• -40%

    ಕೃತಿ ಜಗತ್ತು

    0

    ಕೃತಿ ಜಗತ್ತು:
    ‘ಕೃತಿ ಜಗತ್ತು’ ಎಂಬ ಈ ಗ್ರಂಥದಲ್ಲಿ 26 ಕೃತಿಗಳನ್ನು ಕುರಿತ ಅಧ್ಯಯನಾತ್ಮಕ ಬರಹಗಳಿವೆ.
    ಜಗತ್ತಿನ ಕೃತಿಗಳು ಇಲ್ಲಿ ಅಡಕವಾಗಿರುವ ಕಾರಣ, ಈ ಗ್ರಂಥಕ್ಕೆ ‘ಕೃತಿ ಜಗತ್ತು’ ಎನ್ನುವ ಶೀರ್ಷಿಕೆ ಅರ್ಥಪೂರ್ಣವಾಗಿದೆ.

    Original price was: $3.72.Current price is: $2.23.
    Add to basket
  • -40%

    ಮೊಗ್ಗಿನ ಮಾತು

    0

    ಮೊಗ್ಗಿನ ಮಾತು:

    ಶ್ರೀ ಪಳಕಳ ಸೀತಾರಾಮ ಭಟ್ಟರ ಸಮಗ್ರ ಕೃತಿಗಳ ಕುರಿತು ಅಧ್ಯಯನ ಮಾಡಿ ಬರೆದಿರುವ ಪುಸ್ತಕ ಈ `ಮೊಗ್ಗಿನ ಮಾತು’. ಒಂದನೆ ಅಧ್ಯಾಯದಲ್ಲಿ ಮಕ್ಕಳ ಸಾಹಿತ್ಯ ಎಂದರೇನು? ಎಂಬುವುದರ ಕುರಿತು ಚಿಂತನೆಯಿದೆ. ಎರಡನೆ ಅಧ್ಯಾಯದಲ್ಲಿ ಪಳಕಳರ ಬದುಕು ಹಾಗೂ ಬರಹಗಳ ಕುರಿತು ಚರ್ಚಿಸಲಾಗಿದೆ. ಅಧ್ಯಾಯ ಮೂರರಲ್ಲಿ ಪಳಕಳರ ಮಕ್ಕಳ ಕವನಗಳನ್ನು ಮನೋವೈಜ್ಞಾನಿಕ ಹಾಗೂ ಶೈಕ್ಷಣಿಕ ನೆಲೆಗಳಲ್ಲಿ ಅಧ್ಯಯನ ಮಾಡಲಾಗಿದೆ. ನಾಲ್ಕನೆ ಅಧ್ಯಾಯದಲ್ಲಿ ಪಳಕಳರ ಮಕ್ಕಳ ಕಥೆಗಳ ಕಾಲ್ಪನಿಕ ಹಾಗೂ ವಾಸ್ತವವಾದಿ ನೆಲೆಗಳನ್ನು ಪಂಜೆ ಮಂಗೇಶರಾಯರ ಕಥೆಗಳೊಂದಿಗೆ ಇಟ್ಟು ತೌಲನಿಕವಾಗಿ ಅಧ್ಯಯನ ಮಾಡಲಾಗಿದೆ. ಐದನೆ ಅಧ್ಯಾಯದಲ್ಲಿ ಮಕ್ಕಳ ಹಾಗೂ ಹೆತ್ತವರ ಅಭಿಪ್ರಾಯಗಳ ಸಂಗ್ರಹದ ಮೂಲಕ ಪಳಕಳರ ಕಥೆಗಳ ಹಾಗೂ ಕವನಗಳ ಪ್ರಾಯೋಗಿಕ ಅಧ್ಯಯನ ನಡೆಸಲಾಗಿದೆ. ಆರನೆ ಅಧ್ಯಾಯದಲ್ಲಿ `ಮಕ್ಕಳ ನಾಟಕ’ ಎಂದರೇನು? ಅವುಗಳಿಂದ ಮಕ್ಕಳಿಗೇನು ಪ್ರಯೋಜನ? ಮಕ್ಕಳ ನಾಟಕ ಹಾಗೂ ಪ್ರೌಢನಾಟಕ ಎಂಬ ಪ್ರತ್ಯೇಕ ವಿಭಾಗದ ಅಗತ್ಯವಿದೆಯೆ? ಎಂಬುದನ್ನು ಅನುಭವಿ ರಂಗಕರ್ಮಿಗಳ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಅಧ್ಯಯನ ಮಾಡಲಾಗಿದೆ.  ಏಳನೆಯ ಅಧ್ಯಾಯದಲ್ಲಿ ಪಳಕಳರ ಪ್ರೌಢಕೃತಿಗಳಾದ ಭಾವಗೀತೆಗಳು, ಚುಟುಕಗಳು ಹಾಗೂ ಕೀರ್ತನ ಕುಸುಮ ಕೃತಿಗಳ ಕುರಿತು ಚರ್ಚಿಸಲಾಗಿದೆ. ಕೊನೆಯ ಅಧ್ಯಾಯದಲ್ಲಿ ಪಳಕಳರ ಕೃತಿಗಳ ಸಮೀಕ್ಷೆಯ ಒಟ್ಟು ನೋಟವನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ.

