $0.43.
    Add to basket
  • -40%

    ತುಘಲಕ್

    0

    ಇದು ಗಿರೀಶ ಕಾರ್ನಾಡರ ಎರಡನೆಯ ನಾಟಕ. ಈ ನಾಟಕದ ಕಥಾವಸ್ತು ಐತಿಹಾಸಿಕವಾಗಿದ್ದರೂ ಇದರ ಉದ್ದೇಶ ಇತಿಹಾಸದ ಚಿತ್ರಣವಲ್ಲ. ತುಘಲಕ್ ವಂಶದ ಹುಚ್ಚ ಮುಹಮ್ಮದನ ಅರಾಜಕತೆಯ ಆಳ್ವಿಕೆಯೇ ನಾಟಕದ ಕಾರ್ಯಪರಂಪರೆಯಗಿದ್ದರೂ ತೋರಿಸುವ ಕೃತಿಯಲ್ಲ. ಮನುಷ್ಯ ದೇವತ್ವದ ಕನಸನ್ನು ಕಾಣುವ ಪಶುವಾಗಿರುವದೇ ಇಲ್ಲಿಯ ಮೂಲಭೂತವಾದ ಸಮಸ್ಯೆಯಾಗಿದೆ. ಈ ಸಮಸ್ಯೆ ಹುಟ್ಟಿಸುವ ಅನೇಕ ಮಾನವೀಯ ಅನರ್ಥಗಳಿಗೆ ಮುಹಮ್ಮದ ಪ್ರಳಯ ಕೇಂದ್ರವಾಗಿದ್ದಾನೆ.

    Original price was: $1.20.Current price is: $0.72.
    Add to basket
  • ಎಲ್ಲಿಯೂ ಸಲ್ಲಲಿಲ್ಲ

    0

    ಎಲ್ಲಿಯೂ ಸಲ್ಲಲಿಲ್ಲ
    ಈ ನಾಟಕವು ನರಸಿಂಹ ಹಿರಣ್ಯಕಶಿಪು, ದೇವತೆಗಳು, ಇವರಾರದೂ ಪೌರಾಣಗಳ ಕತೆಯಲ್ಲ. ಆದ್ದರಿಂದ ನಡೆಯುವ ಪ್ರಸಂಗಗಳಿಗೆ ಪೌರಾಣಗಳ ದೃಷ್ಟಿಯಿಂದ ಲಾಜಿಕ್ ಇರುವುದಿಲ್ಲ. ದೇವಲೋಕ ಅಂಥದೊಂದಿದ್ದರೆ ಮತ್ತು ಮನುಷ್ಯಲೋಕ ಇವುಗಳ ನಡುವಿನ ಕೊಂಡು ಕಳಚಿದವೆನಿಸಿದಾಗ ನಾಟಕ ನಡೆಯುವದು. ದೇವತೆಗಳು, ನಾಟಕ ಆಡೂವವಳು, ಅದರ ಹೊರಗಿನವರು ಹೀಗೆ ಮೂಲಸ್ತರಗಳಲ್ಲಿ ಪ್ರಹಸನ ನಡೆಯುತ್ತದೆ. ಇದು ನಾಟಕದ ವಸ್ತು. ಪೂರ್ಣ ನಾಟಕ ನಡೆದಾಗ ಏನೇನಾಗುವದೋ ಅದೇ ನಾಟಕದ ಕತೆ.

    $0.00
    Add to basket
  • -40%

    ಅಂಜುಮಲ್ಲಿಗೆ

    0

    ‘ಅಂಜುಮಲ್ಲಿಗೆ’ ನಾನು ಆಕ್ಸಫರ್ಡಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ನಡೆದ ಒಂದು ಘಟನೆಯನ್ನು ಆಧರಿಸಿ ಬರೆದದ್ದು. ೧೯೬೦ರ ದಶಕದಲ್ಲಿ ಬ್ರಿಟನ್ನಿನಲ್ಲಿ ಭಾರತೀಯರು ತೀರ ಕಡಿಮೆ ಸಂಖ್ಯೆಯಲ್ಲಿದ್ದರು. ಇಂದು ಆ ದೇಶವನ್ನೇ ವ್ಯಾಪಿಸಿದ್ದಾರೆ. ಹೀಗಾಗಿ ಇಂದಿನ ರಾಜಕೀಯ ಮಾನಸಿಕ ತುಮುಲಗಳು ಅಂದಿಗಿಂತ ಬೇರೆಯಾಗಿರಬಹುದು.
    ಗಿರೀಶ ಕಾರ್ನಾಡ

    Original price was: $0.96.Current price is: $0.58.
    Add to basket
  • -40%

    ಬಲಿ

    0

    ಒಂದು ದೃಷ್ಟಿಯಲ್ಲಿ ‘ಬಲಿ’ ನಾಟಕವನ್ನು ನಾನು ೧೯೫೬ರಲ್ಲಿ ಕರ್ನಾಟಕ ಕಾಲೇಜಿನಲ್ಲಿ ‘ಯಶೋಧರ ಚರಿತ’ ಓದಿದ ಗಳಿಗೆಯಿಂದಲೇ ಬರೆಯಲಾರಂಭಿಸಿದೆ. ಅದು ‘ಹಿಟ್ಟಿನ ಹುಂಜ’ ಎಂಬ ಹೆಸರಿನಲ್ಲಿ ಪ್ರಕಟ ಕೂಡ ಆಯಿತು. ನಂತರ ಇದನ್ನು ಮತ್ತೆ ಹೊಸದಾಗಿ ಬರೆದು ಸತ್ಯದೇವ ದುಬೇ ಸೂಚಿಸಿದಂತೆ ‘ಬಲಿ’ ಎಂಬ ಹೊಸ ಹೆಸರಿಟ್ಟೆ.