    Original price was: $4.20.Current price is: $2.52.
    Add to basket
  • -39%

    ಸಾಹಿತ್ಯ ಹಾಗೂ ನವ್ಯತೆ

    0

    ಸಾಹಿತ್ಯ ಹಾಗೂ ನವ್ಯತೆ:

    – ವಿನಾಯಕ ಕೃಷ್ಣ ಗೋಕಾಕ

    Original price was: $0.36.Current price is: $0.22.
    Add to basket
  • -39%

    Coleridge’s Aesthetics

    0

    Coleridge’s transcendentalism has been a stumbling block in the way of his admirers as well as student of his poetry and criticism. Readers are in love with his subtle-souled psychology in poetry and delicate imagery. They also admire his brilliant and perceptive criticism seen in his remakes on the genius of Shakespeare or the poetry diction of Wordsworth. But the philosophical and psychological assumptions that underline his criticism, especially with readers. Several efforts have been made to elucidate them but without much success.

    Original price was: $0.36.Current price is: $0.22.
    Add to basket
  • -50%

    ಟಿಪ್ಪು ಸುಲ್ತಾನನ ಹಕೀಕತ್

    0

    ಟಿಪ್ಪು ಸುಲ್ತಾನನ ಹಕೀಕತ್:

    (ಹಿಂದೂತ್ವ ಸೆಕ್ಯುಲರಿಸಂ ಮತ್ತು ಇಸ್ಲಾಮಿನ ಕ್ರಿಯಾಶೀಲತೆ)
    ಡಾ. ಮಹೇಶ್ ಕುಮಾರ್ ಸಿ. ಎಸ್

    ಟಿಪ್ಪು ಸುಲ್ತಾನನ ವಿಚಾರಗಳ ಬಗ್ಗೆ ರಚಿಸಿರುವ ಕೃತಿ ಇದಾಗಿದೆ.

    Original price was: $1.44.Current price is: $0.72.
    Add to basket
  • -40%

    ಮಕ್ಕಳ ಮನೋಲೋಕ-೨ ಆಕಾಶಕ್ಕೆ ಏಣಿ

    0

    ಮಕ್ಕಳ ಮನೋಲೋಕ-೨ ಆಕಾಶಕ್ಕೆ ಏಣಿ:

    (ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಸನ ಮಾಲೆ)

    ನಾವು ಮಕ್ಕಳಿಗಾಗಿ ಮಾಡುವ ಎಲ್ಲ ಪ್ರಯತ್ನಗಳ ಅಂತಿಮ ಗುರಿ-ಮಕ್ಕಳ ಅರಳುವಿಕೆ.  ಪರಿಸರ, ಸಂಸ್ಕಾರ, ಸಾಹಿತ್ಯ, ಕಲೆ ಇವುಗಳೆಲ್ಲಾ ಪೂರಕವಾಗಿದ್ದಾಗ ಮಾತ್ರ ಮಕ್ಕಳ ಪೂರ್ಣ ಮಾನಸಿಕ ವಿಕಸನ ಸಾಧ್ಯ.   ವೃಷ್ಟಿಯಿಂದ ಸಮಷ್ಟಿ, ಪ್ರತಿಯೊಬ್ಬ ಮಗುವೂ ಶಕ್ತಿಯಾದಾಗಲೇ ರಾಷ್ಟ್ರದ ಬೆಳೆವಣಿಗೆ, ರಾಷ್ಟ್ರದ ಚಾರಿತ್ರ್ಯ, ರಾಷ್ಟ್ರದ ಸಾಮರ್ಥ್ಯ.  ಈ ಪೂರ್ಣತ್ವಕ್ಕಾಗಿಯೇ ಸತತ ಅನ್ವೇಷಣೆ ಮತ್ತು ಪ್ರಯತ್ನಶೀಲತೆಯ ಅಗತ್ಯ.
    ಯಾವ ಜೀವಿಯಲ್ಲೇ ಆಗಲಿ ಅದರ ಒಂದೊಂದು ವರ್ತನೆಗೆ ಸಂಬಂಧಪಟ್ಟಂತೆ ಒಂದೊಂದು ಮನೋವೃತ್ತಿ ಇರುತ್ತದೆ.  ಮೂಕ ಪ್ರಾಣಿಗಳ ಮತ್ತು ಸಣ್ಣ ಮಕ್ಕಳ ಮನೋವೃತ್ತಿಯನ್ನು ನಡವಳಿಕೆ, ಹೇಳಿಕೆಗಳ ಮೂಲಕ ನಾವು ಊಹಿಸಿ ತಿಳಿಯಬೇಕೇ ಹೊರತು ನೇರವಾಗಿ ತಿಳಿಯುವುದು ಅಸಾಧ್ಯ.  ಮಕ್ಕಳು ಬೆಳೆದು ಶಾಲೆಗೆ ಹೋಗಿ ಜ್ಞಾನ ಸಂಪಾದಿಸುವುದರ ಜೊತೆಗೆ ಅವರಿಗೆ ನೈತಿಕ ಬುನಾದಿಯಾಗಿ ಪ್ರಾಮಾಣಿಕತೆ, ಗುರು ಹಿರಿಯರಿಗೆ ಗೌರವ ತೋರಿಸುವುದು, ವಿನಯ ಶೀಲತೆ, ಶ್ರದ್ಧೆ, ಅಚ್ಚುಕಟ್ಟುತನ ಇವುಗಳನ್ನು ಕಲಿಸಿಕೊಟ್ಟು ಅವರ ಚಾರಿತ್ರ್ಯನಿರ್ಮಾಣ ಮಾಡುವ ಮನೋಶಿಕ್ಷಣದ ಅವಶ್ಯಕತೆಯೂ ಇದೆ.

    Original price was: $1.08.Current price is: $0.65.
    Add to basket
  • -40%

    ಹುಡುಗಾಟ- ಹುಡುಕಾಟ

    0

    ಹುಡುಗಾಟ- ಹುಡುಕಾಟ

    ‘ತರಂಗ’ ವಾರಪತ್ರಿಕೆ ಧಾರವಾಹಿ
    (ಹದಿಹರೆಯದವರಿಗಾಗಿ )