    ಗಿರೀಶ ಕಾರ್ನಾಡ

    Original price was: $0.48.Current price is: $0.29.
    Add to basket
  • -100%

    ಬಾರೋ ಸಾಧನಕೇರಿಗೆ… ಮತ್ತು ನಿಷ್ಕ್ರಿಯ ಘಾತಕಿ

    0

    ಸಧ್ಯದ ವಾತಾವರಣದಲ್ಲಿ ಎಲ್ಲರ ಮುಖ ಐ. ಟಿ. ಕ್ಷೇತ್ರದತ್ತ ಹಾಗೂ ಪಶ್ಚಿಮದ ದೇಶಗಳತ್ತ ಮುಖ ಮಾಡಿರುವಾಗ ದೇಶೀಯ ಆಕರ್ಷಣೆ ತನ್ನ ಕಳೆಯನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಹೇಗೆ ಮತ್ತೆ ಮಾತೃಭೂಮಿ ತನ್ನ ನಿರಂತರವಾದ ಸೂಜಿಗಲ್ಲಿನ ಆಕರ್ಷಣೆಯಿಂದ ಪರದೇಶಿಗಳಾದವರನ್ನು ತನ್ನ ಹತ್ತಿರ ಎಳೆದುಕೊಳ್ಳುತ್ತದೆ ಎಂಬ ವಸ್ತುವನ್ನಿಟ್ಟುಕೊಂಡು ಬರೆದ ನಾಟಕ ‘ಬಾರೋ ಸಾಧನಕೇರಿಗೆ । ಮರಳಿ ನಿನ್ನೀ ಊರಿಗೆ, ಬೇಂದ್ರೆಯವರ ಕವನದ ಸಾಲುಗಳ ಶೀರ್ಷಿಕೆಯಾಗಿಸಿಕೊಂಡು ಹೆಣೆದ ಪ್ರಾರಂಭದ ವಾಕ್ಯವನ್ನು ನಾಟಕ ಅರ್ಥಪೂರ್ಣವಾಗಿದೆ.
    ಹಾಗೆಯೇ ‘ನಿಷ್ಕ್ರಿಯ ಘಾತಕಿ’ ಎಂಬ ನಾಟಕ ಜನಸಾಮಾನ್ಯರ ಅಲಿಪ್ತತೆ ಹೇಗೆ ಜೀವನದ ಸ್ವಾಸ್ಥ್ಯವನ್ನು ಹಾಳು ಮಾಡುವದಕ್ಕೆ ಕಾರಣವಾಗುತ್ತದೆ ಎಂಬುದನ್ನು ಮನನೀಯವಾಗಿ ನಿರೂಪಿಸುತ್ತದೆ.

    Original price was: $0.72.Current price is: $0.00.
    Add to basket
  • -40%

    ತಲೆದಂಡ

    0

    ‘ತಲೆದಂಡ’ ಪದ ಬಸವಣ್ಣನವರ ವಚನದಿಂದ ಬಂದದ್ದಾದರೂ ನನಗೆ ನಾಟಕದ ಹೆಸರಾಗಿ ದೊರೆತದ್ದು ದ. ರಾ. ಬೇಂದ್ರೆ ಅವರಿಂದ. ಸುಮಾರು ಐವತ್ತು ವರ್ಷಗಳ ಹಿಂದೆ ಅವರು ಬಸವಣ್ಣ-ಬಿಜ್ಜಳರ ಯುಗವನ್ನು ಕುರಿತು ಈ ಹೆಸರಿನ ನಾಟಕವನ್ನು ಬರೆಯುವ ಹೊಳಹು ಹಾಕಿದ್ದರಂತೆ. ಆದರೆ ಬರೆಯಲಿಲ್ಲ.
    ಈಗಾಗಲೇ ಈ ವಿಷಯವನ್ನೇ ವಸ್ತುವಾಗಿಟ್ಟುಕೊಂಡ ಹಲವಾರು ಕಾದಂಬರಿ, ನಾಟಕಗಳು ಕನ್ನಡದಲ್ಲಿ ಬಂದಿವೆ. ಅವುಗಳಲ್ಲಿ ಲಂಕೇಶ್ ಹಾಗೂ ಶಿವಪ್ರಕಾಶ್ ಬರೆದ ನಾಟಕಗಳು, ಬಿ. ಪುಟ್ಟಸ್ವಾಮಯ್ಯ – ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರ ಕಾದಂಬರಿಗಳು ವಿಶೇಷ ಪ್ರಶಂಸೆ ಗಳಿಸಿವೆ.
    ಆದರೂ ಈ ನಾಟಕ ಬರೆದಿದ್ದೇನೆ.

    ಗಿರೀಶ ಕಾರ್ನಾಡ

    Original price was: $0.96.Current price is: $0.58.
    Add to basket
  • -40%

    ನಾಗಮಂಡಲ

    0

    ನಾಗಮಂಡಲ – ನಾಟಕ

    ಇದು ಗಿರೀಶ ಕಾರ್ನಾಡ ರಚನೆಯ ನಾಟಕವಾಗಿದೆ.

    Original price was: $0.60.Current price is: $0.36.
    Add to basket