    ಇದು ಜನಪ್ರಿಯ ‘ತರಂಗ ವಾರಪತ್ರಿಕೆ’ಯಲ್ಲಿ ಧಾರಾವಾಹಿಯಾಗಿ ಹರಿದುಬಂದ ಹದಿ ಹರೆಯದವರಿಗಾಗಿ ಬರೆದ ಕಾದಂಬರಿ.  ಸರಿಯಾದ ಕ್ರಮದಲ್ಲಿ ಬೆಳೆದ ಮಕ್ಕಳ ಮನಸ್ಸಿನಲ್ಲಿ ಅದೆಷ್ಟು ಆತ್ಮವಿಶ್ವಾಸವಿರುತ್ತದೆ, ಎಂತಹಾ ಕಷ್ಟ ಬಂದರೂ ಅದನ್ನು ಹೇಗೆ ಎದುರಿಸುತ್ತಾರೆ, ಎನ್ನುವುದನ್ನು ವಿವರಿಸುವ ಪಶ್ಚಿಮಘಟ್ಟದ ಒಳಗನ್ನು ಸ್ವಲ್ಪವಾದರೂ ತೆರೆದಿಡಲು ಯತ್ನಿಸಿದ ಕಾದಂಬರಿ.  ಕಷ್ಟ ಬಂದಾಗ ಮನುಷ್ಯ ಇನ್ನಿಲ್ಲದಂತೆ ಹೋರಾಡುತ್ತಾನೆ.  ದೊಡ್ಡವರಾದರೂ ಅಷ್ಟೆ; ಮಕ್ಕಳೂ ಅಷ್ಟೆ.  ಪಶ್ಚಿಮಘಟ್ಟದ ಇದು ಜನಪ್ರಿಯ ‘ತರಂಗ ವಾರಪತ್ರಿಕೆ’ಯಲ್ಲಿ ಧಾರಾವಾಹಿಯಾಗಿ ಹರಿದುಬಂದ ಹದಿ ಹರೆಯದವರಿಗಾಗಿ ಬರೆದ ಕಾದಂಬರಿ.  ಸರಿಯಾದ ಕ್ರಮದಲ್ಲಿ ಬೆಳೆದ ಮಕ್ಕಳ ಮನಸ್ಸಿನಲ್ಲಿ ಅದೆಷ್ಟು ಆತ್ಮವಿಶ್ವಾಸವಿರುತ್ತದೆ, ಎಂತಹಾ ಕಷ್ಟ ಬಂದರೂ ಅದನ್ನು ಹೇಗೆ ಎದುರಿಸುತ್ತಾರೆ, ಎನ್ನುವುದನ್ನು ವಿವರಿಸುವ ಪಶ್ಚಿಮಘಟ್ಟದ ಒಳಗನ್ನು ಸ್ವಲ್ಪವಾದರೂ ತೆರೆದಿಡಲು ಯತ್ನಿಸಿದ ಕಾದಂಬರಿ.  ಕಷ್ಟ ಬಂದಾಗ ಮನುಷ್ಯ ಇನ್ನಿಲ್ಲದಂತೆ ಹೋರಾಡುತ್ತಾನೆ.  ದೊಡ್ಡವರಾದರೂ ಅಷ್ಟೆ; ಮಕ್ಕಳೂ ಅಷ್ಟೆ.  ಪಶ್ಚಿಮಘಟ್ಟದ ಅರಣ್ಯ ಈಗಲೂ ನಿಗೂಢವೇ.  ದಾರಿ ತಿಳಿದವರೂ ಅದರೊಳಗೆ ಸುತ್ತಿ ಬೆವರುವುದುಂಟು.  ದಾರಿ ತಿಳಿಯದ ಚಾರಣಿಗರೇ ಮಳೆಗಾಲದಲ್ಲಿ ದಿಕ್ಕು-ದೆಸೆ ತಿಳಿಯದೆ ಬದುಕು ಕಳೆದುಕೊಂಡಿರುವುದೂ ಉಂಟು. ಅರಣ್ಯವೆಂದರೇನೆಂದೇ ತಿಳಿಯದ ಮೂವರು ಉತ್ಸಾಹಿ ಹದಿಹರೆಯದವರು ಅಕಸ್ಮಾತ್ತಾಗಿ ಇಂತಹಾ ದಟ್ಟವಾದ ಅರಣ್ಯದೊಳಗೆ ಸಿಕ್ಕಿ ಹಾಕಿಕೊಂಡು ಬದುಕಿಗಾಗಿ ಹೋರಾಡುವುದನ್ನು ವಿವರಿಸುವುದೇ ಹುಡುಗಾಟವಾಡಲು ಹೋಗಿ ಹುಡುಕಾಟಕ್ಕೆ ದಾರಿಯಾದ ಈ ಹದಿಹರೆಯದವರ ಕಾದಂಬರಿ. ಆ ಪ್ರಾಯದವರ ಮನೋಭಾವ ಹೇಗಿರುತ್ತದೆ? ಅದರೊಂದು ಚಿತ್ರಣ ನೀಡುವ ಯತ್ನವೂ ಇಲ್ಲಿದೆ.  ‘ಕಷ್ಟ ಬಂದಾಗ ಎದೆಗುಂದದೆ ಅದನ್ನು ಎದುರಿಸುವುದು ಹೇಗೆ?’ ಎಂಬ ಚಿಂತನೆ ಹೇಗೆ ಕಷ್ಟವನ್ನು ಕೊನೆಗೂ ದೂರ ಮಾಡುತ್ತದೆ ಎನ್ನುವುದನ್ನು ಹದಿಹರೆಯದವರ ಜೊತೆಗೆ ದೊಡ್ಡವರೂ ಓದಬಹುದು.

    Original price was: $1.56.Current price is: $0.94.
    Add to basket
  • -40%

    ಮಕ್ಕಳ ಮನೋಲೋಕ – ೧  ಹಕ್ಕಿಯ ಹೆಗಲೇರಿ

    0

    ಮಕ್ಕಳ ಮನೋಲೋಕ – ೧  ಹಕ್ಕಿಯ ಹೆಗಲೇರಿ
    (ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಸನ ಮಾಲೆ )

    ನಾವು ಮಕ್ಕಳಿಗಾಗಿ ಮಾಡುವ ಎಲ್ಲ ಪ್ರಯತ್ನಗಳ ಅಂತಿಮ ಗುರಿ-ಮಕ್ಕಳ ಅರಳುವಿಕೆ.  ಪರಿಸರ, ಸಂಸ್ಕಾರ, ಸಾಹಿತ್ಯ, ಕಲೆ ಇವುಗಳೆಲ್ಲಾ ಪೂರಕವಾಗಿದ್ದಾಗ ಮಾತ್ರ ಮಕ್ಕಳ ಪೂರ್ಣ ಮಾನಸಿಕ ವಿಕಸನ ಸಾಧ್ಯ.   ವೃಷ್ಟಿಯಿಂದ ಸಮಷ್ಟಿ, ಪ್ರತಿಯೊಬ್ಬ ಮಗುವೂ ಶಕ್ತಿಯಾದಾಗಲೇ ರಾಷ್ಟ್ರದ ಬೆಳೆವಣಿಗೆ, ರಾಷ್ಟ್ರದ ಚಾರಿತ್ರ್ಯ, ರಾಷ್ಟ್ರದ ಸಾಮರ್ಥ್ಯ.  ಈ ಪೂರ್ಣತ್ವಕ್ಕಾಗಿಯೇ ಸತತ ಅನ್ವೇಷಣೆ ಮತ್ತು ಪ್ರಯತ್ನಶೀಲತೆಯ ಅಗತ್ಯ.
    ಯಾವ ಜೀವಿಯಲ್ಲೇ ಆಗಲಿ ಅದರ ಒಂದೊಂದು ವರ್ತನೆಗೆ ಸಂಬಂಧಪಟ್ಟಂತೆ ಒಂದೊಂದು ಮನೋವೃತ್ತಿ ಇರುತ್ತದೆ.  ಮೂಕ ಪ್ರಾಣಿಗಳ ಮತ್ತು ಸಣ್ಣ ಮಕ್ಕಳ ಮನೋವೃತ್ತಿಯನ್ನು ನಡವಳಿಕೆ, ಹೇಳಿಕೆಗಳ ಮೂಲಕ ನಾವು ಊಹಿಸಿ ತಿಳಿಯಬೇಕೇ ಹೊರತು ನೇರವಾಗಿ ತಿಳಿಯುವುದು ಅಸಾಧ್ಯ.  ಮಕ್ಕಳು ಬೆಳೆದು ಶಾಲೆಗೆ ಹೋಗಿ ಜ್ಞಾನ ಸಂಪಾದಿಸುವುದರ ಜೊತೆಗೆ ಅವರಿಗೆ ನೈತಿಕ ಬುನಾದಿಯಾಗಿ ಪ್ರಾಮಾಣಿಕತೆ, ಗುರು ಹಿರಿಯರಿಗೆ ಗೌರವ ತೋರಿಸುವುದು, ವಿನಯ ಶೀಲತೆ, ಶ್ರದ್ಧೆ, ಅಚ್ಚುಕಟ್ಟುತನ ಇವುಗಳನ್ನು ಕಲಿಸಿಕೊಟ್ಟು ಅವರ ಚಾರಿತ್ರ್ಯನಿರ್ಮಾಣ ಮಾಡುವ ಮನೋಶಿಕ್ಷಣದ ಅವಶ್ಯಕತೆಯೂ ಇದೆ.

    Original price was: $1.08.Current price is: $0.65.
    Add to basket
  • -40%

    ಮಧುರವಾಗಲಿ ದಾಂಪತ್ಯ

    0
    Original price was: $1.44.Current price is: $0.86.
    Add to basket
  • -40%

    ಭಾರತ, ಇಸ್ಲಾಂ ಮತ್ತು ಗಾಂಧಿ

    0

    ಭಾರತ, ಇಸ್ಲಾಂ ಮತ್ತು ಗಾಂಧಿ:
    ಶ್ರೀ ಅರವಿಂದರ ಭವಿಷ್ಯವಾಣಿ
    ಮತ್ತು ಇತರ ಲೇಖನಗಳು
    ಗಾಂಧಿಯವರ ಮೇಲೂ ಹೆಚ್ಚು ಬೆಳಕು ಚೆಲ್ಲುವ, ದಿಗ್ದರ್ಶಕವಾದ ಸೂಕ್ತ ಲೇಖನಗಳು ಎಂದು ಭಾವಿಸುತ್ತೇನೆ. ಈಗ ನಮ್ಮೆದುರು ಇರುವುದು ರಾಷ್ಟ್ರ ರಕ್ಷಣೆಯ ಮಹಾ ಹೊಣೆ. ಅದಕ್ಕೆ ವಿಘ್ನವಾಗಿರುವ ಎಲ್ಲ ದುಷ್ಟ ವಿಚಾರಗಳನ್ನೂ, ಅಂಥ ಪರಂಪರೆಗಳನ್ನೂ, ಅವುಗಳನ್ನು ಹುಟ್ಟು ಹಾಕಿದವರನ್ನೂ ನಿರ್ದಾಕ್ಷಿಣ್ಯವಾಗಿ ಬಯಲು ಮಾಡಿ, ಅವುಗಳನ್ನು ಮೆಟ್ಟಿಯೇ ನಾವು ಮುಂದೆ ನಡೆದ ಹೊರತು ನಮಗೆ ಭವಿಷ್ಯವಿಲ್ಲ. ಕಣ್ಣು ಮುಚ್ಚಿ ಒಪ್ಪುವ, ಯಾರನ್ನೂ ಪೂಜಿಸುವ ಅಂಧಶ್ರದ್ಧೆ ಭಾರತೀಯ ಪರಂಪರೆಗೆ ದೂರವಾದುದು.

    Original price was: $1.80.Current price is: $1.08.
    Add to basket
  • -40%

    ಎಲ್ಲರಂಥವನಲ್ಲ ನನ್ನಪ್ಪ!

    0

    ಎಲ್ಲರಂಥವನಲ್ಲ ನನ್ನಪ್ಪ !
    ಅಪ್ಪನ ಕುರಿತ ಮಿಡಿತಗಳು
    ಈ ಪುಸ್ತಕದ ಮೂವತ್ತೇಳು ಲೇಖನಗಳು ಅಪ್ಪನ ಮೂವತ್ತೇಳು ಮುಖಗಳನ್ನು ಚಿತ್ರಿಸಿವೆ. ಮಗುವಿನ ಕಷ್ಟವನ್ನು ನೋಡಲಾರದೆ ಗಳಗಳನೆ ಅಳುವ ಅಪ್ಪ, ಮಗುವನ್ನು ಸರಿಯಾದ ಮಾರ್ಗದಲ್ಲಿ ನಡೆಯಿಸಲು ಕಠಿಣವಾಗಿ ಶಿಕ್ಷಿಸುವ ಅಪ್ಪ, ಮಗುವಿನೊಡನೆ ಗೆಳೆಯನಂತೆ ವರ್ತಿಸುವ ಅಪ್ಪ ಇವರೆಲ್ಲರೂ ಅಪ್ಪನ ಕರ್ತವ್ಯದಿಂದ ಪ್ರೇರಿತರಾದವರೆ. ಪ್ರತಿ ನಿಯಮಕ್ಕೊಂದು ಅಪವಾದವಿರುತ್ತದೆ ಎನ್ನುವಂತೆ, ತನ್ನವರನ್ನು ಮೋಸಗೊಳಿಸಿ ಓಡಿ ಹೋದಂತಹ ಅಪ್ಪನೂ ಇಲ್ಲಿದ್ದಾನೆ.
    ಅಪ್ಪನ ವ್ಯಕ್ತಿತ್ವವನ್ನು ಚಿತ್ರಿಸುತ್ತಿರುವಾಗಲೆ, ಇಲ್ಲಿಯ ಲೇಖನಗಳುಹಳೆಯ ತಲೆಮಾರಿನವರ ಜಗತ್ತಿನ ಚಿತ್ರವನ್ನೂ ನಮ್ಮೆದುರಿಗೆ ಇಡುತ್ತವೆ. ಆ ಕಾಲದ ನೀತಿ, ನಿಯಮಗಳು, ಆದರ್ಶ, ಹಿರಿಯರ ವರ್ತನೆಯ ಕ್ರಮ ಇವುಗಳ ಅನಾವರಣವೂ ಇಲ್ಲಿರುವ ಲೇಖನಗಳಲ್ಲಿ ಆಗಿದೆ.

    Original price was: $1.44.Current price is: $0.86.
    Add to basket
  • -40%

    ಮಕ್ಕಳೊಡನೆ ಆಟ-ಪಾಠ, ಒಡನಾಟ

    0

    ಮಕ್ಕಳೊಡನೆ ಆಟ-ಪಾಠ, ಒಡನಾಟ:

    ಇದು `ನಮ್ಮ ಮಕ್ಕಳು ಆಟ-ಪಾಠ, ಒಡನಾಟ’ ಎಂಬ ಹೆಸರಿನಲ್ಲಿ ಪ್ರಸಿದ್ಧ ದಿನಪತ್ರಿಕೆ `ಪ್ರಜಾವಾಣಿ’ ಯಲ್ಲಿ ಬರೆದ ಮತ್ತೊಂದು ಲೇಖನ ಮಾಲೆ. ಮಕ್ಕಳಿಂದ ಆನಂದ ಪಡೆಯಬೇಕಾದರೆ ಚಿಕ್ಕ ಮಕ್ಕಳ ಹಾಗೂ ಹದಿ ಹರೆಯದವರ ಶಾರೀರಕ ಮತ್ತು ಮಾನಸಿಕ ಬದಲಾವಣೆಗಳ ಬಗ್ಗೆ ಹೆತ್ತವರೂ ತಿಳಿದಿರಬೇಕು. ಇಲ್ಲದಿದ್ದರೆ ಮಕ್ಕಳೇಕೆ ಹಾಗೆ ಆಡುತ್ತಾರೆ ಎಂದೇ ತಿಳಿಯುವುದಿಲ್ಲ. ಮಕ್ಕಳ ಗುಣ-ಸ್ವಭಾವಗಳಂತೆ ಮಕ್ಕಳ ಸಮಸ್ಯೆಗಳೂ ಹಲವು. ತಿಳಿದಷ್ಟೂ ಇನ್ನೂ ತುಂಬ ಬಾಕಿ ಉಳಿದಿದೆ ಎನ್ನುವಷ್ಟು! ಈಗಂತೂ ಗೊಂದಲ ಮತ್ತು ಕಗ್ಗಂಟಾಗಿರುವ ಮಕ್ಕಳನ್ನು ಬೆಳೆಸುವುದರ ಬಗ್ಗೆ, ಅವರ ವಿದ್ಯಾಭ್ಯಾಸದ ಬಗ್ಗೆ ಬರೆಯುವುದು ಕೂಡ ಕಷ್ಟ ಎನಿಸುತ್ತಿದೆ. ಏಕೆಂದರೆ ಬಹಳಷ್ಟು ಹೆತ್ತವರೆ ಮಕ್ಕಳ ಎದುರು ಆಧುನಿಕ ತಂತ್ರಜ್ಞಾನದ ದುರ್ಲಾಭ ಪಡೆಯುವ ವ್ಯವಸ್ಥೆ ಮಾಡಿ, ಕೈ ತುಂಬ ಹಣ ನೀಡಿ, ತಪ್ಪುದಾರಿಯಲ್ಲಿ ನಡೆಸಿ ತಮ್ಮದೇ ಸರಿ ಎಂದು ಭಾವಿಸಿ ಮತ್ತೆ ಅವರನ್ನು ದೂರುವುದು ಕಾಣುತ್ತಿದ್ದೇವೆ. ಹಾಗಾಗಿ ಮಕ್ಕಳ ಬಗ್ಗೆ ತಿಳಿದಷ್ಟೂ ಅದು ಕಮ್ಮಿಯೇ ಎನಿಸುತ್ತಿದೆ. ಆಧುನಿಕತೆ ಬೆಳೆಯುತ್ತಾ ತಂತ್ರಜ್ಞಾನದ ಅಭಿವೃದ್ಧಿಯೂ ಆಗಿ ದಿನನಿತ್ಯ ಎಂಬಂತೆ ಆಧುನಿಕ ವಸ್ತುಗಳೂ ಮಾರುಕಟ್ಟೆಗೆ ಬರುತ್ತವೆ. ಮಾರುವವರು ಅದರ ಪ್ರಯೋಜನದ ಬಗ್ಗೆ ಇನ್ನಿಲ್ಲದಷ್ಟು ಹೇಳಿ ಆಮಿಷ ಒಡ್ಡುತ್ತಾರೆ. ಆದರೆ ಅದರಿಂದಾಗುವ ತೊಂದರೆಗಳ ಬಗ್ಗೆ ಚಕಾರ ಎತ್ತುವುದಿಲ್ಲ. ತಿಳಿದುಕೊಳ್ಳುವ ಹಂಬಲವೂ ಕಮ್ಮಿ. ಏಕೆಂದರೆ ಅದು ಪ್ರತ್ಯಕ್ಷವಾಗಿ ಕಾಣದೆ ಪರೋಕ್ಷವಾಗಿ ಕಾಡುತ್ತದೆ. ಪ್ರತ್ಯಕ್ಷವಾದ ಸಂಗತಿಗಳೇ ಅರಿವಿಗೆ ಬಾರದಿರುವಾಗ ಇನ್ನು ಪರೋಕ್ಷವಾಗಿದ್ದನ್ನು ಅರಿಯುವುದು ಹೇಗೆ? ಸಮಸ್ಯೆಗಳು ಉಲ್ಬಣಿಸಿದಾಗಲೇ ಅದರ ಅರಿವಾಗುವುದು! ಅವೆಲ್ಲದರ ಅರಿವಿನೊಂದಿಗೆ ಉದ್ವೇಗ ರಹಿತವಾಗಿ ಮಕ್ಕಳನ್ನು ಬೆಳೆಸುತ್ತಾ ಅವರೊಡನೆ ಆಟೋಟಗಳಲ್ಲಿ ಭಾಗಿಯಾಗಿ ಅವರನ್ನು ಬೆಳೆಸುತ್ತಲೇ ಅದರ ಆನಂದ ಅನುಭವಿಸಬೇಕು. ಅವರ ಸಮಸ್ಯೆಗಳಿಗೂ ಉತ್ತರವಾಗಬೇಕು.

    Original price was: $1.68.Current price is: $1.01.
    Add to basket